Asianet Suvarna News Asianet Suvarna News

ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಒತ್ತಾಯ

ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲೆಡೆ ಪ್ರತಿಭಟನೆ ನಡೆಯುತ್ತಿದ್ದು  ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. 

BSP Protest Against Uttar Pradesh Hatras Rape Case snr
Author
Bengaluru, First Published Oct 4, 2020, 9:51 AM IST

ರಾಮ​ನ​ಗರ (ಅ.04): ಉತ್ತರ ಪ್ರದೇ​ಶದ ಹಾಥ್ರಸ್‌ ನಲ್ಲಿ ನಡೆ​ದಿ​ರುವ ದಲಿತ ಯುವತಿ ಮೇಲಿನ ದೌರ್ಜನ್ಯ ಖಂಡಿಸಿ ಬಹು​ಜನ ಸಮಾಜ ಪಕ್ಷ (ಬಿ​ಎ​ಸ್ಪಿ​)ದ ಕಾರ್ಯ​ಕ​ರ್ತರು ನಗ​ರ​ದಲ್ಲಿ ಶನಿ​ವಾರ ಪ್ರತಿ​ಭ​ಟನಾ ಧರಣಿ ನಡೆ​ಸಿ​ದರು.

ನಗ​ರದ ಜಿಲ್ಲಾ ಕಚೇ​ರಿ​ಗಳ ಸಂಕೀ​ರ್ಣದ ಎದುರು ಧರಣಿ ನಡೆ​ಸಿದ ಕಾರ್ಯ​ಕ​ರ್ತರು ಬಿಜೆಪಿ ನೇತೃ​ತ್ವದ ಕೇಂದ್ರ ಹಾಗೂ ಉತ್ತರ ಪ್ರದೇ​ಶ ಸರ್ಕಾ​ರ, ಪ್ರಧಾನಿ ಮೋದಿ , ಅಲ್ಲಿನ ಸಿಎಂ ಯೋಗಿ ಆದಿ​ತ್ಯ​ನಾಥ್‌ ವಿರುದ್ಧ ಧಿಕ್ಕಾ​ರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತ​ಪ​ಡಿ​ಸಿ​ದರು.

ಈ ವೇಳೆ ಮಾತ​ನಾ​ಡಿದ ಬಿಎಸ್ಪಿ ರಾಜ್ಯ ಕಾರ್ಯ​ದರ್ಶಿ ಎಂ.ನಾ​ಗೇಶ್‌ ,ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾ​ರ​ಗಳು ಅಸ್ತಿ​ತ್ವಕ್ಕ ಬಂದ ನಂತರ ದಲಿ​ತರ ಮೇಲಿನ ದೌರ್ಜನ್ಯ, ಹಲ್ಲೆ, ಅತ್ಯಾ​ಚಾರ ಪ್ರಕ​ರ​ಣ​ಗಳು ಹೆಚ್ಚಾ​ಗಿವೆ ಎಂದು ಆರೋ​ಪಿ​ಸಿ​ದರು.

ಪ್ರತಿಭಟನೆಗೆ ಮಣಿದ ಯೋಗಿ, ಹತ್ರಾಸ್ ಅತ್ಯಾಚಾರ ಕೇಸ್‌ ಸಿಬಿಐಗೆ! ...

ಕುಟುಂಬಕ್ಕೆ ತಿಳಿಸದೆ ಅಂತ್ಯಸಂಸ್ಕಾರ

ಉತ್ತರ ಪ್ರದೇ​ಶ​ದಲ್ಲಿ ದಲಿತ ಯುವ​ತಿ​ಯೊ​ಬ್ಬಳ ಮೇಲೆ ಸಾಮೂ​ಹಿಕ ಅತ್ಯಾ​ಚಾರ ಪ್ರಕಣ ನಡೆ​ದಿದೆ. ಅಲ್ಲಿನ ಬಿಜೆಪಿ ಸರ್ಕಾರ ಹೆಣ್ಣು ಮಕ್ಕಳ ಮೇಲಿನ ದೌರ್ಜ​ನ್ಯ​ವನ್ನು ತಡೆ​ಯಲು ವಿಫ​ಲ​ವಾ​ಗಿವೆ. ಮೃತ​ಪ​ಟ್ಟಿ​ರುವ ಸಂತ್ರಸ್ತ ಯುವ​ತಿಯ ಶವ​ವನ್ನು ಗೌರ​ವ​ಯು​ತ​ವಾಗಿ ಸಂಸ್ಕಾರ ಮಾಡಲು ಕುಟುಂಬಕ್ಕೆ ಮುಖ್ಯಮಂತ್ರಿ ಯೋಗಿ ಆದಿ​ತ್ಯ​ನಾ​ಥರ ಸರ್ಕಾರ ಅವ​ಕಾಶ ಮಾಡಿ​ಕೊ​ಡ​ಲಿಲ್ಲ. ಶವ​ವನ್ನು ಕುಟುಂಬ​ದ​ವ​ರಿಗೆ ತಿಳಿ​ಯ​ದಂತೆ ಸುಟ್ಟು​ಹಾಕಿ ಸಾಕ್ಷ್ಯನಾಶ ಪಡಿ​ಸಿ​ದ್ದಾರೆ. ಅಲ್ಲಿನ ಸರ್ಕರ ಪರೋ​ಕ್ಷ​ವಾಗಿ ಅಪ​ರಾ​ಧಿ​ಗ​ಳಿಗೆ ರಕ್ಷಣೆ ನೀಡು​ತ್ತಿದೆ ಎಂದು ಆಕ್ರೋಶ ವ್ಯಕ್ತ​ಪ​ಡಿ​ಸಿ​ದರು.

ನ್ಯಾಯಾಂಗ ತನಿಖೆಗೆ ಒಪ್ಪಿಸಿ

ಉತ್ತರ ಪ್ರದೇ​ಶ​ದಲ್ಲಿ ಪದೇ ಪದೇ ಇಂತಹ ಘಟ​ನೆ​ಗಳು ಮರು​ಕ​ಳಿ​ಸು​ತ್ತಿವೆ. ಆ ರಾಜ್ಯ​ದಲ್ಲಿ ಕಾನೂನು, ಸುವ್ಯ​ವಸ್ಥೆ ವಿಫ​ಲ​ವಾ​ಗಿವೆ, ಹೀಗಾಗಿ ಉತ್ತರ ಪ್ರದೇ​ಶದ ರಾಜ್ಯ​ಪಾ​ಲರು ಮತ್ತು ರಾಷ್ಟ್ರ​ಪ​ತಿ​ಗಳು ತಕ್ಷಣ ಯೋಗಿ ಆದಿ​ತ್ಯ​ನಾ​ಥರ ಸರ್ಕಾ​ರ​ವನ್ನು ವಜಾ ಮಾಡ​ಬೇಕು. ಸಾಕ್ಷ​ನಾಶ ಮಾಡಿ​ರುವ ಜಿಲ್ಲಾ​ಡ​ಳಿತ ಮತ್ತು ಪೊಲೀ​ಸ​ರನ್ನು ಹೊಣೆ​ಯಾ​ಗಿಸಿ ಸಂಬಂಧಿ​ಸಿದ ಅಧಿ​ಕಾ​ರಿ​ಗ​ಳನ್ನು ತಕ್ಷಣ ಸೇವೆ​ಯಿಂದ ವಜಾ ಮಾಡಿ, ಬಂಧಿಸಿಸಬೇಕು. ಪ್ರಕ​ರ​ಣ​ವನ್ನು ನ್ಯಾಯಾಂಗ ತನಿ​ಖೆಗೆ ಒಪ್ಪಿ​ಸ​ಬೇಕು. ಸಂತ್ರ​ಸ್ಥೆಯ ಕುಟುಂಬಕ್ಕೆ ಶೀಘ್ರ ನ್ಯಾಯ ದೊರ​ಕಿ​ಸಿ​ಕೊ​ಡ​ಬೇಕು ಎಂದು ಒತ್ತಾ​ಯಿ​ಸಿ​ದರು.

ಪ್ರತಿ​ಭ​ಟ​ನೆ​ಯಲ್ಲಿ ಬಿಎಸ್ಪಿ ಜಿಲ್ಲಾ​ಧ್ಯಕ್ಷ ನೀಲಿ​ರ​ಮೇಶ್‌, ಜಿಲ್ಲಾ ಉಪಾ​ಧ್ಯಕ್ಷ ಅಬ್ದುಲ್‌ ರಹೀಂ (ಬಾಬು), ಜಿಲ್ಲಾ ಖಜಾಂಚಿ ಸುರೇಶ್‌, ಜಿಲ್ಲಾ ಕಾರ್ಯ​ದ​ರ್ಶಿ​ಗ​ಳಾದ ಮುರು​ಗೇಶ್‌, ಬಾನ​ಮ​ದೂರು ಕುಮಾರ್‌,

ಕಾರ್ಯ​ಕಾರಿ ಸಮಿತಿ ಸದ​ಸ್ಯ ವೆಂಕ​ಟಾ​ಚ​ಲ, ರಾಮ​ನ​ಗರ ತಾಲೂಕು ಘಟ​ಕದ ಅಧ್ಯಕ್ಷ ಸ್ವಾಮಿ, ಚನ್ನ​ಪ​ಟ್ಟಣ ತಾಲೂಕು ಘಟ​ಕದ ಅಧ್ಯಕ್ಷ ಮಹ​ದೇವ, ಮಾಗಡಿ ತಾಲೂಕು ಘಟ​ಕದ ಅಧ್ಯಕ್ಷ ರಾಮಣ್ಣ ಮುಂತಾ​ದ​ವರು ಭಾಗ​ವ​ಹಿ​ಸಿ​ದ್ದರು.

Follow Us:
Download App:
  • android
  • ios