Asianet Suvarna News Asianet Suvarna News

ಆನೇಕಲ್: ಕಾಂಗ್ರೆಸ್ ಪುರಸಭಾ ಸದಸ್ಯನನ್ನ ನಡುರಸ್ತೆಯಲ್ಲೇ ಹತ್ಯೆಗೈದ ಹಂತಕರು..!

ಹೊಂಚು ಹಾಕಿ ರವಿಯನ್ನ ಅಡ್ಡಗಟ್ಟಿ ಮಾರಕಸ್ತ್ರದಿಂದ ಹಲ್ಲೆ ನಡೆಸ ಕೊಲೆ ಮಾಡಿ ಹಂತಕರು ಎಸ್ಕೇಪ್ ಆಗಿದ್ದಾರೆ. ಯುವಕರು ಕಳೆದ 15 ದಿನದಿಂದ ಲಾಂಗ್ ಹಿಡಿದು ಓಡಾಡುತ್ತಿದ್ದರು ಎಂದು ತಿಳಿದು ಬಂದಿದೆ. ಎರಡು‌ ದಿನಗಳಿಂದ  ಲಾಂಗ್ ಮತ್ತು ಮಚ್ಚು ಹಿಡಿದು ಅಡ್ಡಾಡ್ಡಿದ್ದ ಪುಂಡರ ಬಗ್ಗೆ ಸುವರ್ಣ ನ್ಯೂಸ್  ವರದಿ ಮಾಡಿ ಎಚ್ಚರಿಸಿತ್ತು. ಅದೇ ಯುವಕರಿಂದ ಇಂದು ಪುರಸಭಾ ಸದಸ್ಯನನ್ನ ಕೊಲೆ ಮಾಡಿದೆ. 

congress municipal councilor ravi killed in anekal grg
Author
First Published Jul 24, 2024, 11:45 PM IST | Last Updated Aug 10, 2024, 1:55 PM IST

ಆನೇಕಲ್(ಜು.24):  ಕಾಂಗ್ರೆಸ್ ಪುರಸಭಾ ಸದಸ್ಯನನ್ನ ನಡು ರಸ್ತೆಯಲ್ಲಿ ಬರ್ಬರವಾಗಿ ಕೊಲೆಗೈದ ಘಟನೆ ಆನೇಕಲ್ ಪಟ್ಟಣದ ಬಹದ್ದೂರ್ ಪುರ ಬಳಿ ಇಂದು(ಬುಧವಾರ) ನಡೆದಿದೆ. ಆನೇಕಲ್ ಪುರಸಭಾ ಸದಸ್ಯ ರವಿ ಎಂಬಾತನೇ ಕೊಲೆಯಾದ ದುರ್ದೈವಿ.

ಹೊಂಚು ಹಾಕಿ ರವಿಯನ್ನ ಅಡ್ಡಗಟ್ಟಿ ಮಾರಕಸ್ತ್ರದಿಂದ ಹಲ್ಲೆ ನಡೆಸ ಕೊಲೆ ಮಾಡಿ ಹಂತಕರು ಎಸ್ಕೇಪ್ ಆಗಿದ್ದಾರೆ. ಯುವಕರು ಕಳೆದ 15 ದಿನದಿಂದ ಲಾಂಗ್ ಹಿಡಿದು ಓಡಾಡುತ್ತಿದ್ದರು ಎಂದು ತಿಳಿದು ಬಂದಿದೆ. ಎರಡು‌ ದಿನಗಳಿಂದ  ಲಾಂಗ್ ಮತ್ತು ಮಚ್ಚು ಹಿಡಿದು ಅಡ್ಡಾಡ್ಡಿದ್ದ ಪುಂಡರ ಬಗ್ಗೆ ಸುವರ್ಣ ನ್ಯೂಸ್  ವರದಿ ಮಾಡಿ ಎಚ್ಚರಿಸಿತ್ತು. ಅದೇ ಯುವಕರಿಂದ ಇಂದು ಪುರಸಭಾ ಸದಸ್ಯನನ್ನ ಕೊಲೆ ಮಾಡಿದೆ. 

ರಾಮನಗರ: ಪಿಎಸ್‌ಐನಿಂದ ಕಿರುಕುಳ, ಮಹಿಳೆ ಆತ್ಮಹತ್ಯೆಗೆ ಯತ್ನ

ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೇಕಲ್ ಆಸ್ಪತ್ರೆಯ ಶವಾಗಾರಕ್ಕೆ ಬೆಂಗಳೂರು ಗ್ರಾಮಾಂತರ  ಅಡೀಷನಲ್ ಎಸ್.ಪಿ ಎ.ಎಸ್.ಪಿ.ನಾಗೇಶ್ ಭೇಟಿ ನೀಡಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಗ್ರಾಮಾಂತರ ಎಸ್.ಪಿ.ಸಿ.ಕೆ ಬಾಬಾ ಅವರು, ರಾತ್ರಿ 8.30 ಸುಮಾರಿಗೆ ವ್ಯಕ್ತಿ ಒಬ್ಬ ಬಂದಿದ್ದಾನೆ. ಹೊರ ಬಂದ ನಂತರ ಮೂವರು ಅಟ್ಯಾಕ್ ಮಾಡಿದ್ದಾರೆ. ಕೂಡಲೇ ರವಿಯನ್ನು ಆಸ್ಪತ್ರೆಗೆ ತರಲಾಗಿತ್ತು. ಆರೋಪಿಗಳು ಯಾರು ಎಂದು ಗೊತ್ತಾಗಿದೆ. ಎರಡು ತಂಡಗಳನ್ನು ರಚನೆ‌ ಮಾಡಿದ್ದೇವೆ. ಸ್ವಲ್ಪ ದಿನದ ಹಿಂದೆ ಕಾರಿನ‌ ಗ್ಲಾಸ್ ಹಾಗೂ‌ ಮನೆಗೆ ಕಲ್ಲು ಹೊಡೆದಿದ್ರು. ಆ ಗ್ಯಾಂಗ್ ರವಿ ಜೊತೆಗೆ ಇದ್ರು..ಹೀಗಾಗಿ ರವಿಯನ್ನು ಕೊಲೆ ಮಾಡಿದ್ದಾರೆ ಎಂದು ಗೊತ್ತಾಗಿದೆ. ಇನ್ನು ಮುಂದೆ ಇಂತಹ ಸಮಾಜಘಾತುಕರ ವಿರುದ್ಧ ಕ್ರಮ ವಹಿಸುತ್ತೇವೆ ಎಂದು ಹೇಳಿದ್ದಾರೆ. 

Latest Videos
Follow Us:
Download App:
  • android
  • ios