Asianet Suvarna News Asianet Suvarna News

New Year Mantra: ಹೊಸ ವರ್ಷದ ಸುಖ-ಸಮೃದ್ಧಿಗೆ ಗ್ರಹದೋಷ ನಿವಾರಣಾ ಮಂತ್ರಗಳು!

ವ್ಯಕ್ತಿಯು ಜೀವನದಲ್ಲಿ ನೆಮ್ಮದಿಯನ್ನು ಕಾಣಲು ಜಾತಕದಲ್ಲಿ ಗ್ರಹ ಗತಿಗಳ ಸ್ಥಿತಿಯು ಉತ್ತಮವಾಗಿರಬೇಕಾಗುತ್ತದೆ. ಗ್ರಹಗಳ ಸ್ಥಿತಿ ನೀಚವಾಗಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ಪರಿಹಾರವಾಗಿ ಆಯಾ ಗ್ರಹಗಳಿಗೆ ಸಂಬಂಧಿಸಿದಂತೆ ಕೆಲವು ಮಂತ್ರಗಳನ್ನು ಪಠಿಸುವುದರಿಂದ ತೊಂದರೆಗಳು ನಿವಾರಣೆಯಾಗಿ, ಜೀವನದಲ್ಲಿ ಸುಖ ಸಮೃದ್ಧಿ ನೆಲೆಸುತ್ತದೆ. ಆ ಮಂತ್ರಗಳು ಯಾವುವು ಎಂಬುದನ್ನು ತಿಳಿಯೋಣ.

Chanting graha dosha nivarana mantra for prosperity
Author
Bangalore, First Published Dec 27, 2021, 6:13 PM IST

ಜ್ಯೋತಿಷ್ಯ ಶಾಸ್ತ್ರದ (Astrology ) ಪ್ರಕಾರ ವ್ಯಕ್ತಿಯು ಜೀವನದಲ್ಲಿ ಸಂತೋಷ (Happiness) ಮತ್ತು ನೆಮ್ಮದಿಯಿಂದ ಬದುಕಲು ಗ್ರಹಗಳ (Planets) ಸ್ಥಿತಿಗತಿ ಅತ್ಯಂತ ಮುಖ್ಯವಾಗಿರುತ್ತದೆ (Important). ಹಾಗಾಗಿ ಶಾಸ್ತ್ರದಲ್ಲಿ ಗ್ರಹಗಳು ನೀಚ  ಸ್ಥಿತಿಯಲ್ಲಿದ್ದಾಗ ಅದರಿಂದ ಉಂಟಾಗುವ ಅಶುಭ ಪ್ರಭಾವಗಳನ್ನು (Ill effects) ನಿವಾರಿಸಿಕೊಳ್ಳಲು ಕೆಲವು ಪ್ರಭಾವಿ ಮಂತ್ರಗಳನ್ನು (Mantra) ತಿಳಿಸಿದ್ದಾರೆ. ಗ್ರಹದೋಷಗಳಿದ್ದಲ್ಲಿ ಆಯಾ ಗ್ರಹಕ್ಕೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುವುದರಿಂದ ಅಭಿವೃದ್ಧಿಯನ್ನು (Improvement) ಕಾಣಬಹುದಾಗಿದೆ. ಇನ್ನು ಕೆಲವು ದಿನಗಳಲ್ಲಿ ಕ್ಯಾಲೆಂಡರ್ ಹೊಸ ವರ್ಷವು (New year) ಆರಂಭವಾಗಲಿದೆ. ಈ ಹೊಸ ವರ್ಷದಲ್ಲಿ ಸುಖ - ಸಂತೋಷವನ್ನು ಕಾಣಲು ಗ್ರಹಗಳ ಸ್ಥಿತಿಯು ಉತ್ತಮವಾಗಿರುವುದು ಅವಶ್ಯಕ ಆಗಿರುತ್ತದೆ. ಹಾಗಾಗಿ ಗ್ರಹದೋಷಗಳ ಪರಿಹಾರಕ್ಕೆ ಕೆಲವು ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಸಮೃದ್ಧಿಯನ್ನು (Prosperity) ಕಾಣಬಹುದಾಗಿರುತ್ತದೆ. ಆಯಾ ಗ್ರಹಕ್ಕೆ ಸಂಬಂಧಿಸಿದ  ಮಂತ್ರಗಳ ಬಗ್ಗೆ ತಿಳಿಯೋಣ...

ಸೂರ್ಯ (Sun)
ಸೂರ್ಯಗ್ರಹದ ಸ್ಥಿತಿ ಜಾತಕದಲ್ಲಿ ನೀಚ ಸ್ಥಾನದಲ್ಲಿದ್ದಾಗ ಶಾರೀರಿಕ (Physical) ಸಮಸ್ಯೆಗಳು (Problems) ಉಂಟಾಗುತ್ತವೆ. ಅಷ್ಟೇ ಅಲ್ಲದೆ ಯಶಸ್ಸಿನ ಮೇಲೆ ನಕಾರಾತ್ಮಕ ಪರಿಣಾಮಗಳಾಗುತ್ತವೆ (Negative effects).  ಇದ್ದಕ್ಕೆ ಪ್ರತಿನಿತ್ಯ (Daily) ಸೂರ್ಯದೇವನಿಗೆ ಅರ್ಘ್ಯ ನೀಡುವುದಲ್ಲದೆ, “ಓಂ ಘೃಣಿ ಸೂರ್ಯಾಯ ನಮಃ” ಎಂಬ ಮಂತ್ರವನ್ನು ಪಠಿಸಬೇಕು. ಸೂರ್ಯನಿಗೆ ಜಲವನ್ನು (Water) ಅರ್ಪಿಸಿದ ನಂತರ ಪೂರ್ವಾಭಿಮುಖವಾಗಿ ಕೆಂಪು ಆಸನದ ಮೇಲೆ ಕುಳಿತುಕೊಳ್ಳಬೇಕು. ಬಳಿಕ 108 ಬಾರಿ ಈ ಮಂತ್ರವನ್ನು ಪಠಿಸಬೇಕು. 
ಯಹಿ ಸೂರ್ಯ ಸಹಸ್ತ್ರಾಂಶೋ ತೇಜೋರಾಶೆ ಜಗತ್ಪತೆ/ ಅನುಕಂಪಯ ಮಾಂ ಭಕ್ತ್ಯಾ ಗೃಹಣಾರ್ಘ್ಯ ದಿವಾಕರ//

ಚಂದ್ರ (Moon)
ಚಂದ್ರಗ್ರಹವನ್ನು ಮನೋ ಕಾರಕ ಗ್ರಹವೆಂದು ಕರೆಯುತ್ತಾರೆ. ಜಾತಕದಲ್ಲಿ (Horoscope) ಈ ಗ್ರಹವು ನೀಚ ಸ್ಥಾನದಲ್ಲಿದ್ದರೆ  ಕಲಹಗಳು, ಮಾನಸಿಕ ಕಿರಿಕಿರಿಗಳು, ಖಿನ್ನತೆಗಳು (Depression), ಆರ್ಥಿಕ ಸೇರಿದಂತೆ ಇನ್ನಿತರ ಸಮಸ್ಯೆಗಳು (Financial problems) ಉಂಟಾಗುತ್ತವೆ. ಇವುಗಳಿಂದ ಮುಕ್ತಿ ಪಡೆಯಲು ಈ ಕೆಳಗಿನ ಮಂತ್ರವನ್ನು ಪ್ರತಿ ನಿತ್ಯವು ಜಪಿಸಬೇಕು. 
ಓಂ ಐಂ ಕ್ಲಿಂ ಸೋಮಾಯ ನಮಃ 
ಓಂ ಶ್ರಾಂ ಶ್ರೀಂ ಶ್ರೌಂ ಸಃ ಚಂದ್ರಮಸೇ ನಮಃ 

ಮಂಗಳ (Mars)
ವ್ಯಕ್ತಿಯು ಜೀವನದಲ್ಲಿ (Life) ಪ್ರಭಾವಿ ಶಕ್ತಿಯನ್ನು ಹಾಗೂ ಯಶಸ್ಸನ್ನು (Success) ಪಡೆದುಕೊಳ್ಳಲು ಮಂಗಳ ಗ್ರಹವು ಉಚ್ಛ ಸ್ಥಿತಿಯಲ್ಲಿರಬೇಕು. ಮಂಗಳ ಗ್ರಹವು ನೀಚ ಸ್ಥಿತಿಯಲ್ಲಿದ್ದರೆ ಸಫಲತೆ ಎಂಬುದು ಮರೀಚಿಕೆ. ಹೀಗಾಗಿ ಯಶಸ್ಸನ್ನು ಕಾಣುವುದು ಕಷ್ಟಕರವಾಗುತ್ತದೆ (Difficult). ಮಂಗಳ ಗ್ರಹವು ಶುಭ ಪ್ರಭಾವವನ್ನು ನೀಡಲು ಈ ಕೆಳಗಿನ ಮಂತ್ರಗಳನ್ನು ಪಠಿಸಬೇಕು.
ಅಂ ಅಂಗಾರಕಾಯ ನಮಃ
ಧರಣಿ ಗರ್ಭ ಸಂಭೂತ ವಿದ್ಯುತ್ಕಾಂತಿ ಸಮಪ್ರಭಮ್/ ಕುಮಾರಂ ಶಕ್ತಿಹಸ್ತಂ ಚ  ಮಂಗಲಂ ಪ್ರಣಮಾಮ್ಯಹಂ//

ಬುಧ (Mercury)
ಒಂಭತ್ತು ಗ್ರಹಗಳಲ್ಲಿ (Nine planets ) ಬುಧ ಗ್ರಹವು ಶಾರೀರಿಕ ರೂಪದಲ್ಲಿ ನೀಚವಾಗಿಯು, ಬೌದ್ಧಿಕ ರೂಪದಲ್ಲಿ ಉಚ್ಛವಾಗಿಯೂ ಇರುತ್ತದೆ. ಹಾಗಾಗಿ ಬುಧ ಗ್ರಹದ ಕೃಪೆ (Blessings) ಎಲ್ಲರಿಗೂ ಅತ್ಯಂತ ಅವಶ್ಯಕವಾಗಿರುತ್ತದೆ. ಬುಧ ಗ್ರಹದ ಉತ್ತಮ ಪ್ರಭಾವಗಳನ್ನು ಪಡೆಯಲು ಈ ಬೀಜ ಮಂತ್ರವನ್ನು ಪಠಿಸಿ...
ಓಂ ಬ್ರಾಂ ಬ್ರೀಂ ಬ್ರೌಂ ಸಃ ಬುಧಾಯ ನಮಃ

ಇದನ್ನು ಓದಿ: Planetary Influence: ಈ ಗ್ರಹಗಳ ಪ್ರಭಾವದಿಂದ ಅಪರಾಧಿಗಳಾದೀರಿ ಹುಷಾರ್!

ಗುರು (Jupiter)
ಗುರು ಗ್ರಹದ ಶುಭ ಪ್ರಭಾವದಿಂದ ಸುಖ, ಸಮೃದ್ಧಿ, ಧನ ಸಂಪತ್ತು (Money) ಮತ್ತು ಧೀರ್ಘಾಯಸ್ಸನ್ನು ಪಡೆಯಬಹುದು. ಗ್ರಹಗಳ ಗುರು ಬೃಹಸ್ಪತಿಯಾಗಿದೆ. ಗುರು ಗ್ರಹವು ಅಶುಭ ಪ್ರಭಾವ ಬೀರಿದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಮಂತ್ರವನ್ನು 108 ಬಾರಿ ಜಪಿಸುವುದರಿಂದ ಗುರುಗ್ರಹದಿಂದ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. 

ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಂ/ ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಂ//

ಶುಕ್ರ (Venus)
ಜಾತಕದಲ್ಲಿ ಶುಕ್ರ ಗ್ರಹವು ನೀಚ ಸ್ಥಿತಿಯನ್ನು ತಲುಪಿದರೆ ಆರ್ಥಿಕ ಸಮಸ್ಯೆಗಳು (Financial problems) ಎದುರಾಗುತ್ತವೆ. ಭೌತಿಕ ಸುಖದ ಕಾರಕ ಗ್ರಹ ಶುಕ್ರ. ಹಾಗಾಗಿ ಶುಕ್ರ ಗ್ರಹವು ನೀಚ ಸ್ಥಿತಿಯಲ್ಲಿದ್ದರೆ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸುಖ-ಶಾಂತಿ ಮತ್ತು ಸಮೃದ್ಧಿಗಾಗಿ ಶುಕ್ರಗ್ರಹದ ಶುಭ ಪ್ರಭಾವಕ್ಕೆ ಈ ಮಂತ್ರವನ್ನು ಪಠಿಸಿರಿ.
ಓಂ ಶುಂ ಶುಕ್ರಾಯ ನಮಃ 

ಶನಿ (Saturn)
ಜೀವನದಲ್ಲಿ ನೆಮ್ಮದಿಯನ್ನು ಕಾಣಲು ಶನಿ ಗ್ರಹದ ಸ್ಥಿತಿ ಉತ್ತಮವಾಗಿರುವುದು ಅವಶ್ಯಕ. ಶನಿಗ್ರಹದ ಅಶುಭ ಸ್ಥಿತಿಯು ಅನೇಕ ತೊಂದರೆಗಳಿಗೆ (Problems) ಕಾರಣವಾಗುತ್ತದೆ. ಶನಿಗ್ರಹವು ಶುಭ ಸ್ಥಿತಿಯಲ್ಲಿದ್ದರೆ ಅನೇಕ ರೀತಿಯಲ್ಲಿ ಒಳಿತನ್ನು ಕಾಣಬಹುದಾಗಿದೆ. ಶನಿಗ್ರಹದ ಕೃಪೆ ಪಡೆಯಲು ಈ ಮಂತ್ರವನ್ನು ಪಠಿಸಬೇಕು.
ಓಂ ಶಂ ಶನೇಶ್ವರಾಯ ನಮಃ
ಓಂ ಪ್ರಾಂ ಪ್ರೀಂ ಪ್ರೌಂ ಸಂ ಶನೇಶ್ವರಾಯ ನಮಃ

ಇದನ್ನು ಓದಿ: Mercury Transit: ಬುಧನ ರಾಶಿ ಪರಿವರ್ತನೆಯಿಂದ ಐದು ರಾಶಿಯವರಿಗೆ ಬಂಪರ್!

ರಾಹು- ಕೇತು (Rahu - Ketu)
ಛಾಯಾ ಗ್ರಹಗಳಾದ ರಾಹು ಮತ್ತು ಕೇತುಗ್ರಹಗಳ ಅಶುಭ ಪ್ರಭಾವದಿಂದ  ಜೀವನದಲ್ಲಿ ಯಶಸ್ಸು ಸಿಗುವುದು ಕಷ್ಟವಾಗುತ್ತದೆ. ಹಿರಿಯರಿಗೆ ಗೌರವ (Respect) ನೀಡುವುದು ಮತ್ತು ಅವರ ಸೇವೆ (Service) ಮಾಡುವುದರಿಂದ ಈ ಗ್ರಹಗಳ ಅಶುಭ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ಈ ಮಂತ್ರಗಳನ್ನು ಜಪಿಸುವುದರಿಂದ (Chanting) ಒಳಿತಾಗುತ್ತದೆ.
ರಾಹು- ಓಂ ಭ್ರಾಂ ಭ್ರೀಂ ಭ್ರೌಂ ಸಃ ರಾಹವೇ ನಮಃ
ಕೇತು- ಓಂ ಕೇಂ ಕೇತವೇ ನಮಃ

Follow Us:
Download App:
  • android
  • ios