Asianet Suvarna News Asianet Suvarna News

ಸಂತೋಷ್‌ ಸೂಸೈಡ್‌ ಕೇಸ್‌: ಈಶ್ವ​ರಪ್ಪ ಬಂಧ​ನಕ್ಕೆ ಆಗ್ರ​ಹಿಸಿ ಎಸ್‌ಡಿಪಿಐ ಪ್ರತಿ​ಭ​ಟ​ನೆ

ಗುತ್ತಿ​ಗೆ​ದಾರ ಸಂತೋಷ್‌ ಪಾಟೀಲ್‌ ಆತ್ಮ​ಹತ್ಯೆ ಪ್ರಕ​ರಣ ಸಂಬಂಧ ಸಚಿವ ಈಶ್ವ​ರಪ್ಪ ವಿರುದ್ಧ ಪ್ರಕ​ರಣ ದಾಖ​ಲಿಸಿ ಬಂಧಿ​ಸ​ಬೇ​ಕೆಂದು ಒತ್ತಾ​ಯಿಸಿ ಸೋಶಿ​ಯಲ್‌ ಡೆಮಾ​ಕ್ರ​ಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿ​ಐ) ಕಾರ್ಯ​ಕ​ರ್ತರು ನಗ​ರ​ದಲ್ಲಿ ಬುಧ​ವಾರ ಪ್ರತಿ​ಭ​ಟನೆ ನಡೆ​ಸಿ​ದರು.

contractor santhosh patil death sdpi protest demanding the arrest of minister eshwarappa gvd
Author
Bangalore, First Published Apr 14, 2022, 6:30 PM IST | Last Updated Apr 14, 2022, 6:30 PM IST

ರಾಮ​ನ​ಗರ (ಏ.14): ಗುತ್ತಿ​ಗೆ​ದಾರ ಸಂತೋಷ್‌ ಪಾಟೀಲ್‌ ಆತ್ಮ​ಹತ್ಯೆ ಪ್ರಕ​ರಣ (Santhosh Patil Suicide Case) ಸಂಬಂಧ ಸಚಿವ ಈಶ್ವ​ರಪ್ಪ (KS Eshwarappa) ವಿರುದ್ಧ ಪ್ರಕ​ರಣ ದಾಖ​ಲಿಸಿ ಬಂಧಿ​ಸ​ಬೇ​ಕೆಂದು ಒತ್ತಾ​ಯಿಸಿ ಸೋಶಿ​ಯಲ್‌ ಡೆಮಾ​ಕ್ರ​ಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿ​ಐ) ಕಾರ್ಯ​ಕ​ರ್ತರು (SDPI) ನಗ​ರ​ದಲ್ಲಿ ಬುಧ​ವಾರ ಪ್ರತಿ​ಭ​ಟನೆ ನಡೆ​ಸಿ​ದರು. ನಗ​ರದ ಹಳೆ ಬಸ್‌ ನಿಲ್ದಾ​ಣದ ವೃತ್ತ​ದಲ್ಲಿ ಸೇರಿದ ಕಾರ್ಯ​ಕ​ರ್ತರು ಬಿಜೆಪಿ (BJP) ನೇತೃ​ತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಸಚಿವ ಈಶ್ವ​ರಪ್ಪ ವಿರುದ್ಧ ಘೋಷ​ಣೆ ಕೂಗಿ ಆಕ್ರೋಶ ವ್ಯಕ್ತ​ಪ​ಡಿ​ಸಿ​ದರು.

ಸಚಿವ ಈಶ್ವ​ರಪ್ಪ ವಿರುದ್ಧ ಶೇ. 40 ಕಮಿ​ಷನ್‌ ಆರೋ​ಪ​ ಮಾ​ಡಿದ್ದ ಬಿಜೆಪಿ ಕಾರ್ಯ​ಕರ್ತ ಹಾಗೂ ಗುತ್ತಿ​ಗೆ​ದಾರ ಸಂತೋಷ್‌ ಪಾಟೀಲ್‌ ರವರು ಈಶ್ವ​ರ​ಪ್ಪ​ನ​ವರೇ ನನ್ನ ಸಾವಿಗೆ ನೇರ ಕಾರಣ ಎಂಬು​ದಾಗಿ ಡೆತ್‌ ನೋಟ್‌ ಬರೆ​ದಿಟ್ಟು ಆತ್ಮ​ಹತ್ಯೆ ಮಾಡಿ​ಕೊಂಡಿದ್ದು, ಆತ್ಮ​ಹ​ತ್ಯೆಗೆ ಪ್ರೇರಣೆ ಕೇಸನ್ನು ದಾಖ​ಲಿಸಿ ಸಚಿವ ಈಶ್ವ​ರಪ್ಪರನ್ನು ಕೂಡಲೇ ಬಂಧಿ​ಸ​ಬೇ​ಕೆಂದು ಆಗ್ರ​ಹಿ​ಸಿ​ದರು. ಸಂತೋಷ್‌ ಪಾಟೀಲ್‌ ಕಳೆದ ಒಂದು ವರ್ಷ​ದಿಂದ ಶೇ. 40ರಷ್ಟುಕಮಿ​ಷನ್‌ ಬಗ್ಗೆ ಪೀಡಿ​ಸು​ತ್ತಿ​ರುವ ವಿಚಾ​ರ​ವಾಗಿ ನಿರಂತರ ಹೋರಾಟ ನಡೆ​ಸು​ತ್ತಿ​ದ್ದರು. ಪ್ರಧಾನಿ ಮೋದಿ ಅವ​ರಿಗೂ ಪತ್ರ ಬರೆ​ದಿ​ದ್ದರು. ಅಲ್ಲದೆ, ಬಿಜೆ​ಪಿಯ ಹಿರಿಯ ನಾಯ​ಕ​ರನ್ನು ಭೇಟಿ​ಯಾಗಿ ನ್ಯಾಯ​ಕ್ಕಾಗಿ ಆಗ್ರಹಿಸಿ​ದ್ದರು. 

ಆದರೆ, ಇದು​ವ​ರೆಗೆ ಬಿಜೆ​ಪಿ​ಯದೇ ಕಾರ್ಯ​ಕ​ರ್ತ​ನಾದ ಸಂತೋಷ್‌ಗೆ ಯಾವುದೇ ನ್ಯಾಯ ದೊರ​ಕ​ಲಿಲ್ಲ. ಬದ​ಲಾಗಿ ಆತ್ಮ​ಹ​ತ್ಯೆಗೆ ಪ್ರೇರಣೆ ಲಭಿ​ಸಿತ್ತು ಎಂಬುದು ಅವರ ಡೆತ್‌ ನೋಟಿ​ನಿಂದ ಬಹಿ​ರಂಗ​ವಾ​ಗಿದೆ ಎಂದು ದೂರಿ​ದರು. ಸೋಶಿಯಲ್ ಡೆಮಾಕ್ರಟಿಕ್‌ ಟ್ರೇಡ್ ಯೂನಿಯನ್‌ ಜಿಲ್ಲಾಧ್ಯಕ್ಷ ಮಹಮ್ಮದ್‌ ನಯಾಜ್‌ ಪಾಷ ಮಾತನಾಡಿ, ಹಿಂದೂ ನಾವೆ​ಲ್ಲರೂ ಒಂದು ಎನ್ನುತ್ತಾ ನಿರಂತರ ಕೋಮು​ದ್ವೇಷ ಬಿತ್ತು​ತ್ತಿ​ರುವ ಸಂಘ ಪರಿ​ವಾ​ರಿ​ದ​ವ​ರಿಗೆ ತಾಕತ್ತಿ​ದ್ದರೆ ನಿಮ್ಮದೇ ಬಿಜೆಪಿ ಕಾರ್ಯ​ಕರ್ತ ಸಂತೋಷ್‌ ಪಾಟೀಲ್‌ ಸಾವಿನ ನ್ಯಾಯ​ಕ್ಕಾಗಿ ಈಶ್ವ​ರಪ್ಪರನ್ನು ಬಂಧಿ​ಸ​ಬೇ​ಕೆಂದು ಆಗ್ರ​ಹಿಸಿ ಬೀದಿ​ಗಿ​ಳಿದು ಪ್ರತಿ​ಭ​ಟನೆ ನಡೆ​ಸ​ಬೇ​ಕೆಂದು ಸವಾಲು ಹಾಕಿ​ದರು.

ಸೂಸೈಡ್‌ ಕೇಸ್‌: ಈಶ್ವರಪ್ಪ ಬಂಧಿಸಬೇಕೆಂದು ಒತ್ತಾಯಿಸಿ ಎಡಿಜಿಪಿಗೆ ದೂರು ನೀಡಿದ ಕಾಂಗ್ರೆಸ್

ರಾಜ್ಯವನ್ನಾಳುವ ಸಚಿ​ವರ ನಡವಳಿಕೆ ಹೀಗಿದ್ದರೆ ಇನ್ನೂ ಇವರ ಕೆಳಗೆ ಕೆಲಸ ಮಾಡುವ ಅಧಿಕಾರಿಗಳ ಬಾಳು ಯಾವ ರೀತಿಯಲ್ಲಿ ಇರಬೇಕು ಎಂದು ನಾವು ಯೋಚಿಸಬೇಕಾಗಿದೆ. ಕರ್ನಾಟಕ ರಾಜ್ಯವನ್ನು ಲಂಚ ಮುಕ್ತ ರಾಜ್ಯವನ್ನು ಮಾಡಬೇಕಾದರೆ ನಾವು ಮುಂದಿನ ದಿನಗಳಲ್ಲಿ ಬಿಜೆಪಿ ಮುಕ್ತ ರಾಜ್ಯವನ್ನು ಮಾಡಬೇಕಾಗಿದೆ ಎಂದು ಹೇಳಿ​ದರು. ಪ್ರತಿಭಟನೆಯಲ್ಲಿ ಎಸ್‌ ಡಿಪಿಐ ಜಿಲ್ಲಾಧ್ಯಕ್ಷ ಶಕೀಲ್‌ ಪಾಷ, ತಾಲೂಕು ಘಟಕ ಅಧ್ಯಕ್ಷ ಸೈಯದ್‌ ಅಸಾದುಲ್ಲಾ, ಉಪಾಧ್ಯಕ್ಷರಾದ ಅಸ್ಲಂ, ಅಮ್ಜದ್‌ ಶರೀಫ್‌, ಆರೀಫ್‌, ಪಕ್ಷದ ಕಾನೂನು ಸಲ​ಹೆ​ಗಾರ ಚಾನ್‌ ಪಾಷ ಮತ್ತಿ​ತ​ರರು ಭಾಗ​ವ​ಹಿ​ಸಿ​ದ್ದರು.

ಈಶ್ವರಪ್ಪ ಬಂಧನಕ್ಕೆ ಬಿಎಸ್ಪಿ ಆಗ್ರ​ಹ: ಗುತ್ತಿ​ಗೆ​ದಾರ ಸಂತೋಷ್‌ ಪಾಟೀಲ್‌ ಆತ್ಮ​ಹತ್ಯೆ ಪ್ರಕ​ರಣ ಸಂಬಂಧ ಸಚಿವ ಕೆ.ಎಸ್‌.ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಿ ಬಂಧಿಸಬೇಕೆಂದು ಬಹುಜನ ಸಮಾಜ ಪಾರ್ಟಿ (ಬಿ​ಎ​ಸ್ಪಿ​) ರಾಜ್ಯಾಧ್ಯಕ್ಷ ಎಂ. ಕೃಷ್ಣ ಮೂರ್ತಿ ಆಗ್ರಹಿಸಿದ್ದಾರೆ. ಈ ಸಂಬಂಧ ಹೇಳಿಕೆ ನೀಡಿ​ರುವ ಅವರು, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಕೆ.ಎಸ್‌. ಈಶ್ವರಪ್ಪ ಮೇಲೆ ಶೇಕಡಾ 40 ಪರ್ಸೆಂಟ್‌ ಕಮಿಷನ್‌ ಪಡೆಯುವ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್‌ ಪಾಟೀಲ್ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಈ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಜ್ವಲಂತ ಸಾಕ್ಷಿಯಾಗಿದೆ ಎಂದು ಟೀಕಿ​ಸಿ​ದ್ದಾ​ರೆ.

ಈಗಾಗಲೇ ಕೆಲವು ತಿಂಗಳ ಹಿಂದೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ರಾಜ್ಯ ಬಿಜೆಪಿ ಸರ್ಕಾರ ಶೇ. 40ರಷ್ಟುಕಮಿಷನ್‌ ಪಡೆಯುತ್ತಿದ್ದಾರೆ ಎಂದು ನೇರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಜ್ಯಪಾಲರಿಗೆ ಪತ್ರ ಬರೆದು ದೂರು ನೀಡಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದಾಗ, ಮುಖ್ಯಮಂತ್ರಿ ಮತ್ತು ಸಚಿವರು ಹಾಗೂ ಶಾಸಕರು, ಬಿಜೆಪಿ ನಾಯಕರು ಈ ಆರೋಪಗಳನ್ನು ಅಲ್ಲಗಳೆದಿದ್ದರು. ಆದರೆ, ಸ್ವತಹ ಬಿಜೆಪಿ ಕಾರ್ಯಕರ್ತ ಮತ್ತು ಗುತ್ತಿಗೆದಾರ ಆಗಿದ್ದ ಸಂತೋಷ್‌ ಪಾಟೀಲ್ ಆತ್ಮಹತ್ಯೆ ಈ ಬಿಜೆಪಿ ಸರ್ಕಾರದ ಮುಖವಾಡ ಕಳಚಿದೆ ಎಂದು ಟೀಕಿಸಿದ್ದಾರೆ.

ಸಂತೋಷ್‌ ಸೂಸೈಡ್‌ ಕೇಸ್‌: ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಸಿಎಂ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕಲು ಯತ್ನ

ಈ ಘಟನೆ ಗುತ್ತಿಗೆದಾರರ ಆರೋಪ ಸತ್ಯವೆಂಬುದನ್ನು ಸಾಬೀತುಪಡಿಸಿದೆ. ಹಾಗೆಯೇ ಗುತ್ತಿಗೆದಾರರ ಸಂಘದ ಆರೋಪ ಕುರಿತು ಉನ್ನತಮಟ್ಟದ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯಪಾಲರನ್ನು ಬಹುಜನ ಸಮಾಜ ಪಾರ್ಟಿ ಆಗ್ರಹಿಸುತ್ತದೆ ಎಂದಿದ್ದಾರೆ. ಪಂಚಾಯತ್‌ ರಾಜ್ ಮಾತ್ರವಲ್ಲ ಲೋಕೋಪಯೋಗಿ ಇಲಾಖೆ, ಜಲ ಸಂಪನ್ಮೂಲ ಮತ್ತು ಇಂಧನ ಇಲಾಖೆ ಹಾಗೂ ಕಂದಾಯ ಇಲಾಖೆಯ ಹಗರಣಗಳನ್ನು ಸಹ ತನಿಖೆಗೆ ಒಳಪಡಿಸಬೇಕು ಎಂದು ಕೃಷ್ಣ​ಮೂ​ರ್ತಿ ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios