Asianet Suvarna News Asianet Suvarna News

13 ವರ್ಷಗಳ ಬಳಿಕ 13 ದಿನ ಜೈಲು ಪಾಲಾದ ದರ್ಶನ್..! ಜುಲೈ 4ರವರೆಗೆ ಕಿಲ್ಲಿಂಗ್ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ..!

13 ವರ್ಷಗಳ ನಂತರ ಪರಪ್ಪನ ಅಗ್ರಹಾರಕ್ಕೆ ದರ್ಶನ್..! 
ಈಗ ಅಭಿಮಾನಿಯ ಕೊಲೆ ಮಾಡಿ ಮತ್ತೆ ಜೈಲುವಾಸ..!
ಜುಲೈ 4ರವರೆಗೆ ನಟ ದರ್ಶನ್‌ಗೆ ನ್ಯಾಯಾಂಗ ಬಂಧನ

First Published Jun 23, 2024, 9:04 AM IST | Last Updated Jun 23, 2024, 9:04 AM IST

ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣೆಗೆರೆ ಶೆಡ್‍ನಲ್ಲಿ ರೇಣುಕಾಸ್ವಾಮಿಯ ಬರ್ಬರ ಹತ್ಯೆ(Renukaswamy murder case) ಮಾಡಲಾಗಿತ್ತು. ಈ ಪ್ರಕರಣದಲ್ಲಿ ಜೂನ್‌ 11 ರಂದು ಮೈಸೂರಿನ ಜಿಮ್‍ನಲ್ಲಿ ನಟ ದರ್ಶನ್(Darshan) ಬಂಧಿಸಲಾಗಿತ್ತು. ಬಳಿಕ ಮೆಡಿಕಲ್ ಟೆಸ್ಟ್ ನಡೆಸಿ ಕೋರ್ಟ್‍ಗೆ ದರ್ಶನ್ ಮತ್ತು ಗ್ಯಾಂಗ್ ಹಾಜರು ಪಡಿಸಲಾಗಿತ್ತು. ರೇಣುಕಾಸ್ವಾಮಿ ಭೀಕರ ಮರ್ಡರ್‌ಗೆ ಸಂಬಂಧಿಸಿದಂತೆ 139 ಸಾಕ್ಷ್ಯವನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಬಹುತೇಕ ವಸ್ತುಗಳನ್ನು ಸೀಜ್ ಮಾಡಲಾಗಿದೆ. ಇದೀಗ ಮತ್ತೆ ನಟ ದರ್ಶನ್‌ 13 ವರ್ಷಗಳ ನಂತರ ಪರಪ್ಪನ ಅಗ್ರಹಾರ ಜೈಲಿಗೆ (Parappana agrahara jail) ಹೋಗಿದ್ದಾರೆ. 2011ರಲ್ಲಿ ಪತ್ನಿ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದು, 13 ವರ್ಷಗಳ ಹಿಂದೆ ಹಾಪ್ ಮರ್ಡರ್ ಮಾಡಿ 28 ದಿನ ಸೆರೆವಾಸ ಅನುಭವಿಸಿದ್ದರು. ಈಗ ಮತ್ತೆ ಕೊಲೆ ಮಾಡಿ ಜೈಲು ಸೇರಿದ್ದಾರೆ.

ಇದನ್ನೂ ವೀಕ್ಷಿಸಿ:  Weekly-Horoscope: ಈ ರಾಶಿಯವರಿಗೆ ಸಾಲ-ಶತ್ರುಗಳ ಬಾಧೆ ಕಾಡಲಿದ್ದು, ಉತ್ತಮ ಕೆಲಸಗಳಿಗೆ ವಿಘ್ನಗಳು ಬರಲಿವೆ..