Asianet Suvarna News Asianet Suvarna News

ಬೊಂಬೆನಗ​ರಿ​ಯಲ್ಲಿ ಕು​ಮಾ​ರ​ಸ್ವಾ​ಮಿಯನ್ನು ಮಣಿಸಿ ಯೋ​ಗೇ​ಶ್ವರ್‌ ವಿಧಾ​ನ​ಸೌಧ ಪ್ರವೇ​ಶಿ​ಸು​ತ್ತಾರಾ?

ರಾಜ​ಕೀ​ಯ​ವಾಗಿ ಬದ್ಧ ವೈರಿ​ಗ​ಳಾ​ಗಿ​ರುವ ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.​ಕು​ಮಾ​ರ​ಸ್ವಾ​ಮಿ ಹಾಗೂ ಮಾಜಿ ಸಚಿವ ಸಿ.ಪಿ.​ಯೋ​ಗೇ​ಶ್ವರ್‌ ಮುಖಾ​ಮುಖಿ​ಯಾ​ಗು​ತ್ತಿ​ರು​ವ ಕಾರಣ ಬೊಂಬೆ​ನಾಡು ಚನ್ನ​ಪ​ಟ್ಟಣ ಹೈ ವೋಲ್ಟೇಜ್‌ ಕ್ಷೇತ್ರ​ವಾ​ಗಿ ರಾಜ್ಯದ ಗಮನ ಸೆಳೆ​ದಿದೆ. 

Karnataka Election 2023 Competition between HD Kumaraswamy and CP Yogesgwar in Channapatna Constituency gvd
Author
First Published May 6, 2023, 9:29 AM IST

ರಾಮ​ನ​ಗರ (ಮೇ.06): ರಾಜ​ಕೀ​ಯ​ವಾಗಿ ಬದ್ಧ ವೈರಿ​ಗ​ಳಾ​ಗಿ​ರುವ ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.​ಕು​ಮಾ​ರ​ಸ್ವಾ​ಮಿ ಹಾಗೂ ಮಾಜಿ ಸಚಿವ ಸಿ.ಪಿ.​ಯೋ​ಗೇ​ಶ್ವರ್‌ ಮುಖಾ​ಮುಖಿ​ಯಾ​ಗು​ತ್ತಿ​ರು​ವ ಕಾರಣ ಬೊಂಬೆ​ನಾಡು ಚನ್ನ​ಪ​ಟ್ಟಣ ಹೈ ವೋಲ್ಟೇಜ್‌ ಕ್ಷೇತ್ರ​ವಾ​ಗಿ ರಾಜ್ಯದ ಗಮನ ಸೆಳೆ​ದಿದೆ. ಈ ಬಾರಿಯ ಚುನಾ​ವ​ಣೆ ಕ್ಷೇತ್ರ​ದಲ್ಲಿ ಪಕ್ಷ ಹಾಗೂ ವೈಯಕ್ತಿಕ ನೆಲೆಗಟ್ಟಿನಲ್ಲಿ ನಡೆಯುತ್ತಿದೆ. ಹೀಗಾಗಿ, ಕ್ಷೇತ್ರ​ದಲ್ಲಿ ಜೆಡಿ​ಎಸ್‌ ಅಭ್ಯರ್ಥಿ ಕುಮಾ​ರ​ಸ್ವಾಮಿ ಮತ್ತು ಬಿಜೆಪಿ ಹುರಿ​ಯಾಳು ಸಿ.ಪಿ.​ಯೋ​ಗೇ​ಶ್ವರ್‌ ನಡುವೆ ಸಮ​ಬ​ಲದ ಹೋರಾಟ ನಡೆ​ದಿದೆ. ಕಾಂಗ್ರೆಸ್‌ ಅಭ್ಯರ್ಥಿ ಗಂಗಾ​ಧರ್‌ ಕೂಡ ಪೈಪೋಟಿ ನೀಡುವ ಕಸ​ರ​ತ್ತಿ​ನ​ಲ್ಲಿ​ದ್ದಾ​ರೆ. ಈಗಾ​ಗಲೇ ದೇವೇ​ಗೌ​ಡರ ಕುಟುಂಬ​ದ​ ವಿರುದ್ಧ 3 ಬಾರಿ ಸ್ಪರ್ಧಿ​ಸಿ​ರುವ ಯೋಗೇ​ಶ್ವರ್‌ 2 ಬಾರಿ ಸೋತಿದ್ದು, 1 ಬಾರಿ ಗೆಲುವು ಕಂಡಿ​ದ್ದಾರೆ.

ಎಚ್‌ಡಿಕೆಗೆ ಚನ್ನ​ಪ​ಟ್ಟ​ಣವೂ ಅದೃ​ಷ್ಟದ ಕ್ಷೇತ್ರ: ಕುಮಾರಸ್ವಾಮಿಯವರ ಪಾಲಿಗೆ ರಾಮ​ನ​ಗ​ರದ ಜೊತೆಗೆ ಚನ್ನ​ಪ​ಟ್ಟ​ಣವೂ ಅದೃಷ್ಟದ ಕ್ಷೇತ್ರ. 2ನೇ ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಕಲ್ಪಿಸಿದ ಕ್ಷೇತ್ರ ಇದೆನ್ನುವ ಕಾರಣಕ್ಕೆ ಚನ್ನಪಟ್ಟಣದ ಮೇಲೆ ಅವರಿಗೆ ಎಲ್ಲಿಲ್ಲದ ಪ್ರೀತಿ​. ಕ್ಷೇತ್ರಕ್ಕೆ ಸಾವಿ​ರಾರು ಕೋಟಿ ರುಪಾ​ಯಿ​ಗ​ಳನ್ನು ತಂದು ಅಭಿ​ವೃದ್ಧಿ ಕಾರ್ಯ​ಗ​ಳನ್ನು ಮಾಡಿ ಜನ​ಮ​ನ್ನಣೆ ಗಳಿ​ಸಿ​ಕೊಂಡಿ​ದ್ದಾರೆ. ಮುಂದಿನ ಮುಖ್ಯ​ಮಂತ್ರಿ ಅಭ್ಯರ್ಥಿ ಎನ್ನುವ ವಿಶೇ​ಷತೆ ಕ್ಷೇತ್ರ​ದೊಳಗೆ ಸದ್ದು ಮಾಡು​ತ್ತಿ​ದೆ. ಪಂಚ​ರತ್ನ ರಥ​ಯಾತ್ರೆ ಬಳಿಕ ನಾಮ​ಪತ್ರ ಸಲ್ಲಿಸಲಷ್ಟೇ ಕ್ಷೇತ್ರಕ್ಕೆ ಬಂದು ಹೋದ ಕುಮಾ​ರ​ಸ್ವಾಮಿ ಮತ್ತೆ ಬಂದಿಲ್ಲ. ಕ್ಷೇತ್ರ ಮರೆಯುತ್ತಾರೆನ್ನುವ ಆರೋಪ ಬಿಟ್ಟರೆ ಇವರನ್ನು ಕಟ್ಟಿಹಾಕುವ ಇತರ ಯಾವುದೇ ಬಲವಾದ ಕಾರಣಗಳಿಲ್ಲ.

ಬಾಗಲಕೋಟೆ ‘ಕಮಲ’ ಕೋಟೆ ಭೇದಿಸಲು ‘ಕೈ’ ರಣತಂತ್ರ

ಸಿಪಿ​ವೈಗೆ ವೈಯ​ಕ್ತಿಕ ವರ್ಚ​ಸ್ಸು: ಯೋಗೇ​ಶ್ವರ್‌ ಕೂಡ ಕುಮಾರಸ್ವಾಮಿ ಅವರಂತೆಯೇ ವೈಯಕ್ತಿಕ ವರ್ಚಸ್ಸಿನ ಮೂಲಕ ಕ್ಷೇತ್ರದಲ್ಲಿ ಹೆಸರು ಗಳಿಸಿಕೊಂಡವರು. ಮೊದಲ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿದು, ಅಲ್ಲಿಂದ ಪ್ರತಿ ಚುನಾವಣೆಯಲ್ಲೂ ಒಂದೊಂದು ಪಕ್ಷದಿಂದ ಸ್ಪರ್ಧಿಸಿ ಸೋಲು, ಗೆಲು​ವನ್ನು ಕಂಡ​ವರು. ಈಗ 8ನೇ ಬಾರಿ ಚುನಾ​ವಣೆ ಎದು​ರಿ​ಸು​ತ್ತಿ​ರುವ ಸೈನಿಕ, ಯೋಗೇ​ಶ್ವರ್‌, ಕಮಲ ಹಿಡಿದು ಸ್ವಾಭಿ​ಮಾನಿ ಸಂಕಲ್ಪ ನಡಿಗೆ ಹೆಸ​ರಿ​ನಲ್ಲಿ ಮತ​ದಾ​ರರ ಮನೆ ಬಾ​ಗಿ​ಲಿಗೆ ಎಡ​ತಾ​ಕು​ತ್ತಿ​ದ್ದಾರೆ. ಮೋದಿ ಅವ​ರನ್ನು ಪ್ರಚಾ​ರಕ್ಕೆ ಕರೆ​ ತಂದು ಕಾರ್ಯ​ಕ​ರ್ತ​ರಲ್ಲಿ ರಣೋ​ತ್ಸಾಹ ಹೆಚ್ಚಿ​ಸಿ​ದ್ದಾರೆ. ‘ನೀರಾ​ವರಿ’ ಅಸ್ತ್ರದ ಜೊತೆಗೆ ಜೆಡಿ​ಎಸ್‌ ಮುಖಂಡ​ರನ್ನು ತನ್ನ ಬತ್ತ​ಳಿ​ಕೆಗೆ ಸೇರಿ​ಸಿ​ಕೊಂಡಿ​ದ್ದಾ​ರೆ. ವ್ಯಕ್ತಿಗತ ವರ್ಚಸ್ಸಿದ್ದರೂ ಪಕ್ಷ ನಿಷ್ಠೆ ವಿಚಾರದಲ್ಲಿ ಬದ್ಧತೆ ಇಲ್ಲದಿರುವುದು ಅವರಿಗೆ ಹಿನ್ನೆಡೆಯಾಗಬಹುದೆಂದು ಅಂದಾಜಿಸಲಾಗಿದೆ.

ಕೈ-ದಳ ನಡುವೆ ಒಳ ​ಒ​ಪ್ಪಂದ ವದಂತಿ: ಜೆಡಿಎಸ್‌ ಹಾಗೂ ಬಿಜೆಪಿ ನೇರ ಹಣಾಹಣಿ ಇರುವ ಈ ಕ್ಷೇತ್ರದೊಳಗೆ ಕಾಂಗ್ರೆಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲದ ರೀತಿಯಲ್ಲಿದೆ. ಕ್ಷೇತ್ರ​ದಲ್ಲಿ ಜೆಡಿ​ಎಸ್‌-ಕಾಂಗ್ರೆಸ್‌ ನಡುವೆ ಒಳ​ಒ​ಪ್ಪಂದದ ವದಂತಿಯೂ ಹರಿ​ದಾ​ಡು​ತ್ತಿದೆ. ಕಾಂಗ್ರೆಸ್‌ನಿಂದ ಸಂಭಾವ್ಯ ಅಭ್ಯ​ರ್ಥಿ​ಯಾ​ಗಿದ್ದ ಪ್ರಸನ್ನ ಪಿ.ಗೌಡ ಟಿಕೆಟ್‌ ಘೋಷ​ಣೆಗೂ ಮುನ್ನವೇ ಜೆಡಿ​ಎಸ್‌ ಸೇರಿ​ಕೊಂಡರು. ಮತ್ತೊಂದೆಡೆ ಡಿ.ಕೆ.​ಶಿ​ವ​ಕು​ಮಾರ್‌ ಭಾವ ಶರತ್‌ಚಂದ್ರ ಆಪ್‌ ಅಭ್ಯ​ರ್ಥಿ​ಯಾಗಿ ಕಣ​ದ​ಲ್ಲಿ​ದ್ದಾರೆ. ಈಗ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಸ್‌.ಗಂಗಾಧರ್‌ ಅವ​ರನ್ನು ಕಣ​ಕ್ಕಿ​ಳಿ​ಸ​ಲಾ​ಗಿದ್ದು, ಕ್ಷೇತ್ರ​ದಲ್ಲಿ ಕಾಂಗ್ರೆಸ್‌ ಸಾಂಪ್ರ​ದಾ​ಯಿಕ ಮತಬ್ಯಾಂಕ್‌ ಪಡೆ​ಯುವ ಲೆಕ್ಕಾ​ಚಾ​ರ​ದ​ಲ್ಲಿ​ದೆ.

ಒಕ್ಕ​ಲಿಗ ಮತ​ದಾ​ರರ ಬಲ ಹೊಂದಿ​ರುವ ಈ ಕ್ಷೇತ್ರ​ದಲ್ಲಿ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಮತ​ಗಳು ನಿರ್ಣಾ​ಯ​ಕ​ವಾ​ಗಿವೆ. ಒಕ್ಕಲಿಗ ಮತಗಳು ವಿಭಜನೆ ಆಗುವ ಕಾರಣಕ್ಕಾಗಿ ಕುಮಾ​ರ​ಸ್ವಾ​ಮಿ​ಯವರು ‘ಅಹಿಂದ’, ಯೋಗೇ​ಶ್ವರ್‌ ಅವರು ‘ಹಿಂದ’ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ‘ಅಹಿಂದ’ ಮತಗಳು ಸರಾಗವಾಗಿ ಬುಟ್ಟಿಗೆ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿರುವ ಗಂಗಾ​ಧರ್‌, ಒಕ್ಕಲಿಗರ ಮತ ಸೆಳೆಯಲು ರಣತಂತ್ರ ರೂಪಿಸುತ್ತಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

2018ರ ಫಲಿ​ತಾಂಶ
ಎಚ್‌.ಡಿ.​ಕು​ಮಾ​ರ​ಸ್ವಾಮಿ ಜೆ​ಡಿ​ಎಸ್‌ 87995
ಸಿ.ಪಿ.​ಯೋ​ಗೇ​ಶ್ವರ್‌ ಬಿ​ಜೆ​ಪಿ 66465
ಎಚ್‌.ಎಂ.​ರೇ​ವಣ್ಣ ಕಾಂಗ್ರೆಸ್‌ 30208

ಹಿಂದೂ-ಮುಸ್ಲಿಂ ನಡುವೆ ಗಲಾಟೆಗೆ ಪ್ರೇರೇಪಿಸಿದ ಪಕ್ಷ ಕಾಂಗ್ರೆಸ್‌: ಸಚಿವ ಅಶೋಕ್‌

ಜಾತಿ ಲೆಕ್ಕಾ​ಚಾರ
ಒಟ್ಟು ಮತಗಳು - 2,30,327
ಒಕ್ಕಲಿಗರು - 1.15 ಲಕ್ಷ
ಪ.ಜಾತಿ/ಪ.ಪಂ - 41 ಸಾವಿರ
ಅಲ್ಪಸಂಖ್ಯಾತರು - 34 ಸಾವಿರ
ಲಿಂಗಾಯತ - 8 ಸಾವಿರ
ಬ್ರಾಹ್ಮಣ - 1800
ಇತರೆ ಹಿಂದುಳಿದ ವರ್ಗ - 30527

Follow Us:
Download App:
  • android
  • ios