Asianet Suvarna News Asianet Suvarna News

ಗೆರೆ ಎಳೆದು ನಿರ್ಮಿಸಿದರೇ ಈ ಶಿವ ದೇವಾಲಯಗಳ? ಒಂದೇ ರೇಖಾಂಶದಲ್ಲಿ ನಿರ್ಮಿಸಿದ್ದಾದರೂ ಹೇಗೆ?

ಈ ಪ್ರಸಿದ್ಧ ಶಿವ ದೇವಾಲಯಗಳ ನಡುವೆ ಸಾವಿರಾರು ಕಿಲೋಮೀಟರ್‌ಗಳ ಅಂತರವಿದೆ. ಆದರೆ ಉಪಗ್ರಹದಿಂದ ನೋಡಿದರೆ ಈ ಎಲ್ಲ ದೇವಾಲಯಗಳೂ ಒಂದೇ ರೇಖಾಂಶದಲ್ಲಿವೆ. 4000 ವರ್ಷಗಳ ಹಿಂದೆ ನಿರ್ಮಿತವಾದ ಈ ದೇವಾಲಯಗಳಿಗೆ ಯಾವ ಉಪಕರಣ ಬಳಸಿ ಒಂದೇ ರೇಖಾಂಶದ ಭೌಗೋಳಿಕ ಆಯ್ಕೆ ಮಾಡಿರಬಹುದು?

The Mystery Of The Ancient Shiva Temples of India skr
Author
First Published Jan 31, 2023, 12:58 PM IST

ಪ್ರಸಿದ್ಧ ಶಿವ ದೇವಾಲಯಗಳ ಕುರಿತ ಈ ಒಂದು ಸಂಖ್ಯಾ ಅಚ್ಚರಿಯನ್ನು ಗಮನಿಸಿ, 
ಉಜ್ಜಯಿನಿಯಿಂದ ಉಳಿದಿರುವ ಜ್ಯೋತಿರ್ಲಿಂಗಗಳ ಅಂತರವಿದು..
* ಉಜ್ಜಯಿನಿಯಿಂದ ಸೋಮನಾಥ – 777 ಕಿ.ಮೀ
* ಉಜ್ಜಯಿನಿಯಿಂದ ಓಂಕಾರೇಶ್ವರ – 111 ಕಿ.ಮೀ
* ಉಜ್ಜಯಿನಿಯಿಂದ ಭೀಮಾಶಂಕರ- 666 ಕಿ.ಮೀ
* ಉಜ್ಜಯಿನಿಯಿಂದ ಕಾಶಿ ವಿಶ್ವನಾಥ- 999 ಕಿ.ಮೀ
* ಉಜ್ಜಯಿನಿಯಿಂದ ಮಲ್ಲಿಕಾರ್ಜುನ- 999 ಕಿ.ಮೀ
* ಉಜ್ಜಯಿನಿಯಿಂದ ಕೇದಾರನಾಥಕ್ಕೆ- 888 ಕಿ.ಮೀ
* ಉಜ್ಜಯಿನಿಯಿಂದ ತ್ರಯಂಬಕೇಶ್ವರ- 555 ಕಿ.ಮೀ
* ಉಜ್ಜಯಿನಿಯಿಂದ ಬಿಜನಾಥ್- 999 ಕಿ.ಮೀ
* ಉಜ್ಜಯಿನಿಯಿಂದ ರಾಮೇಶ್ವರಂ – 1999 ಕಿ.ಮೀ
* ಉಜ್ಜಯಿನಿಯಿಂದ ಘೃಷ್ಣೇಶ್ವರ – 444 ಕಿ.ಮೀ

ಅರೆ, ಎಲ್ಲ ದೇವಾಲಯಗಳ ನಡುವಿನ ಅಂತರದಲ್ಲಿ ಒಂದು ಸಮಾನ ಅಂಶವೆಂದರೆ ಅವೆಲ್ಲವೂ ಒಂದೇ ಸಂಖ್ಯೆಗಳ ಪುನರಾವರ್ತನೆಯನ್ನು ಹೊಂದಿವೆ. 

ಶೃಂಗೇರಿಯಿಂದ ತವರಿಗೆ ತೆರಳುತ್ತಿರುವ 'ಕಾಶ್ಮೀರ ಪುರವಾಸಿನಿ'; ಶಾರದಾಂಬೆಯ ಮಿಶನ್ ಕಾಶ್ಮೀರ್ ಕತೆ

ಮತ್ತೊಂದು ಅಚ್ಚರಿ ಇದೆ, ಕೇದಾರನಾಥ ಮತ್ತು ರಾಮೇಶ್ವರಂ ನಡುವೆ 2383 ಕಿ.ಮೀ ದೂರವಿದೆ. ಈ ಮಧ್ಯೆ ಕಾಳಹಸ್ತಿ, ಏಕಾಂಬರೇಶ್ವರ, ನಟರಾಜ,  ರಾಮನಾಥಸ್ವಾಮಿ ದೇವಸ್ಥಾನ ಮುಂತಾದ ಪ್ರಸಿದ್ಧ ದೇವಾಲಯಗಳು ಕಾಣಸಿಗುತ್ತವೆ. ನೀವೇನಾದರೂ ಈ ದೇವಾಲಯಗಳ ದೂರವನ್ನು ಸ್ಯಾಟಲೈಟ್‌ನಿಂದ ಫೋಟೋ ತೆಗೆದು ನೋಡಿದರೆ ಅವೆಲ್ಲ ಒಂದೇ ರೇಖೆಯಲ್ಲಿ ಬರುತ್ತವೆ! ಹೌದು, ಈ ಎಲ್ಲಾ ದೇವಾಲಯಗಳು ಒಂದೇ ಸಮಾನಾಂತರ ರೇಖೆಯಲ್ಲಿ ಬರುತ್ತವೆ. ಇವೆಲ್ಲವೂ ಹೆಚ್ಚು ಕಡಿಮೆ ಒಂದೇ ಭೌಗೋಳಿಕ ರೇಖಾಂಶದ ಸುತ್ತ ಅಂದರೆ 79° E 41'54"ಯಲ್ಲಿ ಬರುತ್ತವೆ. ಇನ್ನು ಜಂಬುಕೇಶ್ವರ ದೇವಾಲಯ, ಅಣ್ಣಾಮಲೈಯಾರ್ ದೇವಾಲಯ ಕೂಡಾ ಹತ್ತಿರತ್ತಿರ ಇದೇ ರೇಖಾಂಶದಲ್ಲಿ ಬರುತ್ತವೆ. 

ಈ ಎಲ್ಲ ದೇವಾಲಯಗಳೂ ಸಾವಿರಾರು ವರ್ಷ ಹಳೆಯವು ಎಂಬುದರಲ್ಲಿ ಯಾವುದೇ ಗೊಂದಲವಿಲ್ಲ. ಕೆಲವಂತೂ ಸುಮಾರು 4000 ವರ್ಷಗಳ ಹಿಂದೆಯೇ ನಿರ್ಮಾಣವಾಗಿವೆ. ಆ ಸ್ಥಳಗಳ ಅಕ್ಷಾಂಶ ಮತ್ತು ರೇಖಾಂಶವನ್ನು ಅಳೆಯಲು ಯಾವುದೇ ಉಪಗ್ರಹ ತಂತ್ರಜ್ಞಾನ ಲಭ್ಯವಿಲ್ಲದಿದ್ದ ಅಷ್ಟು ಹಿಂದಿನ ಸಮಯದಲ್ಲಿ ಈ ಎಲ್ಲ ಶಿವ ದೇವಾಲಯಗಳನ್ನು ಇಷ್ಟೊಂದು ಪಕ್ಕಾ ಒಂದೇ ರೇಖಾಂಶದಲ್ಲಿ ನಿರ್ಮಿಸಿದ್ದು ಹೇಗೆ?  ಇಷ್ಟಕ್ಕೂ ಈ ದೇವಾಲಯಗಳನ್ನು ಸಮಾನ ರೇಖೆಯಲ್ಲಿ ನಿರ್ಮಿಸಿದ ಹಿಂದಿನ ರಹಸ್ಯ ಕಾರಣವಾದರೂ ಏನು? ಇಷ್ಟೊಂದು ಬೃಹತ್ ದೇವಾಲಯಗಳನ್ನು ಅಷ್ಟೊಂದು ಹಿಂದೆ ನಿರ್ಮಿಸಿದ ತಂತ್ರಜ್ಞಾನವಾದರೂ ಎಂಥದು?

ಇದಕ್ಕಾಗಿ ನಮ್ಮ ಪೂರ್ವಜರು ಯಾವ ರೀತಿಯ ಉಪಕರಣಗಳನ್ನು ಬಳಸಿದರು? ಮತ್ತು ಪ್ರಸ್ತುತ ಟೈಮ್‌ಲೈನ್‌ನಲ್ಲಿ ಅಂತಹ ಉಪಕರಣಗಳು ಅಸ್ತಿತ್ವದಲ್ಲಿದ್ದ ದಾಖಲೆ ಎಲ್ಲಿದೆ? ಇದೆಲ್ಲಕ್ಕೂ ಉತ್ತರ ನಿಗೂಢವಾಗಿಯೇ ಇದೆ. ಏನೇ ಇರಲಿ, ನಮ್ಮ ಪೂರ್ವಜರ ಆಧುನಿಕತೆ ತಲುಪಲು ನಾವು ಇಂದಿಗೂ ಸಮರ್ಥರಾಗಿಲ್ಲದಿರಬಹುದು, ಅಥವಾ ಸ್ವತಃ ದೇವರೇ ಇವುಗಳ ನಿರ್ಮಾಣ ಕಾರ್ಯವನ್ನು ಮೇಲಿನಿಂದ ಮಾಡಿರಬಹುದು!

ಪಂಚಭೂತಗಳ ಪ್ರಾತಿನಿಧ್ಯತೆ
ಇದಲ್ಲದೆ, ಈ ದೇವಾಲಯಗಳ ವಿಷಯವಾಗಿ ತಿಳಿಯಲು ನಿಜವಾಗಿಯೂ ಆಸಕ್ತಿದಾಯಕ ಸಂಗತಿಯೆಂದರೆ, ಈ ಪ್ರತಿಯೊಂದು ದೇವಾಲಯಗಳು ಪಂಚಭೂತದ ಆಯಾ ಅಂಶಗಳಾದ ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಬಾಹ್ಯಾಕಾಶವನ್ನು ಸೂಚಿಸುತ್ತವೆ.

Bhishma Ekadashi 2023: ವಿಷ್ಣು ಸಹಸ್ರನಾಮಕ್ಕೆ ಓನಾಮ ಬರೆದ ಭೀಷ್ಮಾಚಾರ್ಯರು!

ನೀರಿನ ಅಂಶವನ್ನು ಸೂಚಿಸುವ ದೇವಾಲಯವು ತಿರುವಾನೈಕಾವಲ್‌ನಲ್ಲಿದೆ, ಬೆಂಕಿಯನ್ನು ಸೂಚಿಸುವ ದೇವಾಲಯವು ತಿರುವಣ್ಣಾಮಲೈನಲ್ಲಿದೆ, ವಾಯು ಅಂಶಕ್ಕಾಗಿ ದೇವಾಲಯವು ಕಾಳಹಸ್ತಿಯಲ್ಲಿದೆ, ಭೂಮಿಯ ಅಂಶವು ಕಾಂಚೀಪುರಂನಲ್ಲಿದೆ. ಬಾಹ್ಯಾಕಾಶ ಅಂಶವನ್ನು ಚಿತ್ರಿಸುವ ದೇವಾಲಯವು ಚಿದಂಬರಂನಲ್ಲಿದೆ.

ಹೌದು, ಶ್ರೀಕಾಳಹಸ್ತಿಯಲ್ಲಿರುವ ಮಿನುಗುವ ದೀಪಗಳು ಗಾಳಿಯು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ತಿಳಿಸುತ್ತದೆ. ತಿರುವಾನೈಕ್ಕ ದೇವಸ್ಥಾನದ ಗರ್ಭಗುಡಿಯಲ್ಲಿರುವ ನೀರಿನ ಬುಗ್ಗೆಯು ನೀರಿನ ಅಂಶದೊಂದಿಗೆ ಸಂಬಂಧವನ್ನು ಚಿತ್ರಿಸುತ್ತದೆ. ಕಾಂಚೀಪುರಂನಲ್ಲಿರುವ ಮರಳಿನ ಸ್ವಯಂಭೂ ಲಿಂಗವು ಭೂಮಿಯೊಂದಿಗಿನ ಶಿವನ ಸಂಬಂಧದ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ಇದು ಹೆಚ್ಚಾಗಿ ಚಿದಂಬರಂ ದೇವಾಲಯದಲ್ಲಿರುವ ನಿರಾಕಾರ ಸ್ಥಳವಾಗಿದ್ದು, ಶೂನ್ಯತೆಯ ಜನಪ್ರಿಯ ನಂಬಿಕೆಯೊಂದಿಗೆ ಭಗವಂತನ ಸಂಬಂಧವನ್ನು ತೋರಿಸುತ್ತದೆ. 

 ಈ ಎಲ್ಲ ದೇವಾಲಯಗಳು ಪ್ರಕೃತಿಯ 5 ಅಂಶಗಳಲ್ಲಿ ಲಿಂಗದ ಅಭಿವ್ಯಕ್ತಿಯನ್ನು ಪ್ರತಿನಿಧಿಸುತ್ತವೆ, ಇದನ್ನು ನಾವು ಸಾಮಾನ್ಯ ಭಾಷೆಯಲ್ಲಿ ಪಂಚ ಮಹಾಭೂತ ಎಂದು ಕರೆಯುತ್ತೇವೆ.

Follow Us:
Download App:
  • android
  • ios