Asianet Suvarna News Asianet Suvarna News

ಹಾಸನ ನಗರಸಭೆ JDS ಸದಸ್ಯ ಪ್ರಶಾಂತ್ ಹತ್ಯೆ, ನಗರದಲ್ಲಿ ಭಯದ ವಾತವಾರಣ

 ಆಟೋದಲ್ಲಿ ಬಂದ ಹಂತಕರು ಹಾಡಹಗಲೇ ಹಾಸನಾ ನಗರಸಭಾ ಸದಸ್ಯರೊಬ್ಬರನ್ನು ಬರ್ಬರವಾಗಿ ಲಾಂಗು, ಮಚ್ಚುಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆನಡೆದಿದೆ. 

ಹಾಸನ (ಜೂ. 02):  ಆಟೋದಲ್ಲಿ ಬಂದ ಹಂತಕರು ಹಾಡಹಗಲೇ ನಗರಸಭಾ ಸದಸ್ಯರೊಬ್ಬರನ್ನು ಬರ್ಬರವಾಗಿ ಲಾಂಗು, ಮಚ್ಚುಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ (Murder) ಮಾಡಿದ ಘಟನೆ ನಡೆದಿದೆ. 

ವ್ಯವಹಾರಕ್ಕೆ ಅಡ್ಡಿಯಾಗಿದ್ದ ತಮ್ಮನನ್ನೇ ಕೊಂದ ಅಣ್ಣ: ದೆವ್ವವಾಗಿ ಕಾಡಬಾರದು ಎಂದು ಹಿಮ್ಮಡಿ ಕತ್ತರಿಸಿದ್ದ!

ಘಟನೆಯಿಂದ ಇಡೀ ಹಾಸನ (Hassan) ಬೆಚ್ಚಿಬಿದ್ದಿದೆ. ನಗರದ 16ನೇ ವಾರ್ಡ್‌ ಶಾಂತಿನಗರದ ಜೆಡಿಎಸ್‌ ನಗರಸಭಾ ಸದಸ್ಯ ಪ್ರಶಾಂತ್‌ ಹತ್ಯೆಗೊಳಗಾದವರು. ಪ್ರಶಾಂತ್‌ ತಮ್ಮ ತಮ್ಮ ಮನೆಗೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ನಗರದ ಜವೇನಹಳ್ಳಿ ಮಠದ ಸಮೀಪ ಆಟೋದಲ್ಲಿ ಹಿಂಬಾಲಿಸಿಕೊಂಡು ಬಂದ ಹಂತಕರು ಅಡ್ಡಗಟ್ಟಿ ಮನಸೋಯಿಚ್ಛೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಅವರ ಎರಡೂ ಮುಂಗೈಗಳು ತುಂಡಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಹತ್ಯೆಗೀಡಾಗಿರುವ ಪ್ರಶಾಂತ್‌ ತಂದೆ ಹಾ.ರಾ.ನಾಗರಾಜ್‌ ಕೂಡ ನಗರಸಭೆ ಸದಸ್ಯರಾಗಿದ್ದವರು.

 

Video Top Stories