Asianet Suvarna News Asianet Suvarna News

ಅಂತ್ಯಸಂಸ್ಕಾರಕ್ಕೆ ಯೋಗಿ ಬರಲಿಲ್ಲ: ನ್ಯಾಯ ಸಿಗದೇ ಹೊರಟಳು ದೇಶದ ಮಗಳು!

ನ್ಯಾಯ ಸಿಗದೇ ಹೊರಟಳಾ ದೇಶದ ಧೀರ ಮಗಳು? ಉನ್ನಾವ್ ಅತ್ಯಾಚಾರ ಸಂತಸ್ಥೆಯ ಅಂತ್ಯಸಂಸ್ಕಾರ| ಗ್ರಾಮದ ಹೊರವಲಯದಲ್ಲಿ ನೆಮ್ಮದಿಯ ಶಾಶ್ವತ ನಿದ್ರೆಗೆ ಜಾರಿದ ಸಂತ್ರಸ್ಥೆ| ಯೋಗಿ ಆದಿತ್ಯನಾಥ್ ಭೇಟಿಗೆ ಪಟ್ಟು ಹಿಡಿದಿದ್ದ ಕುಟುಂಬ ವರ್ಗ| ಪೊಲೀಸರ ಮನವೋಲಿಕೆ ಪ್ರಯತ್ನ ಯಶಸ್ವಿ| ಪೊಲೀಸ್ ಸರ್ಪಗಾವಲಿನಲ್ಲಿ ನೆರವೇರಿದ ಸಂತ್ರಸ್ಥೆಯ ಅಂತ್ಯಸಂಸ್ಕಾರ|

Daughter Of India Left Without Justice  Unnao Rape Victim Cremated
Author
Bengaluru, First Published Dec 8, 2019, 1:47 PM IST

ಲಕ್ನೋ(ಡಿ.08): ಉನ್ನಾವ್ ಅತ್ಯಾಚಾರ ಸಂಸ್ಥೆಯ ಅಂತ್ಯಸಂಸ್ಕಾರ ನೆರವೇರಿದ್ದು, ಬದುಕಿದ್ದಾಗ ಶಾರೀರಿಕ ಹಾಗೂ ಮಾನಸಿಕ ಹಿಂಸೆಗೆ ಬಲಿಯಾಗಿದ್ದ ದೇಶದ ಮಗಳು ಗ್ರಾಮದ ಹೊರ ವಲಯದಲ್ಲಿ ಶಾಶ್ವತವಾಗಿ ನೆಮ್ಮದಿಯ ನಿದ್ರೆಗೆ ಜಾರಿದ್ದಾಳೆ.

ಮುಖ್ಯಮಂತ್ರಿ ಬರೋವರೆಗೂ ಅಂತ್ಯಸಂಸ್ಕಾರವಿಲ್ಲ; ಸಂತ್ರಸ್ಥೆ ಕುಟುಂಬದ ಹಠ!

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬರುವವರೆಗೂ ಅಂತ್ಯಸಂಸ್ಕಾರ ನಡೆಸುವುದಿಲ್ಲ ಎಂದು ಸಂತ್ರಸ್ಥೆಯ ಕುಟುಂಬ ವರ್ಗ ಈ ಮೊದಲು ಪಟ್ಟು ಹಿಡಿದಿತ್ತು. ಆದರೆ ಸರ್ಕಾರಿ ಅಧಿಕಾರಿಗಳು ಹಾಗೂ ಪೊಲೀಸರ ಮನವೋಲಿಕೆ ಪ್ರಯತ್ನ ಯಶಸ್ವಿಯಾಗಿದ್ದು, ಅಂತ್ಯಸಂಸ್ಕಾರ ನೆರವೇರಿಸಲು ಕುಟುಂಬದವರು ಒಪ್ಪಿಕೊಂಡರು.

ಅದರಂತೆ ಪೊಲೀಸ್ ಸರ್ಪಗಾವಲಿನಲ್ಲಿ ಉನ್ನಾವ್ ಅತ್ಯಾಚಾರ ಸಂತ್ರಸ್ಥೆಯ ಅಂತ್ಯಸಂಸ್ಕಾರ ನೆರವೇರಿದ್ದು, ನ್ಯಾಯಕ್ಕಾಗಿ ದಿಟ್ಟ ಹೋರಾಟ ನಡೆಸಿದ್ದ ಸಂತ್ರಸ್ಥೆ ಇನ್ಮುಂದೆ ಕೇವಲ ನೆನಪು ಮಾತ್ರ.

ಉನ್ನಾವ್ ಸಂತ್ರಸ್ತೆ ಮನೆಗೆ ರಾಜಕೀಯ ನಾಯಕರ ದಂಡು!

ಈ ಮಧ್ಯೆ ಸಂತ್ರಸ್ಥೆಯ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿರುವ ಯೊಗಿ ಸರ್ಕಾರ, 25 ಲಕ್ಷ ರೂ. ಪರಿಹಾರ, ಕುಟುಂಬಕ್ಕೆ ಮನೆ ಹಾಗೂ ನಿರಂತರ ಪೊಲೀಸ್ ಭದ್ರತೆ ನೀಡುವುದಾಗಿ ಘೋಷಿಸಿದೆ.

Follow Us:
Download App:
  • android
  • ios