India
ಬಿಜೆಪಿ ಮಹಿಳಾ ನಾಯಕಿ ನಾಜಿಯಾ ಇಲಾಹಿ ಖಾನ್ ಆಗಾಗ್ಗೆ ತಮ್ಮ ಹೇಳಿಕೆಗಳಿಂದ ಸುದ್ದಿಯಲ್ಲಿರುತ್ತಾರೆ. ಅವರು ಉಜ್ಜಯಿನಿಯಲ್ಲಿ ಬಾಬಾ ಮಹಾಕಾಲ್ ದರ್ಶನಕ್ಕೆ ಬಂದಿದ್ದಾರೆ. ರಂಜಾನ್ ಮತ್ತು ರಾಮನ ಬಗ್ಗೆ ಹೇಳಿಕೆ ನೀಡಿದ್ದಾರೆ.
ನಾಜಿಯಾ ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿದ್ದಾರೆ. ಅವರು ಮೂಲತಃ ಉತ್ತರ ಪ್ರದೇಶದ ಮುಜಾಫರ್ನಗರದ ನಿವಾಸಿ. ಅವರಿಗೆ ವಿಚ್ಛೇದನವಾಗಿದೆ. 2013ರಲ್ಲಿ ಡಾ. ಖಲೀಲುಲ್ಲಾ ಖಾನ್ ಅವರನ್ನು ವಿವಾಹವಾಗಿದ್ದರು. ಒಂದು ಮಗಳಿದ್ದಾಳೆ.
ಉಜ್ಜಯಿನಿಯಲ್ಲಿ ಬಾಬಾ ಮಹಾಕಾಲ್ ದರ್ಶನದ ನಂತರ ನಾಜಿಯಾ ಮಾತನಾಡಿ, ರಂಜಾನ್ ಗೆ ಮೊದಲು ಭಗವಾನ್ ರಾಮ ಬರುತ್ತಾರೆ. ಆ ಬಳಿಕ ಅಜಾನ್ನ ಶಬ್ದ ಜೀವಂತವಾಗಿರುತ್ತದೆ ಎಂದು ನಾನು ಜನರಿಗೆ ಅರ್ಥೈಸಲು ಬಯಸುತ್ತೇನೆ.
ಭಾರತದಲ್ಲಿ ಗಂಗಾ ಜಮುನಿ ಸಂಸ್ಕೃತಿ ಇದೆ. ಆದರೆ ಇಲ್ಲಿ ಕೆಲವರು ಕ್ರೂರ ಮೊಘಲ್ ದೊರೆ ಔರಂಗಜೇಬ್ನನ್ನು ದೇವರಂತೆ ಪೂಜಿಸುತ್ತಾರೆ. ಅವರಿಗೆ ಔರಂಗಜೇಬ್ ಹೀರೋ ಆಗಿದ್ದಾನೆ ಎಂದು ನಾಜಿಯಾ ಕಿಡಿಕಾರಿದ್ದಾರೆ..
ಇಂದಿನ ಹಿಂದೂಸ್ತಾನ್ ಔರಂಗಜೇಬ್ನ ಮನಸ್ಥಿತಿಯನ್ನು ಹೊಂದಿರುವವರನ್ನು ಸಹಿಸುವುದಿಲ್ಲ. ನಾವು ಉಸ್ತಾದ್ ಬಿಸ್ಮಿಲ್ಲಾ ಖಾನ್ ಮತ್ತು ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು ಹೀರೋ ಎಂದು ಪರಿಗಣಿಸುತ್ತೇವೆ ಎಂದಿದ್ದಾರೆ.
ಪ್ರಸ್ತುತ ಸಂಭಲ್ನಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆದಿದೆ. ಬೆಂಗಳೂರು, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲೂ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹೀಗಾಗಿ ಆರ್ಎಸ್ಎಸ್ ಮುಂದೆ ಬರಬೇಕಿದೆ ಎಂದು ಹೇಳಿದ್ದಾರೆ.