Asianet Suvarna News Asianet Suvarna News

ಮಂಗಳೂರು ಆಟೋ ಸ್ಫೋಟ ಪ್ರಕರಣ: ಕೃತ್ಯಕ್ಕೆ ನಕಲಿ ಆಧಾರ್‌ ಕಾರ್ಡ್‌ ಬಳಕೆ

ಮಂಗಳೂರು ಆಟೋ ಸ್ಫೋಟಕ್ಕೆ ಸಂಬಂಧಿಸಿದಂತೆ, ನಕಲಿ ಆಧಾರ್ ಕಾರ್ಡ್ ಬಳಕೆ ಮಾಡಿ ಕೃತ್ಯ ಎಸಗಲಾಗಿದೆ.

ಮಂಗಳೂರು ಕಂಕನಾಡಿ ಸಮೀಪ ಆಟೋದಲ್ಲಿ ಕುಕ್ಕರ್ ಒಂದು ಸ್ಫೋಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಾಯಗೊಂಡಿರುವ ಪ್ರಯಾಣಿಕನ ಬಳಿ ಪತ್ತೆಯಾದ ಆಧಾರ್ ಕಾರ್ಡ್​ ನಕಲಿ ಎಂಬ ಮಾಹಿತಿ ಲಭ್ಯವಾಗಿದೆ. ಶಂಕಿತ ವ್ಯಕ್ತಿಯು ಆಧಾರ್‌ ಕಾರ್ಡ್‌ ನಕಲು ಮಾಡಿರುವುದು ಪಕ್ಕಾ ಎನ್ನಲಾಗಿದ್ದು, ಹುಬ್ಬಳ್ಳಿ ಮೂಲದ ಪ್ರೇಮ್‌ ರಾಜ್‌ ಎನ್ನುವರ ಆಧಾರ್‌ ಕಾರ್ಡ್‌ ನಕಲು ಮಾಡಿ, ಫೋಟೋ ಮಾತ್ರ ಚೇಂಜ್‌ ಮಾಡಿದ್ದಾರೆ. ಈ ಹಿಂದೆ ಪ್ರೇಮ್‌ ರಾಜ್‌ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು. ಸಧ್ಯ ತುಮಕೂರಿನಲ್ಲಿ ಪ್ರೇಮ್‌ ರಾಜ್‌ ತುಮಕೂರಿನಲ್ಲಿ ಕೆಲಸ ಮಾಡುತ್ತಿದ್ದು, ನಮ್ಮ ಮಗ ಅಮಾಯಕ, ಘಟನೆಗೂ ಅವನಿಗೂ ಸಂಬಂಧ ಇಲ್ಲ ಎಂದ ಪ್ರೇಮ್‌ ರಾಜ್‌ ಪೋಷಕರು ಹೇಳಿದ್ದಾರೆ.

Bengaluru: ಟಿವಿ, ಫ್ರಿಡ್ಜ್, ಗೀಸರ್‌ಗಳ ರಿಪೇರಿ ಹೆಸರಿನಲ್ಲಿ ವಂಚಿಸುತ್ತಿದ್ದವನ ಬಂಧನ