ಸೂರ್ಯ ಗ್ರಹಣ: ಬಾದಾಮಿ ಬನಶಂಕರಿ ಭಕ್ತಾದಿಗಳೇ ಗಮನಿಸಿ

Jun 20, 2020, 12:06 PM IST

ಬೆಂಗಳೂರು (ಜೂ. 20): ಸೂರ್ಯ ಗ್ರಹಣ ನಭೋಮಂಡಲದ ಕೌತುಕ ಮಾತ್ರ ಅಲ್ಲ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಗತ್ತಿನ ಆಗು ಹೋಗುಗಳ ಬಗ್ಗೆ ತಿಳಿಸುವ ಪಂಚಾಂಗ. ನಾಳೆ ಸಂಭವಿಸಲಿರುವ ಸೂರ್ಯ ಗ್ರಹಣ ಅತೀ ದೊಡ್ಡ ಗ್ರಹಣವಾಗಿದ್ದು, ಕಂಕಣಾಕೃತಿಯಲ್ಲಿ ಕಾಣಿಸಿಕೊಳ್ಳಲಿದೆ. ನಾಡಿನ ಶಕ್ತಿಪೀಠವಾದ ಬಾಗಲಕೋಟೆಯ ಬನಶಂಕರಿ ದೇಗುಲದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ದೇಗುಲದ ಪ್ರಾಂಗಣದಲ್ಲಿ ಸ್ಯಾಸಿಟೈಸಿಂಗ್ ಮಾಡಲಾಗುತ್ತಿದೆ. ಭರುವ ಭಕ್ತರಿಗಾಗು ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಗ್ರಹಣ ಕಾಲದಲ್ಲಿ ನಾಳೆ ಭಕ್ತರಿಗೆ ಅವಕಾಶ ಇರುವುದಿಲ್ಲ ಎಂದು ಇಂದೇ ಸಾಕಷ್ಟು ಭಕ್ತರು ಆಗಮಿಸುತ್ತಿದ್ದಾರೆ. ಗ್ರಹಣ ಮೋಕ್ಷದ ಬಳಿಕ ದೇವಿಗೆ ಜಲಾಭಿಷೇಕ ಮಾಡಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

18 ವರ್ಷಗಳಿಗೊಮ್ಮೆ ಚೂಡಾಮಣಿ ಸೂರ್ಯಗ್ರಹಣ: ಏನ್ ಮಾಡ್ಬೇಕು? ಏನ್ ಮಾಡ್ಬಾರ್ದು?