Asianet Suvarna News Asianet Suvarna News

'ಕೈಲಾಸವಾಸಿ' ನಿತ್ಯಾನಿಗೆ ದೊಡ್ಡ ಶಾಕ್, ರೇಪ್ ಕೇಸ್‌ನಲ್ಲಿ ಮತ್ತೆ ಜೈಲಿಗೆ?

ನಿತ್ಯಾನಂದ ಸ್ವಾಮಿಗೆ ಮತ್ತೆ ಸಂಕಷ್ಟ/ ನಿತ್ಯಾನಂದನಿಗೆ ನೀಡಿದ ಜಾಮೀನು ರದ್ದು/ 2018ರ ಜುಲೈನಿಂದ ವಿಚಾರಣೆಗೆ ಹಾಜರಾಗದ ನಿತ್ಯಾನಂದನಿಗೆ ಶಾಕ್/ ವಿಚಾರಣೆ ನಿಧಾನಗತಿಗೆ ನಿತ್ಯಾನೆ ಕಾರಣ

HC cancels Bidadi Nithyananda's bail in rape case
Author
Bengaluru, First Published Feb 5, 2020, 5:47 PM IST

ಬೆಂಗಳೂರು[ಫೆ. 05]  ನಿತ್ಯಾನಂದಸ್ವಾಮಿ ಜಾಮೀನು ರದ್ದತಿ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನಡೆದ್ದು ನಿತ್ಯಾನಂದನಿಗೆ ಸಂಕಷ್ಟ ಎದುರಾಗಿದೆ.

ನಿತ್ಯಾ ಆಶ್ರಮದಿಂದ ಕಾಣೆಯಾದ ಯುವತಿರು ಎಲ್ಲಿಗೆ ಹೋದ್ರೂ? ಪೊಲೀಸರ ಕೊಟ್ಟ ಶಾಕಿಂಗ್ ಮಾಹಿತಿ

ನಿತ್ಯಾನಂದನಿಗೆ ನೀಡಿದ್ದ ಜಾಮೀನು ರದ್ದಾಗಿದೆ. ನಿತ್ಯಾನಂದನ ಜಾಮೀನು ರದ್ದು ಕೋರಿ ಲೆನಿನ್ ಅರ್ಜಿ ಸಲ್ಲಿಸಿದ್ದರು. ನ್ಯಾ.ಮೈಕಲ್ ಡಿ ಕುನ್ಹಾ ಅವರ ಪೀಠದಲ್ಲಿ ವಿಚಾರಣೆ ನಡೆಯಿತು. ಈಗ ನಿತ್ಯಾನಂದನಿಗೆ ಹೊಸ ಸಂಕಟ ಎದುರಾಗಿದೆ.

ಈಕ್ವೆಡಾರ್ ಬಳಿ ತನ್ನದೇ ಹೆಸರಿನಲ್ಲಿ ಕೈಲಾಸ ಎಂಬ ದೇಶ ನಿರ್ಮಾಣ ಮಾಡಿಕೊಂಡಿದ್ದೇನೆ ಎಂದು ನಿತ್ಯಾನಂದ ತಾನೇ ಹೇಳಿಕೊಂಡಿದ್ದ. ಅಲ್ಲಿಯೇ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದಾನೆ ಎಂದು ಸುದ್ದಿಯಾಗಿತ್ತು. ಒಟ್ಟಿನಲ್ಲಿ ನಿತ್ಯಾನಂದ ಭಾರತದಲ್ಲೆಂತೂ ಇಲ್ಲ. ಆದರೆ ಆತನಿಗೆ ಸಂಬಂಧಿಸಿದ ಪ್ರಕರಣಗಳು ವಿಚಾರಣೆ ನಡೆಯುತ್ತಲೆ ಇವೆ. 

 

"

Follow Us:
Download App:
  • android
  • ios