Asianet Suvarna News Asianet Suvarna News

ಬಳ್ಳಾರಿ: ಹೆಂಡತಿ ಬಗ್ಗೆ ಕೆಟ್ಟದಾಗಿ ಬೈದ ಸ್ನೇಹಿತನ ಕೊಲೆ

*  ಬಳ್ಳಾರಿ ಬಸ್ ನಿಲ್ದಾಣದಲ್ಲಿ ಹಾಡಹಗಲೇ ಕೊಲೆ
*  ಕುಡಿದ ಮತ್ತಿನಲ್ಲಿ ಸ್ನೇಹಿತನ ಕೊಲೆ
*  ಮದ್ಯದ ಅಮಲಿನಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ
 

43 Year Old Man Murder in Ballari grg
Author
Bengaluru, First Published Jul 3, 2022, 4:00 AM IST | Last Updated Jul 3, 2022, 4:00 AM IST

ಬಳ್ಳಾರಿ(ಜು.03):  ಕಟ್ಟಡ ಕಾರ್ಮಿಕನೊಬ್ಬನ್ನ ಸ್ನೇಹಿತನೇ ಹತ್ಯೆ ಮಾಡಿದ ಘಟನೆ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಇಂದು(ಶನಿವಾರ) ನಡೆದಿದೆ.  ಆಂಧ್ರದ ರಾಯದುರ್ಗ ತಾಲೂಕಿನ ಚದಂ ದೊಡ್ಡಿ ಗ್ರಾಮದ ತಮ್ಮಣ್ಣ (43) ಕೊಲೆಯಾದ ವ್ಯಕ್ತಿ ಅಂತ ತಿಳಿದು ಬಂದಿದೆ.

ಕುಡಿದ ಮತ್ತಿನಲ್ಲಿ ತಮ್ಮಣ್ಣನನ್ನ ಸ್ನೇಹಿತ ಶ್ರೀರಾಮ್ ಎಂಬ ವ್ಯಕ್ತಿಯೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಕಲ್ಲಿನಿಂದ ತಮ್ಮಣ್ಣನ ತಲೆಗೆ ಜಜ್ಜಿ ಶ್ರೀರಾಮ್ ಕೊಲೆ ಮಾಡಿದ್ದಾನೆ. ವಿಷಯ ತಿಳಿದು ಕೂಡಲೇ ಕೆಎಸ್ಆರ್ಟಿಸಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.  

'ತುಂಬಾ ಒಳ್ಳೆ ಕೆಲಸ ಮಾಡಿದ್ದಿ ಬ್ರದರ್':‌ ಫೇಸ್‌ಬುಕ್‌ನಲ್ಲಿ ಕನ್ಹಯ್ಯಾ ಹತ್ಯೆ ವಿಡಿಯೋ ಹೊಗಳಿದ ವ್ಯಕ್ತಿ ಬಂಧನ!

ಸ್ಥಳಕ್ಕಾಗಮಿಸಿದ ಬ್ರೂಸ್ ಪೇಟೆ ಪೊಲೀಸರು ಆರೋಪಿ ಶ್ರೀರಾಮನ ಬಂಧಿಸಿದ್ದಾರೆ. ಶ್ರಿರಾಮಮ ಹೆಂಡತಿ ಬಗ್ಗೆ  ತಮ್ಮಣ್ಣ ಕೆಟ್ಟದಾಗಿ ಬೈದಿದ್ದಕ್ಕೆ ಸಿಟ್ಟಿಗೆದ್ದು ಕಲ್ಲಿನಿಂದ ಹೊಡೆದೆ ಎಂದು ಆರೋಪಿ ಶ್ರೀರಾಮ ಹೇಳಿದ್ದಾನೆ. 
ಕೊಲೆಯಾದ ತಮ್ಮಣ್ಣ  ಹಾಗೂ ಹತ್ಯೆ ಮಾಡಿದ ಆರೋಪಿ ಕಟ್ಟಡ ಕೆಲಸಕ್ಕೆ ಅಂತ ರಾಯದುರ್ಗದ ಚದಂದೊಡ್ಡಿ ಗ್ರಾಮದಿಂದ ಬಳ್ಳಾರಿಗೆ ಬಂದಿದ್ದರು ಅಂತ ಮಾಹಿತಿ ಲಭ್ಯವಾಗಿದೆ. ಕುಡಿದ ಮತ್ತಿನಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. 
 

Latest Videos
Follow Us:
Download App:
  • android
  • ios