Asianet Suvarna News Asianet Suvarna News

'ಅತ್ಯಾಚಾರಿಗಳಿಗೆ ಪೊಲೀಸ್,​​ ಸರ್ಕಾರದ ಭಯವಿಲ್ಲ, ಕಾನೂನಿಗೆ ತಿದ್ದುಪಡಿ ಅಗತ್ಯ'

* ಮೈಸೂರು ಗ್ಯಾಂಗ್‌ ರೇಪ್ ಪ್ರಕರಣ
* ಅತ್ಯಾಚಾರಿಗಳಿಗೆ ಕಾನೂನಿಗೆ ತಿದ್ದುಪಡಿ ಅಗತ್ಯ ಎಂದು ಸಚಿವ ಕೆಎಸ್ ಈಶ್ವರಪ್ಪ
* ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಚಿವ 

Minister KS Eshwarappa Reacts On Mysuru Gangrape Case rbj
Author
Bengaluru, First Published Aug 28, 2021, 4:17 PM IST

ಶಿವಮೊಗ್ಗ, (ಆ.28):  ಮೈಸೂರಿನಲ್ಲಿ ನಡೆದ ವಿದ್ಯಾರ್ಥಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

ಶಿವಮೊಗ್ಗದಲ್ಲಿ ಇಂದು (ಆ.28) ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ರಾಜ್ಯದಲ್ಲಿ ಅತ್ಯಾಚಾರಿಗಳಿಗೆ ಸರ್ಕಾರ ಮತ್ತು ಪೊಲೀಸರ ಬಗ್ಗೆ ಭಯವೇ ಇಲ್ಲದಂತಾಗಿದೆ. ಹಾಗಾಗಿ ಮೈಸೂರು ಮಾತ್ರವಲ್ಲ ಎಲ್ಲೆಡೆ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಮರುಕಳಿಸುತ್ತಿವೆ. ಆದ್ದರಿಂದ ಅತ್ಯಚಾರಿಗಳಿಗೆ ಕಠಿಣ ಕಾನೂನು ವಿಧಿಸುವ ಅಗತ್ಯ ಇದೆ. ಅದಕ್ಕಾಗಿ ಈಗಿನ ಕಾನೂನಿಗೆ ತಿದ್ದುಪಡಿ ತರಬೇಕಿದೆ ಎಂದರು.

ಮೈಸೂರು ಗ್ಯಾಂಗ್‌ರೇಪ್: ಆರೋಪಿಗಳ ಸುಳಿವು ಕೊಟ್ಟ ಆ ಒಂದು ಬಸ್‌ ಟಿಕೆಟ್!

ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ನಾನು ಈ ಹಿಂದೆ ವಿಧಾನ‌ ಪರಿಷತ್ ವಿರೋಧ ಪಕ್ಷದ ನಾಯಕನಾಗಿದ್ದಾಗ 6 ವರ್ಷದ ಮಗುವಿನ‌ ಮೇಲೆ‌ ದುಷ್ಕರ್ಮಿಗಳು ಅತ್ಯಾಚಾರ ನಡೆಸಿದ್ದರು. ಆಗಲೂ ನಾನು‌ ಘಟನೆಯನ್ನು ಖಂಡಿಸಿದ್ದೆ‌. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡುವ ವಿಷಯದಲ್ಲಿ ಕಾನೂನು ತಿದ್ದುಪಡಿ ಮಾಡುವುದಾಗಿ‌ ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದ್ದರು ಎಂದು ಹೇಳಿದರು.

ಈಗಲೂ‌ ಹಿಂದಿನ‌ ಕಾನೂನೇ ಜಾರಿಯಲ್ಲಿದೆ. ಘಟನೆ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆ ಸಹಜವಾಗಿದೆ. ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಪೊಲೀಸರು ಶಂಕಿತ ದಾಳಿಕಾರರ ಅಪರಾಧಿಗಳನ್ನು ಬಂಧಿಸಿರುವ ಕೆಲಸ ಮಾಡಿದ್ದಾರೆ. ಯಾರಿಗೂ ನೋವು ಮಾಡಬೇಕು ಎಂದು  ಅವರು ಮಾತಾಡಿಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿಕೆಯನ್ನು ಸಮರ್ಥಿಸಿಕೊಂಡರು.

Follow Us:
Download App:
  • android
  • ios