* ಗುಜರಾತ್ ಗಲಭೆ ಕುರಿತು ಸುಪ್ರೀಂ ಕೋರ್ಟ್‌ ಮಹತ್ಚದ ತೀರ್ಪು* ಪ್ರಧಾನಿ ನರೇಂದ್ರ ಮೋದಿಗೆ ಕ್ಲೀನ್‌ಚಿಟ್‌ ಕೊಟ್ಟ ಸರ್ವೋಚ್ಛ ನ್ಯಾಯಾಲಯ* ಹಿಂಸಾಚಾರದ ವೇಳೆ ನಡೆದಿದ್ದೇನು?  ಸಂದರ್ಶನದಲ್ಲಿ ಮೌನ ಮುರಿದ ಗೃಹ ಸಚಿವ ಅಮಿತ್ ಶಾ

ಅಹಮದಾಬಾದ್(ಜೂ.25): ಗುಜರಾತ್ ಗಲಭೆ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ, ಗೃಹ ಸಚಿವ ಅಮಿತ್ ಶಾ ಅವರು ಶನಿವಾರದಂದು ಗಲಭೆಗಳ ಕುರಿತು ಸುದ್ದಿ ಸಂಸ್ಥೆ ಎಎನ್‌ಐಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಈ ವಿಶೇಷ ಸಂವಾದದಲ್ಲಿ ಗೃಹ ಸಚಿವ ಶಾ ಅವರು ಸುಪ್ರೀಂ ಕೋರ್ಟ್‌ನ ತೀರ್ಪು, ಮಾಧ್ಯಮಗಳ ಪಾತ್ರ, ಎನ್‌ಜಿಒಗಳ ರಾಜಕೀಯ ಪಕ್ಷಗಳು, ನ್ಯಾಯಾಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಂಬಿಕೆಯ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಸಂದರ್ಶನವನ್ನು ಎಎನ್‌ಐ ಬೆಳಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಿದೆ. ANI ಸಂಪಾದಕಿ ಸ್ಮಿತಾ ಪ್ರಕಾಶ್ ಈ ಸಂದರ್ಶನವನ್ನು ತೆಗೆದುಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರ 63 ಮಂದಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೀಡಿದ್ದ ಕ್ಲೀನ್ ಚಿಟ್ ಅನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಗುಜರಾತ್ ಗಲಭೆಯಲ್ಲಿ ಬಲಿಯಾದ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಅವರು ಈ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್, ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಸಿ.ಟಿ.ರವಿಕುಮಾರ್, ಪ್ರಕರಣದ ಪುನರಾರಂಭದ ಎಲ್ಲಾ ಮಾರ್ಗಗಳನ್ನು ಮುಚ್ಚುವಾಗ, ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಲಾದ ವಿಷಯವು "ಮುಸ್ಲಿಮರ ವಿರುದ್ಧ ಸಾಮೂಹಿಕ ಹಿಂಸಾಚಾರವನ್ನು ಪ್ರಚೋದಿಸಲು ಉನ್ನತ ಮಟ್ಟದಲ್ಲಿ ಯಾವುದೇ ಕ್ರಿಮಿನಲ್ ಪಿತೂರಿಯನ್ನು ಹೊಂದಿಲ್ಲ" ಎಂದು ಕಂಡುಕೊಂಡಿದ್ದಾರೆ.

ಗೋಧ್ರಾ ಪ್ರಕರಣ, ಮೋದಿಗೆ ಬಿಗ್ ರಿಲೀಫ್, ನಿರ್ದೋ‍ಷಿ ಎಂದು ತೀರ್ಪಿತ್ತ ಸುಪ್ರೀಂ!

Scroll to load tweet…

2002ರಲ್ಲಿ ಗುಜರಾತ್‌ನಲ್ಲಿ ನಡೆದ ಗಲಭೆಗಳ ಕುರಿತು ಸುಳ್ಳು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದಕ್ಕಾಗಿ ರಾಜ್ಯ ಸರ್ಕಾರದ ಅತೃಪ್ತ ಅಧಿಕಾರಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಶುಕ್ರವಾರದಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು.

ಸಂಜೀವ್ ಭಟ್ (ಅಂದಿನ ಐಪಿಎಸ್ ಅಧಿಕಾರಿ), ಹರೇನ್ ಪಾಂಡ್ಯ (ಗುಜರಾತ್ ನ ಮಾಜಿ ಗೃಹ ಸಚಿವ) ಮತ್ತು ಆರ್ ಬಿ ಶ್ರೀಕುಮಾರ್ (ಈಗ ನಿವೃತ್ತ ಐಪಿಎಸ್ ಅಧಿಕಾರಿ) ಅವರ ಸಾಕ್ಷ್ಯವು ರಾಜ್ಯ ಸರ್ಕಾರದ ವಾದದಲ್ಲಿ ಅರ್ಹತೆಯನ್ನು ಕಂಡುಕೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಇದು ಸುಳ್ಳಿನಿಂದ ತುಂಬಿರುವಾಗ ವಿಷಯವನ್ನು ಸಂವೇದನಾಶೀಲಗೊಳಿಸುವುದು ಮತ್ತು ರಾಜಕೀಯಗೊಳಿಸುವುದು ಮಾತ್ರವಾಗುತ್ತದೆ ಎಂದೂ ಹೇಳಿದೆ. 26 ಮಾರ್ಚ್ 2003 ರಂದು ಅಹಮದಾಬಾದ್‌ನ ಲಾ ಗಾರ್ಡನ್ ಬಳಿ ಬೆಳಗಿನ ನಡಿಗೆಯಲ್ಲಿ ಹರೇನ್ ಪಾಂಡ್ಯ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.

2002 Godhra Case: ಗೋಧ್ರಾ ಹತ್ಯಾಕಾಂಡದ ಅಪರಾಧಿ ಅನಾರೋಗ್ಯದಿಂದ ಸಾವು!

ಏನಿದು ಪ್ರಕರಣ?:

ಅಯೋಧ್ಯೆಯಲ್ಲಿ ಕರಸೇವೆ ಮುಗಿಸಿ ವಾಪಸಾಗುತ್ತಿದ್ದ ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ 2002ರ ಫೆ.27ರಂದು ಗೋಧ್ರಾ ರೈಲು ನಿಲ್ದಾಣದ ಬಳಿ ಬೆಂಕಿ ಹಚ್ಚಲಾಗಿತ್ತು. ಈ ಘಟನೆಯಲ್ಲಿ 59 ಮಂದಿ ಸುಟ್ಟುಕರಕಲಾಗಿದ್ದರು. ಮರುದಿನವೇ ಅಂದರೆ 2002 ಫೆ.28ರಂದು ಗುಜರಾತ್‌ನಲ್ಲಿ ಕೋಮುಗಲಭೆ ಆರಂಭವಾಗಿತ್ತು. 1044 ಮಂದಿ ಬಲಿಯಾಗಿದ್ದರು. ಆ ಪೈಕಿ 790 ಮಂದಿ ಮುಸ್ಲಿಮರು ಹಾಗೂ 254 ಹಿಂದುಗಳಾಗಿದ್ದರು.

ಈ ಗಲಭೆ ಸಂದರ್ಭದಲ್ಲಿ ಅಹಮದಾಬಾದ್‌ನ ಗುಲ್ಬಗ್‌ರ್‍ ಸೊಸೈಟಿಯಲ್ಲಿ ನೆಲೆಸಿದ್ದ ಕಾಂಗ್ರೆಸ್ಸಿನ ನಾಯಕ ಹಾಗೂ ಮಾಜಿ ಸಂಸದ ಎಹ್ಸಾನ್‌ ಜಾಫ್ರಿ ಸೇರಿದಂತೆ 68 ಮಂದಿಯನ್ನು ಕೊಲ್ಲಲಾಗಿತ್ತು. ಗುಜರಾತ್‌ನಲ್ಲಿ ನಡೆದ ಈ ಗಲಭೆಯ ಹಿಂದೆ ಉನ್ನತ ಮಟ್ಟದ ಸಂಚು ಅಡಗಿದೆ ಎಂದು ಎಹ್ಸಾನ್‌ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಕಾನೂನು ಹೋರಾಟ ಆರಂಭಿಸಿದ್ದರು. 2008ರಲ್ಲಿ ಸುಪ್ರೀಂಕೋರ್ಟ್‌ ಎಸ್‌ಐಟಿ ರಚನೆ ಮಾಡಿತ್ತು. 2012ರಲ್ಲಿ ಎಸ್‌ಐಟಿ ತನ್ನ ಅಂತಿಮ ವರದಿ ಸಲ್ಲಿಸಿ ಮೋದಿ ಸೇರಿ 64 ಮಂದಿಗೆ ಕ್ಲೀನ್‌ಚಿಟ್‌ ನೀಡಿತ್ತು. ಅದನ್ನು ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ ಅಂಗೀಕರಿಸಿತ್ತು.

ಮೋದಿ ವಿಚಾರಣೆ ವೇಳೆ ಸುಸ್ತಾಗಿದ್ದ ಅಧಿಕಾರಿ: ಬಯಲಾಯ್ತು ಕುತೂಹಲಕರ ಅಂಶ!

ಈ ನಡೆ ವಿರುದ್ಧ ಝಾಕಿಯಾ ಜಾಫ್ರಿ ಹೈಕೋರ್ಚ್‌ ಮೆಟ್ಟಿಲೇರಿದ್ದರು. 2017ರ ಅ.5ರಂದು ಗುಜರಾತ್‌ ಹೈಕೋರ್ಚ್‌ ಅವರ ಮೇಲ್ಮನವಿಯನ್ನು ವಜಾಗೊಳಿಸಿತ್ತು. ಎಸ್‌ಐಟಿ ಕ್ಲೀನ್‌ಚಿಟ್‌ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಬಳಿಕ ಝಾಕಿಯಾ ಜಾಫ್ರಿ ಮೇಲ್ಮನವಿ ಹಾಕಿದ್ದರು. ಅದರ ತೀರ್ಪು ಈಗ ಹೊರಬಂದಿದೆ.