Asianet Suvarna News Asianet Suvarna News

Crime News; ಬ್ರೇಕ್ ಅಪ್ ಮಾಡಿಕೊಂಡು ಬೇರೆ ಮದುವೆಯಾದವಳ ಹತ್ಯೆ!

* ನವವಿವಾಹಿತೆ ಹತ್ಯೆ ಮಾಡಿದ ಪಾಗಲ್ ಪ್ರೇಮಿ
* ಕಳೆದ ಅಕ್ಟೋಬರ್ ನಲ್ಲಿ ಮದುವೆಯಾಗಿತ್ತು
* ಇಬ್ಬರು ಪ್ರೀತಿಸುತ್ತಿದ್ದು ದೂರದೂರವಾಗಿದ್ದರು
* ಗಂಡ ಬಂದು ನೋಡಿದಾಗ ಪತ್ನಿ ಶವವಾಗಿದ್ದಳು

Upset with her for breaking up and getting married, man kills newly-wed woman mumbai mah
Author
Bengaluru, First Published Nov 8, 2021, 2:46 AM IST

ಮುಂಬೈ(ನ. 08)  ಮಹಾರಾಷ್ಟ್ರದ (Mumbai) ವಿರಾರ್‌ನಲ್ಲಿ ವ್ಯಕ್ತಿಯೊಬ್ಬ ನವವಿವಾಹಿತೆಯೊಬ್ಬಳನ್ನು(Murder)  ಕೊಂದಿದ್ದಾನೆ.  ತನ್ನನ್ನು ಮದುವೆಯಾಗುತ್ತೇನೆ ಎಂದಿದ್ದ ಹುಡುಗಿ ಬೇರೆಯವನ ಮದುವೆ (Marriage)  ಆಗಿದ್ದಕ್ಕೆ ಕೋಪಗೊಂಡು ಈ ಕೆಲಸ ಮಾಡಿದ್ದಾನೆ.

ವಿರಾರ್‌ನಲ್ಲಿರುವ ಪತಿಯ ಮನೆಯಲ್ಲಿ ಮಹಿಳೆ ಶವವಾಗಿ ಪತ್ತೆಯಾಗಿದ್ದಾಳೆ.  ಮೃತರನ್ನು ಪ್ರಿಯಾ ಕಾಂಬಳೆ ಎಂದು ಗುರುತಿಸಲಾಗಿದೆ.  ಘಟನೆ ಶುಕ್ರವಾರ ನಡೆದಿದ್ದು, ಶನಿವಾರ ಬೆಳಗ್ಗೆ ಮಹಿಳೆಯ ಪತಿ ಅಮರ್ ಕೆಲಸದಿಂದ ಮನೆಗೆ ಬಂದಾಗ ಬೆಳಕಿಗೆ ಬಂದಿದೆ.

ಅಮರ್  ಬೃಹತ್ ಮುಂಬೈ ವಿದ್ಯುತ್ ಸರಬರಾಜು ಸಂಸ್ಥೆಯಲ್ಲಿ (BEST) ಗುತ್ತಿಗೆ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಶುಕ್ರವಾರ ರಾತ್ರಿ 9.30ರ ಸುಮಾರಿಗೆ ಕೆಲಸ ಬಿಟ್ಟು ಹೊರಟಿದ್ದರು ಎಂದಿದ್ದರೂ ಆ  ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅಮರ್ ಕಂಡಿಲ್ಲ. ಹಾಗಾಗಿ ಕೆಲವು ಅನುಮಾನಗಳು  ಪ್ರಕರಣದಲ್ಲಿ ಎದ್ದಿವೆ.

ಶಿವಮೊಗ್ಗ; ಹುಚ್ಚು ಪ್ರೇಮ.. ದಟ್ಟ ಕಾಡಿನ ಮಧ್ಯೆ ಯುವತಿ ಶವ, ಕೊಂದವ ಆಸ್ಪತ್ರೆಯಲ್ಲಿದ್ದ!

ಕೊಲೆಗಾರ ಯಾರು:  ಮಹಿಳೆಯ ಗಂಡ ಕೆಲಸದಲ್ಲಿ ಇದ್ದಾನೆ ಎಂಬುದನ್ನು ಖಾತರಿ ಮಾಡಿಕೊಂಡ ಮಹಿಳೆಯ ಹಳೆಯ ಗೆಳೆಯ ಆಕೆಯ ಮನೆಗೆ ತೆರಳಿದ್ದಾನೆ.  ಖಾಸಗಿ ಕಂಪನಿಯಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುವ ಮೊಹಮ್ಮದ್ ಹಸೀನ್ ಯಾಸೀನ್ ಮಲಿಕ್  ಹತ್ಯೆಯ ಆರೋಪಿ. ಕೊಲೆಯಾದ ಮಹಿಳೆ ಮತ್ತು ಆರೋಪಿಗೆ ಮೊದಲಿನಿಂದಲೂ ಪರಿಚಯವಿತ್ತು. ಇಬ್ಬರು ಮದುವೆಯಾಗುವ ನಿರ್ಧಾರ ಮಾಡಿದ್ದರು. ಆದರೆ ಮಹಿಳೆಯ ಕುಟುಂಬದಿಂದ ವಿರೋಧ ಇದ್ದ ಕಾರಣ ಇಬ್ಬರ ನಡುವೆ ಬ್ರೇಕ್ ಅಪ್ ಆಗಿತ್ತು.

ಅಕ್ಟೋಬರ್ 21  ಅಮರ್ ಜತೆ ವಿವಾಹವಾಗಿತ್ತು. ಇದೇ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಪಾಗಲ್ ಪ್ರೇಮಿ ಮಹಿಳೆಯನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಆದರೆ ಪೊಲೀಸರು ಮಹಿಳೆಯ ಗಂಡನ ಪಾತ್ರದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.

ವಿವಾಹಿತ ಮಹಿಳೆಯನ್ನು ಪ್ರೀತಿ ಮಾಡುತ್ತಿದ್ದವ ಕೊನೆಗೆ ಆಕೆಯನ್ನು ಹತ್ಯೆ ಮಾಡಿದ್ದು ಅಲ್ಲದೇ  ಆಕೆಯ ಶವವನ್ನೇ ತಬ್ಬಿ ಮಲಗಿದ್ದ ಪ್ರಕರಣ ರಾಜಸ್ಥಾನ ಅಹೋರ್ ಪ್ರದೇಶದಿಂದ ವರದಿಯಾಗಿತ್ತು. 

ಪಾಗಲ್ ಪ್ರೇಮಿ ಬೆಂಗಳೂರಿನ ಟೆಕ್ಕಿ ಪ್ರೀತ್ಸೆ ಪ್ರೀತ್ಸೆ ಅಂತ ನಟಿ ಹಿಂದೆ ಬಿದ್ದಿದ್ದ ಪ್ರಕರಣವೂ ವರದಿಯಾಗಿತ್ತು.  ಕಾಲೇಜು ದಿನಗಳಿಂದ ಪರಿಚಯ ಆಗಿದ್ದ ಇಬ್ಬರು  ಎರಡು ಮೂರು ತಿಂಗಳು ಇಬ್ಬರೂ ಒಟ್ಟಿಗೆ ಓಡಾಡಿದ್ದರು ನಂತರ ಲವ್ ಮಾಡಲು ಇಷ್ಟವಿಲ್ಲದೆ ಬ್ರೇಕ್ ಅಪ್ ಆಗಿತ್ತು. ಇದರಿಂದ ಚಂದನ್ ಕೋಪಗೊಂಡಿದ್ದ. ಪ್ರಿಯಕರನ ಕಾಟ ತಾಳಲಾರದೆ ನಟಿ ಮನೆ ಬದಲಾಯಿಸಿದ್ದರು.  ಶಿವಮೊಗ್ಗದ ಹುಡುಗನೊಬ್ಬ ಪ್ರಿಯತಮೆಯ ಕತ್ತು ಕತ್ತರಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ರೀತಿಯ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. 

 

 

Follow Us:
Download App:
  • android
  • ios