Asianet Suvarna News Asianet Suvarna News

ಬೌದ್ಧರ ನಾಡಾದ ಥೈಲ್ಯಾಂಡ್‌ನ ರಾಜರ ಹೆಸರೆಲ್ಲ ರಾಮನೇ! ಇಲ್ಲಿನ ಆಯುತಾಯಕ್ಕೂ ಅಯೋಧ್ಯೆಗೂ ಉಂಟು ನಂಟು!

ಅಯೋಧ್ಯೆ ಮತ್ತು ಥೈಲ್ಯಾಂಡ್‌ನ ಅಯುತಾಯಾ ಎರಡು ವಿಭಿನ್ನ ದೇಶಗಳಲ್ಲಿ ಸುಮಾರು 3,500 ಕಿಲೋಮೀಟರ್‌ಗಳಿಂದ ಬೇರ್ಪಟ್ಟಿದೆ. ಆದರೆ ಈ ಎರಡು ರಾಷ್ಟ್ರಗಳ ನಡುವೆ ಸಂಬಂಧ ಬೆಸೆವವನು ಭಗವಾನ್ ರಾಮ. 

How Thailands Ayutthaya is related to Ayodhya and Lord Ram skr
Author
First Published Jan 11, 2024, 4:09 PM IST

ಭಾರತದಲ್ಲಿನ ಅಯೋಧ್ಯೆ ಮತ್ತು ಥೈಲ್ಯಾಂಡ್‌ನ ಅಯುತಯಾ ಎರಡು ವಿಭಿನ್ನ ದೇಶಗಳಲ್ಲಿ ಸುಮಾರು 3,500 ಕಿಲೋಮೀಟರ್‌ಗಳಿಂದ ಬೇರ್ಪಟ್ಟಿವೆ. ಆದರೆ ಈ ಎರಡು ರಾಷ್ಟ್ರಗಳನ್ನು ಮತ್ತು ಅದರ ಜನರನ್ನು ಒಟ್ಟಿಗೆ ಬಂಧಿಸುವವನು ಭಗವಾನ್ ರಾಮ ಎಂದರೆ ಅಚ್ಚರಿಯಾದೀತು. 

ಹೌದು, ಅಯುತಾಯ ಎಂಬ ಪದವು ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಬೇರುಗಳನ್ನು ಹೊಂದಿದೆ. ಅಲ್ಲದೆ, ಬೌದ್ಧರ ನಾಡಾದರೂ ಥಾಯ್ಲೆಂಡ್‌ನ ರಾಜರುಗಳ ಹೆಸರೆಲ್ಲ ರಾಮ ಎಂದೇ ಇದೆ. ಇದರ ಹಿನ್ನೆಲೆ ಏನು ನೋಡೋಣ.

ಸಿಯಾಮ್ (ಥೈಲ್ಯಾಂಡ್) ಸಾಮ್ರಾಜ್ಯವನ್ನು 13ನೇ ಶತಮಾನದ ಮೊದಲಾರ್ಧದಲ್ಲಿ ಸ್ಥಾಪಿಸಲಾಯಿತು. ಬ್ಯಾಂಕಾಕ್‌ನಿಂದ ಉತ್ತರಕ್ಕೆ 70 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಅಯುಥಯಾ, ಸಿಯಾಮ್ ಸಾಮ್ರಾಜ್ಯದ ಪ್ರಮುಖ ನಗರ ಮತ್ತು ರಾಜಧಾನಿಯಾಯಿತು. ಅಯುತಾಯ ಎಂಬ ಪದವು ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಬೇರುಗಳನ್ನು ಹೊಂದಿದೆ. ಅಯುತಾಯವು ಈ ಪ್ರದೇಶದಲ್ಲಿ ಹಿಂದೂ ಧರ್ಮದ ಪ್ರಭಾವವನ್ನು ಸೂಚಿಸುತ್ತದೆ ಮತ್ತು ರಾಮಾಯಣದ ಥಾಯ್ ಆವೃತ್ತಿಯಾದ 'ರಾಮಕಿಯೆನ್' ನೊಂದಿಗೆ ಸಂಬಂಧ ಹೊಂದಿದೆ.

ರಾಮಮಂದಿರ ಉದ್ಘಾಟನೆಗೂ ಮುನ್ನ ಅಯೋಧ್ಯೆಯ ಹನುಮಾನ್ ಗರ್ಹಿ ಲಡ್ಡುಗೆ ಸಿಕ್ತು ಜಿಐ ಟ್ಯಾಗ್

ರಾಮಾಯಣದ ಪ್ರಭಾವ
ರಾಜ ರಾಮತಿಬೋಡಿ ಅಯುತಾಯ ಸಾಮ್ರಾಜ್ಯದ ಮೊದಲ ರಾಜ. ಆತನೇ ಈ ನಗರಕ್ಕೆ ಆಯುತಾಯ ಎಂದು ಹೆಸರಿಸಿದ್ದಾನೆ. ಈ ನಗರಕ್ಕೆ ರಾಜ ರಾಮತಿಬೋಡಿಯ ಹೆಸರೂ ರಾಮಾಯಣದ ಪ್ರಭಾವವನ್ನು ತೋರಿಸುತ್ತದೆ. ರಾಜಮನೆತನದ ಆಚರಣೆಗಳು ಹಿಂದೂ ವೈದಿಕ ಗ್ರಂಥಗಳನ್ನು ಆಧರಿಸಿವೆ ಮತ್ತು ರಾಜಮನೆತನವು ರಾಮಾಯಣದಲ್ಲಿ ಉಲ್ಲೇಖಿಸಿದಂತೆ ಭಗವಾನ್ ರಾಮನಿಂದ ಸಾಕಾರಗೊಂಡ ಧಾರ್ಮಿಕ-ರಾಜಕೀಯ ಸಿದ್ಧಾಂತವನ್ನು ಅಳವಡಿಸಿಕೊಂಡಿದೆ.

ರಾಮ ಎಂಬ ರಾಜ
ಸಿಯಾಮ್‌ನ ಚಕ್ರಿ ರಾಜವಂಶದ ಸ್ಥಾಪಕ ರಾಜ ರಾಮ I, ಅವರು 1782ರಲ್ಲಿ ಸಿಂಹಾಸನಕ್ಕೆ ಏರಿದಾಗ, ಅವರು ಅಯುತಾಯ ಸಾಮ್ರಾಜ್ಯದ ಸ್ಥಾಪಕನಂತೆ ರಾಮತಿಬೋಡಿ ಎಂಬ ಹೆಸರನ್ನು ಪಡೆದರು. ಅಂದಿನಿಂದ, ಥೈಲ್ಯಾಂಡ್‌ನ ಎಲ್ಲಾ ರಾಜರು ರಾಮ ಎಂಬ ಹೆಸರನ್ನು ಹೊಂದಿದ್ದಾರೆ. ರಾಮ I, ರಾಮ II, ರಾಮ III ಮತ್ತು ಈಗ ರಾಮ್ X ಅವರು ದೇಶವನ್ನು ಆಳುತ್ತಿದ್ದಾರೆ. ಒಟ್ಟಿನಲ್ಲಿ ರಾಮರಾಜ್ಯವನ್ನು ಭಾರತ ಮತ್ತು ಥಾಯ್ಲೆಂಡ್ ಎರಡೂ ದೇಶಗಳು ಬಯಸುತ್ತವೆ.

ರಾಮಾಯಣದ ಥಾಯ್ ಆವೃತ್ತಿ
ರಾಮಾಯಣವನ್ನು ಬೌದ್ಧ ಧರ್ಮ ಪ್ರಚಾರಕರು ಆಗ್ನೇಯ ಏಷ್ಯಾಕ್ಕೆ ತಂದರು. ಥಾಯ್ ಆವೃತ್ತಿಯನ್ನು ಅಯುತಾಯ ಸಾಮ್ರಾಜ್ಯದ ಸಮಯದಲ್ಲಿ ಬರೆಯಲಾಗಿದೆ ಎಂದು ಹೇಳಲಾಗುತ್ತದೆ. ನಂತರ ರಾಜ ರಾಮ I ಇಂದು ಗುರುತಿಸಲ್ಪಟ್ಟಿರುವ ರಾಮಕಿಯೆನ್ನ ಮೊದಲ ಆವೃತ್ತಿಯನ್ನು ಸಂಗ್ರಹಿಸಿದರು.ಸಾಮ್ಯತೆಗಳು ಇಲ್ಲಿಗೆ ನಿಲ್ಲುವುದಿಲ್ಲ. ಭಾರತವು ಕಾರ್ತಿಕ್ ಪೂರ್ಣಿಮಾ ಮತ್ತು ದೇವ್ ದೀಪಾವಳಿಯನ್ನು ಆಚರಿಸುತ್ತಿದ್ದಂತೆ, ಥೈಲ್ಯಾಂಡ್ ದೀಪಗಳ ಹಬ್ಬ ಎಂದು ಕರೆಯಲ್ಪಡುವ ಲಾಯ್ ಕ್ರಾಥಾಂಗ್ ಅನ್ನು ಆಚರಿಸುತ್ತದೆ. ಅಲ್ಲದೆ, ಥಾಯ್ಲೆಂಡ್‌ನ ಪ್ರಮುಖ ಸ್ಥಳಗಳಲ್ಲಿ ಶಿವ, ಪಾರ್ವತಿ, ಗಣೇಶ ಮತ್ತು ಇಂದ್ರನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.

ಭಾರತಕ್ಕೆ ತಟ್ಟಿದ ಭೂಕಂಪ ಆತಂಕ, ದಹೆಲಿ-ರಾಷ್ಟ್ರರಾಜಧಾನಿ ವ್ಯಾಪ್ತಿಯಲ್ಲಿ ಕಂಪಿಸಿದ ಭೂಮಿ

ಐತಿಹಾಸಿಕ ನಗರವಾದ ಆಯುತಾಯ 14ರಿಂದ 18ನೇ ಶತಮಾನದವರೆಗೆ ಪ್ರವರ್ಧಮಾನಕ್ಕೆ ಬಂದಿತು. ಆ ಸಮಯದಲ್ಲಿ ಇದು ಪ್ರಪಂಚದ ಅತಿದೊಡ್ಡ ನಗರ ಪ್ರದೇಶಗಳಲ್ಲಿ ಒಂದಾಗಿ ಮತ್ತು ಜಾಗತಿಕ ರಾಜತಾಂತ್ರಿಕ ಮತ್ತು ವಾಣಿಜ್ಯ ಕೇಂದ್ರವಾಗಿ ಬೆಳೆಯಿತು. ನಗರವನ್ನು 1767ರಲ್ಲಿ ಬರ್ಮೀಸ್ ಸೈನ್ಯವು ದಾಳಿ ಮಾಡಿ ನೆಲಸಮಗೊಳಿಸಿತು. ಅವರು ನಗರವನ್ನು  ಸುಟ್ಟುಹಾಕಿದರು ಮತ್ತು ನಿವಾಸಿಗಳನ್ನು ನಗರವನ್ನು ತ್ಯಜಿಸಲು ಒತ್ತಾಯಿಸಿದರು. ನಂತರ ನಗರವನ್ನು ಎಂದಿಗೂ ಪುನರ್ನಿರ್ಮಿಸಲಾಗಿಲ್ಲ ಮತ್ತು ಇಂದು ಇದನ್ನು ವ್ಯಾಪಕವಾದ ಪುರಾತತ್ತ್ವ ಶಾಸ್ತ್ರದ ಸ್ಥಳವೆಂದು ಕರೆಯಲಾಗುತ್ತದೆ.

ಥಾಯ್ಲೆಂಡ್‌ನಿಂದ ಅಯೋಧ್ಯೆಗೆ ಬಂದಿದೆ ಮಣ್ಣು
ಭಗವಾನ್ ರಾಮನು ಥಾಯ್ ಸಂಸ್ಕೃತಿಯಲ್ಲಿ ಎಷ್ಟು ಬೇರೂರಿದ್ದಾನೆ ಎಂದರೆ ಅವರು ಅಯೋಧ್ಯೆಯ ರಾಮ ಜನ್ಮಭೂಮಿಗೆ ಮಣ್ಣನ್ನು ಸಹ ಕಳುಹಿಸಿದ್ದಾರೆ. 

Follow Us:
Download App:
  • android
  • ios