Asianet Suvarna News Asianet Suvarna News

ಸಿಧು ಮೂಸೆವಾಲಾ ಹತ್ಯೆಗೂ ಮುನ್ನ ಆತನೊಂದಿಗೆ ಸೆಲ್ಫಿ ಕ್ಲಿಕ್ ಮಾಡಿದ್ದ ವ್ಯಕ್ತಿಯ ಬಂಧನ

ಸಿಧು ಮೂಸೆವಾಲಾ ಹತ್ಯೆಗೂ ಕೆಲ ಹೊತ್ತಿನ ಮುನ್ನ ಆತನೊಂದಿಗೆ ಸೆಲ್ಫಿ ಕ್ಲಿಕ್ ಮಾಡಿದ್ದ ಸಂದೀಪ್ ಸಿಂಗ್ ಅಲಿಯಾಸ್ ಖೇಕ್ಡಾ ಎನ್ನುವ ವ್ಯಕ್ತಿಯೊಂದಿಗೆ ಎಂಟು ಮಂದಿಯನ್ನು ಪಂಜಾಬ್ ಪೊಲೀಸ್ ಮಂಗಳವಾರ ಬಂಧಿಸಿದ್ದಾರೆ.

Man who clicked selfie with Sidhu Moose Wala before his murder among 8 arrested Punjab goldy brar lawrence bishnoi san
Author
Bengaluru, First Published Jun 7, 2022, 6:08 PM IST

ನವದೆಹಲಿ (ಜೂನ್ 7): ಪಂಜಾಬ್ ನ (Punjab) ಖ್ಯಾತ ಗಾಯಕ ಸಿಧು ಮೂಸೆವಾಲಾ (Sidhu Moose Wala) ಹತ್ಯೆ ಪ್ರಕರಣದಲ್ಲಿ  ಶೂಟರ್‌ಗಳಿಗೆ ಲಾಜಿಸ್ಟಿಕ್ಸ್ ಬೆಂಬಲ, ವಿಶ್ರಾಂತಿ ಮತ್ತು ಆಶ್ರಯ ನೀಡಿದ್ದಕ್ಕಾಗಿ ಪಂಜಾಬ್ ಪೊಲೀಸರು (Punjab Police) ಮಂಗಳವಾರ ಕನಿಷ್ಠ 8 ಮಂದಿಯನ್ನು ಬಂಧಿಸಿದ್ದಾರೆ. ಮೇ 29 ರಂದು ಸಿಧು ಮೂಸೆವಾಲಾರನ್ನು ಗುಂಡು ಹಾರಿಸಿ ಕೊಲ್ಲಲಾಗಿತ್ತು. ಸಿಧು ಮೂಸೆವಾಲಾ ಮೇಲೆ ಗುಂಡು ಹಾರಿಸುವ ಕೆಲ ಸಮಯದ ಮುನ್ನ ಆತನೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ಸಂದೀಪ್ ಸಿಂಗ್ ಅಲಿಯಾಸ್ ಖೇಕ್ಡಾ (Sandeep Singh alias Kekda) ಎನ್ನುವ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಮೇ 29 ರಂದು ಸಂಜೆ 4.30ರ ಸುಮಾರಿಗೆ ಸಿಧು ಮೂಸೆವಾಲಾ ಮನೆಯಿಂದ ಹೊರಟಿದ್ದರು. ಈ ವೇಳೆ ಅವರೊಂದಿಗೆ ನೆರಮನೆಯ ಗುರ್ವಿಂದರ್ ಸಿಂಗ್ (Gurwinder Singh) ಹಾಗೂ ಸಂಬಂಧಿ ಗುರುಪ್ರೀತ್ ಸಿಂಗ್  (Gurpreet Singh ) ಇದ್ದರು. ಮಹೀಂದ್ರಾ ಥಾರ್ (Mahindra Thar) ಕಾರಿನಲ್ಲಿ ಚಲಿಸುತ್ತಿದ್ದ ವೇಳೆ ಮೂಸೆವಾಲಾ ಮೇಲೆ ಗುಂಡಿನ ದಾಳಿಯಾಗಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಹರಿಯಾಣದ ಸಿರ್ಸಾದ ಸಂದೀಪ್ ಸಿಂಗ್ ಅಲಿಯಾಸ್ ಖೇಕ್ಡಾ, ಭಟಿಂಡಾದ ತಲ್ವಂಡಿ ಸಾಬೋದ ಮನ್ ಪ್ರೀತ್ ಸಿಂಗ್ ಅಲಿಯಾಸ್ ಮುನ್ನಾ, ಫರೀದ್ ಕೋಟ್ ನ ಧಾಯ್ ಪಾಯ್ ನ ಮನ್ ಪ್ರೀತ್ ಬಹು, ಅಮೃತಸರದ ಸಾರಜ್ ಮಿಂಟು, ಹರಿಯಾಣದ ಪ್ರಭ್ ದೀಪ್ ಸಿಧು, ಮೋನು ದಾಗರ್, ಪವನ್ ಬಿಷ್ಣೋಯಿ ಹಾಗೂ ನಸೀಬ್ ಅವರನ್ನು ಬಂಧಿಸಲಾಗಿದೆ.

ಒಟ್ಟಾರೆ, ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಒಟ್ಟು ನಾಲ್ವರು ಶೂಟರ್ ಗಳು ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರ ಪಾತ್ರಗಳನ್ನು ಬಹಿರಂಗಪಡಿಸಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ದರೋಡೆಕೋರರ ನಿಗ್ರಹ ಕಾರ್ಯಪಡೆ ಪರ್ಮೋದ್ ಬಾನ್ ಮಂಗಳವಾರ, ಗೋಲ್ಡಿ ಬ್ರಾರ್ ಮತ್ತು ಸಚಿನ್ ಥಾಪನ್ ಅವರ ನಿರ್ದೇಶನದ ಮೇರೆಗೆ ಸಂದೀಪ್ ಅಲಿಯಾಸ್ ಕೆಕ್ಡಾ, ಸ್ವತಃ ಅವರ ಅಭಿಮಾನಿಯ ಸೋಗಿನಲ್ಲಿ ಗಾಯಕನ ಚಲನವಲನಗಳ ಮೇಲೆ ಸೋಗು ಹಾಕುವ ಮೂಲಕ ನಿಗಾ ಇರಿಸಿದ್ದರು. ಗಾಯಕನ ಕೊಲೆಗೆ ಕೆಲವೇ ನಿಮಿಷಗಳ ಮೊದಲು ತನ್ನ ಮನೆಯಿಂದ ಹೊರಡುತ್ತಿದ್ದಾಗ ಕೆಕ್ಡಾ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು ಎಂದು ಹೇಳಿದ್ದಾರೆ.

"ಗಾಯಕನೊಂದಿಗೆ ಅವರ ಭದ್ರತಾ ಸಿಬ್ಬಂದಿಯಿಲ್ಲ, ಎಷ್ಟು ಮಂದಿ ಪ್ರಯಾಣಿಕರಿದ್ದಾರೆ, ವಾಹನದ ವಿವರಗಳೇನು, ಬುಲೆಟ್ ಪ್ರೂಫ್ ಅಲ್ಲದ ಮಹೀಂದ್ರಾ ಥಾರ್ ವಾಹನದಲ್ಲಿ ಹೊರಟಿದ್ದಾರೆ ಎನ್ನುವ ಮಾಹಿತಿಯನ್ನು ಖೇಕ್ಡಾ ವಿದೇಶದಿಂದ ಕಾರ್ಯನಿರ್ವಹಿಸುತ್ತಿರುವ ಶೂಟರ್ ಗಳೊಂದಿಗೆ ಹಂಚಿಕೊಂಡಿದ್ದ" ಎಂದು ಎಡಿಜಿಪಿ ಭಾನ್ ತಿಳಿಸಿದ್ದಾರೆ. ಗೋಲ್ಡಿ ಬ್ರಾರ್ ಮತ್ತು ಸಚಿನ್ ಥಾಪನ್ ಅವರ ಆಪ್ತ ಸಹಾಯಕರಾದ ಸರಾಜ್ ಮಿಂಟು ಅವರ ನಿರ್ದೇಶನದ ಮೇರೆಗೆ ಮನ್‌ಪ್ರೀತ್ ಮನ್ನಾ ಅವರು ಮನ್‌ಪ್ರೀತ್ ಬಹುವಿಗೆ ಟೊಯೊಟಾ ಕೊರೊಲ್ಲಾ ಕಾರನ್ನು ಒದಗಿಸಿದ್ದರು, ಅವರು ಶೂಟರ್‌ಗಳೆಂದು ಶಂಕಿಸಲಾದ ಇಬ್ಬರಿಗೆ ಕಾರನ್ನು ತಲುಪಿಸಿದ್ದರು.

ಸಲ್ಮಾನ್ ಖಾನ್ ಕೊಲೆಗೆ 4 ಲಕ್ಷ ಮೌಲ್ಯದ ರೈಫಲ್ ವ್ಯವಸ್ಥೆ ಮಾಡಿದ್ದ ಲಾರೆನ್ಸ್ ಬಿಷ್ಣೋಯಿ!

ಐದನೇ ಆರೋಪಿ ಪ್ರಭದೀಪ್ ಸಿದ್ದು ಅಲಿಯಾಸ್ ಪಬ್ಬಿ 2022 ರ ಜನವರಿಯಲ್ಲಿ ಹರಿಯಾಣದಿಂದ ಬಂದಿದ್ದ ಗೋಲ್ಡಿ ಬ್ರಾರ್‌ನ ಇಬ್ಬರು ಸಹಚರರಿಗೆ ಆಶ್ರಯ ನೀಡಿದ್ದ ಮತ್ತು ಅವರ ಮೂಲಕ ಸಿಧು ಮೂಸೆವಾಲಾ ಅವರ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಆಶ್ರಯ ನೀಡಿದ್ದಾನೆ ಎಂದು ಎಡಿಜಿಪಿ ಹೇಳಿದರು. ಇಬ್ಬರು ಶೂಟರ್‌ಗಳು ಮತ್ತು ಗೋಲ್ಡಿ ಬ್ರಾರ್‌ನ ನಿರ್ದೇಶನದಂತೆ ಈ ಕೊಲೆಯನ್ನು ನಡೆಸಲು ಶೂಟರ್‌ಗಳ ತಂಡವನ್ನು ಸಂಯೋಜನೆ ಮಾಡಲು ಸಹಾಯ ಮಾಡಿದ್ದರು.

Sidhu Moose wala Case ಅಮಿತ್ ಶಾ ಭೇಟಿ ಮಾಡಿದ ಸಿಧು ಮೂಸೆ ವಾಲ ಕುಟುಂಬ, ದುಃಖ ತಡೆಯಲಾಗದೆ ಕಣ್ಣೀರಿಟ್ಟ ತಂದೆ!

ಪವನ್ ಬಿಷ್ಣೋಯ್ ಮತ್ತು ನಸೀಬ್ ಅವರು ಬಲೆರೋ ವಾಹನವನ್ನು ಶೂಟರ್‌ಗಳಿಗೆ ನೀಡಿದ್ದರು ಮತ್ತು ಅವರಿಗೆ ಆಶ್ರಯತಾಣವನ್ನೂ ಒದಗಿಸಿದ್ದರು ಎಂದು ಹೇಳಿದ್ದಾರೆ. ಏತನ್ಮಧ್ಯೆ, ಐಜಿಪಿ ಪಿಎಪಿ ಜಸ್ಕರನ್ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡವು ವ್ಯೂಹಾತ್ಮಕವಾಗಿ ಕೆಲಸ ಮಾಡುತ್ತಿದೆ ಮತ್ತು ಅಪರಾಧದಲ್ಲಿ ಭಾಗಿಯಾಗಿರುವ ಗುರುತಿಸಲಾದ ಶೂಟರ್‌ಗಳು ಮತ್ತು ಇತರ ಆರೋಪಿಗಳನ್ನು ಬಂಧಿಸಲು ಸಂಘಟಿತ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಎಡಿಜಿಪಿ ಪರ್ಮೋದ್ ಬಾನ್ ಹೇಳಿದ್ದಾರೆ.

Follow Us:
Download App:
  • android
  • ios