Asianet Suvarna News Asianet Suvarna News

ದೇವರಿಗಾಗಿ ಹೋರಾಡಿದವನನ್ನು ಕೊಂದ್ಬಿಟ್ರು, ಸತ್ತವನ ಹಿಂದೆ ಇಡೀ ಗ್ರಾಮದ ಹೆಣ್ಮಕ್ಳು !

ಅವನು ಫಾರ್ಮಸಿಸ್ಟ್, ಹೊಟ್ಟೆ ಪಾಡಿಗೆ ಮೆಡಿಕಲ್ ಸ್ಟೋರ್ ಇಟ್ಟುಕೊಂಡಿದ್ರೂ ಆ ಗ್ರಾಮದ ಜನರಿಗೆ ಸಣ್ಣ ಪುಟ್ಟ ಖಾಯಿಲೆಗಳಿಗೆ ಔಷಧಿಯನ್ನ ಕಟ್ಟು ಅವರ ಪಾಲಿಗೆ ದೇವರಾಗಿದ್ದ. ಕೊರೊನಾ ಸಮಯದಲ್ಲಂತೂ ಆ ಗ್ರಾಮಕ್ಕೆ ಮಾಡಿದ ಸೇವೆಯನ್ನ ಯಾವತ್ತೂ ಅಲ್ಲಿನ ಜನರು ಮರೆಯೋದಿಲ್ಲ. ಆದ್ರೆ ಇವತ್ತು ಆ ಗ್ರಾಮದ ದೇವರಂತಿದ್ದವನ್ನನ್ನೇ ಮುಗಿಸಿಬಿಟ್ಟಿದ್ದಾರೆ. 

ಬೆಳಗಾವಿ, (ಜೂನ್.23): ಅವನು ಫಾರ್ಮಸಿಸ್ಟ್, ಹೊಟ್ಟೆ ಪಾಡಿಗೆ ಮೆಡಿಕಲ್ ಸ್ಟೋರ್ ಇಟ್ಟುಕೊಂಡಿದ್ರೂ ಆ ಗ್ರಾಮದ ಜನರಿಗೆ ಸಣ್ಣ ಪುಟ್ಟ ಖಾಯಿಲೆಗಳಿಗೆ ಔಷಧಿಯನ್ನ ಕಟ್ಟು ಅವರ ಪಾಲಿಗೆ ದೇವರಾಗಿದ್ದ. ಕೊರೊನಾ ಸಮಯದಲ್ಲಂತೂ ಆ ಗ್ರಾಮಕ್ಕೆ ಮಾಡಿದ ಸೇವೆಯನ್ನ ಯಾವತ್ತೂ ಅಲ್ಲಿನ ಜನರು ಮರೆಯೋದಿಲ್ಲ. ಆದ್ರೆ ಇವತ್ತು ಆ ಗ್ರಾಮದ ದೇವರಂತಿದ್ದವನ್ನನ್ನೇ ಮುಗಿಸಿಬಿಟ್ಟಿದ್ದಾರೆ.

ಪತ್ನಿ ಕೊಂದು, ಮಗಳನ್ನು ಕೊಲ್ಲಲು ಯತ್ನಿಸಿದ ಅಪ್ಪ, ಸತ್ತಂತೆ ನಟಿಸಿದ ಪುತ್ರಿ!

ಕಾರಣ ಈತ ದೇವರಿಗಾಗಿ ಹೋರಾಟ ಮಾಡಿದ್ದ. ದೇವಸ್ಥಾನದ ಜಾಗವನ್ನ ಒತ್ತುವರಿ ಮಾಡಲು ಯತ್ನಿಸಿದ್ದ ದುಷ್ರ್ಮಿಗಳ ವಿರುದ್ಧ ನಿಂತಿದ್ದ ಫಾರ್ಮಸಿಸ್ಟ್ ಇವತ್ತು ಅದೇ ದೇವಸ್ಥಾನದ ಎದುರೇ ಪ್ರಾಣಬಿಟ್ಟಿದ್ದಾನೆ, ಹೀಗೆ ದೇಏವರಿಗಾಗಿ ಹೋರಾಡಿ ಕೊನೆಗೆ ಅದೇ ದೇವರೆದುರು ಪ್ರಾಣ ಬಿಟ್ಟ ಸಾಮಾಜಿಕ ಕಾರ್ಯಕರ್ತನ ಕಥೆಯೇ ಇವತ್ತಿನ ಎಫ್.ಐ.ಆರ್..