Asianet Suvarna News Asianet Suvarna News

'ಕುರುಬನ ರಾಣಿ' ಆಗ್ತೀನಿ ಅಂದ ಮಗಳ ಕಥೆಯನ್ನೇ ಮುಗಿಸಿದ ಅಪ್ಪ!

ಹುಡುಗಿ ಲಿಂಗಾಯತ, ಹುಡುಗ ಕುರುಬ. ಆದರೆ ಇಬ್ಬರ ಪ್ರೀತಿಗೆ ಹುಡುಗಿಯ ಅಪ್ಪನ ವಿರೋಧಿತ್ತು. ಮಗಳಿಗೆ ಹೇಳೋದನ್ನೆಲ್ಲಾ ಹೇಳಿದ. ಕೇಳದೇ ಇದ್ದಾಗ, ಸಿನಿಮಾಗೆ ಅಂತಾ ಕರೆದುಕೊಂಡು ಹೋಗಿ ಕೊಲೆ ಮಾಡಿದ ಘಟನೆ ಬಳ್ಳಾರಿ ಜಿಲ್ಲೆಯ ಕುಡತಿನಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಳ್ಳಾರಿ (ನ.10): ಕೆಟ್ಟ ತಂದೆ ಇರ್ತಾನೆ ಆದರೆ,  ಕೆಟ್ಟ ತಾಯಿ ಇರಲ್ಲ ಅನ್ನೋ ಮಾತಿದೆ. ಆದ್ರೆ ತಂದೆ ಎಷ್ಟು ಕೆಟ್ಟವನಾಗಿರುತ್ತಾನೆ ಅನ್ನೋದಕ್ಕೆ ಇವತ್ತಿನ ವರದಿ ಉತ್ತಮ ಉದಾಹರಣೆ.  ಆಕೆ ಇನ್ನೂ 8ನೇ ಕ್ಲಾಸ್ ವಿದ್ಯಾರ್ಥಿನಿ. ಓದು, ಆಟ ಪಾಠ ಅಂದುಕೊಂಡು ಇರಬೇಕಿದ್ದ ಬಾಲಕಿ ಆಕೆ. ಆದರೆ, ಆಕೆ ಪ್ರೀತಿಯ ಬಲೆಗೆ ಬಿದ್ದುಬಿಟ್ಟಿದ್ದಳು.

ಕರುಬ ಜಾತಿಯ ಹುಡುಗನನ್ನು ಬಿಟ್ಟಿರಲಾಗದಷ್ಟಯ ಪ್ರೀತಿಸಿಬಿಟ್ಟಿದ್ದಳು. ಆದರೆ, ಈ ವಿಷ್ಯ ಆಕೆಯ ತಂದೆ ಗೊತ್ತಾಯ್ತು ಅಷ್ಟೇ. ಆಕೆಯ ಬಾಳು ನರಕ ಆಗಿಬಿಟ್ಟಿತು, ಅವಳನ್ನ ಇನ್ನಿಲ್ಲದಂತೆ ಟಾರ್ಚರ್ ಮಾಡಿದ. ಮನಸಿಗೆ ಬಂದಂತೆ ಥಳಿಸಿದ. ಇಷ್ಟಕ್ಕೆ ಅವನ ಕೋಪ ಕಡಿಮೆಯಾಗಲಿಲ್ಲ. ಅವಳನ್ನೇ ಮುಗಿಸೋ ನಿರ್ಧಾರಕ್ಕೆ ಬಂದು ಅವಳನ್ನ ನಾಲೆಗೆ ತಳ್ಳಿಬಿಟ್ಟ. 

ಗಣಿ ಜಿಲ್ಲೆ ಬಳ್ಳಾರಿಯಲ್ಲಿ ನಡೆಯಿತಾ ಮರ್ಯಾದಾ ಹತ್ಯೆ?

ಇದೊಂದು ಪಕ್ಕಾ ಮರ್ಯಾದ ಹತ್ಯೆ ಪ್ರಕರಣ. ಅನ್ಯ ಜಾತಿಯ ಹುಡುಗನನ್ನ ಪ್ರೀತಿಸಿದಳು ಅನ್ನೋ ಒಂದೇ ಕಾರಣಕ್ಕೆ ಹೆತ್ತ ತಂದೆಯೇ ಮಗಳ ಪ್ರಾಣ ತೆಗೆದಿದ್ದಾನೆ. ಮಾಡಿದ ತಪ್ಪಿಗೆ ಜೈಲು ಸೇರಿದ್ದಾನೆ. ಆದರೆ, ಆ ಬಾಲಕಿ ಪ್ರೀತಿಸಿದ ತಪ್ಪಿಗೆ ಜೀವ ಬಿಟ್ಟಿದ್ದಾಳೆ. ಇನ್ನೂ ಫೋನು, ಗೇಮು ಅಂತ ಹೇಳ್ಕೊಂಡು ದಿನವಿಡೀ ಮೊಬೈಲ್ನಲ್ಲಿರುವ ಮಕ್ಕಳ ಪೋಷಕರಿಗೆ ಇದೊಂದು ಪಾಠ.

Video Top Stories