Asianet Suvarna News Asianet Suvarna News

Fact Check: ಹತ್ರಾಸ್ ಅತ್ಯಾಚಾರ:ಠಾಕೂರದ್ದು ಬಿಸಿ ರಕ್ತ ಎಂದರಾ ಯೋಗಿ ಆದಿತ್ಯನಾಥ್?

ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ ದಲಿತ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಠಾಕೂರ್ ಸಮುದಾಯದ ನಾಲ್ವರನ್ನು ಬಂಧಿಸಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಠಾಕೂರರ ಪರ ಬ್ಯಾಟಿಂಗ್ ಮಾಡಿದರೆ? ನಿಜನಾ ಈ ಸುದ್ದಿ? 

Fact check of Yogi adithyanath spoke accused Favor hls
Author
Bengaluru, First Published Oct 6, 2020, 9:32 AM IST

ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ ದಲಿತ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೂ ಉತ್ತರ ಪ್ರದೇಶ ಸರ್ಕಾರ ವಹಿಸಿದೆ. ಈ ಆರೋಪದ ಮೇಲೆ ಠಾಕೂರ್‌ ಸಮುದಾಯದ ನಾಲ್ವರು ಆರೋಪಿಗಳನ್ನೂ ಬಂಧಿಸಲಾಗಿದೆ.

ಈ ನಡುವೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ‘ಠಾಕೂರರದ್ದು ಬಿಸಿ ರಕ್ತ. ಇಂಥ ತಪ್ಪುಗಳು ಆಗಾಗ ಆಗುತ್ತಿರುತ್ತವೆ’ ಎಂದು ಹೇಳಿದ್ದಾರೆ ಎನ್ನಲಾದ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಸುದ್ದಿವಾಹಿನಿಯೊಂದರ ಬ್ರೇಕಿಂಗ್‌ ನ್ಯೂಸ್‌ ಸ್ಕ್ರೀನ್‌ಶಾಟ್‌ ರೀತಿಯಲ್ಲಿ ಈ ಹೇಳಿಕೆ ವೈರಲ್‌ ಆಗುತ್ತಿದೆ. ನೆಟ್ಟಿಗರು ಇದನ್ನು ಪೋಸ್ಟ್‌ ಮಾಡಿ ಯೋಗಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸಾಮೂಹಿಕ ಅತ್ಯಾಚಾರವನ್ನು ಖಂಡಿಸದೆ ಯೋಗಿ ಠಾಕೂರರ ಪರವಾಗಿ ನಿಂತಿದ್ದಾರೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

Fact check of Yogi adithyanath spoke accused Favor hls

 fact Check: ಹತ್ರಾಸ್ ಆರೋಪಿ ತಂದೆ ಜೊತೆ ಕಾಣಿಸಿಕೊಂಡ್ರಾ ಮೋದಿ?

ಆದರೆ ನಿಜಕ್ಕೂ ಯೋಗಿ ಆದಿತ್ಯನಾಥ್‌ ಈ ಹೇಳಿಕೆ ನೀಡಿದ್ದರೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ, ಆಜ್‌ತಕ್‌ ಸುದ್ದಿವಾಹಿನಿಯ ಹಳೆಯ ಬ್ರೇಕಿಂಗ್‌ ನ್ಯೂಸನ್ನು ಫೋಟೋಶಾಪ್‌ ಮೂಲಕ ಎಡಿಟ್‌ ಈ ಸುದ್ದಿ ಹರಡಲಾಗಿದೆ ಎಂದು ತಿಳಿದುಬಂದಿದೆ. ರಿವರ್ಸ್‌ ಇಮೇಜ್‌ನಲ್ಲಿ ಈ ಬಗ್ಗೆ ಪರಿಶೀಲಿಸಿದಾಗ ಯಾವುದೇ ಸುದ್ದಿವಾಹಿನಿಗಳೂ ಈ ಬಗ್ಗೆ ವರದಿ ಮಾಡಿಲ್ಲ. ಯೋಗಿ ಅವರ ಟ್ವೀಟರ್‌ ಟೈಮ್‌ಲೈನ್‌ನಲ್ಲೂ ಈ ಕುರಿತ ಹೇಳಿಕೆ ಕಂಡುಬಂದಿಲ್ಲ. ಬಳಿಕ ಸುದ್ದಿವಾಹಿನಿಯ ಹಳೆಯ ಬುಲೆಟಿನ್‌ಗಳನ್ನು ಪರಿಶೀಲಿಸಿದಾಗ ವೈರಲ್‌ ಸ್ಕ್ರೀನ್‌ಶಾಟ್‌ನ ಮೂಲ ಪತ್ತೆಯಾಗಿದೆ. ಸುದ್ದಿವಾಹಿನಿಯು ‘ಹಾಥ್ರಸ್‌ ಎಸ್‌ಪಿ ಮತ್ತು ಡಿಎಸ್‌ಪಿ ಅಮಾನತು’ ಎಂದು ಬ್ರೇಕ್ರಿಂಗ್‌ ನ್ಯೂಸ್‌ ನೀಡಿದ್ದ ವರದಿಯನ್ನೇ ತಿರುಚಿ ಈ ರೀತಿ ಸುಳ್ಳುಸುದ್ದಿ ಹಬ್ಬಿಸಲಾಗಿದೆ. ಹಾಗಾಗಿ ಈ ಸುದ್ದಿ ಸುಳ್ಳು.

- ವೈರಲ್ ಚೆಕ್ 

Follow Us:
Download App:
  • android
  • ios