BJPಯಲ್ಲಿ ಅಸಮಾಧಾನದ ಹೊಗೆ: ಯಡಿಯೂರಪ್ಪ ಮುಂದಿರುವ ದಾರಿಗಳೇನು?

May 30, 2020, 1:45 PM IST

ಬೆಂಗಳೂರು(ಮೇ.30): ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಕಿಚ್ಚು ಹೊತ್ತಿ ಉರಿಯುತ್ತಿದ್ದರೂ ಸಹಾ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಲ್ ಆಗಿದ್ದಾರೆ. ಈ ಸಂಕಷ್ಟದ ಸಂದರ್ಭದಲ್ಲಿ ಬಿಎಸ್‌ವೈ ಏನು ಮಾಡಬಹುದು ಎನ್ನುವ ಕುತೂಹಲ ಜೋರಾಗಿದೆ.

ಆಡಳಿತರೂಢ ಕೆಲ ಅತೃಪ್ತ ಬಿಜೆಪಿ ಶಾಸಕರು ಬೆಳಗಾವಿ ಶಾಸಕ ಉಮೇಶ್ ಕತ್ತಿ ನೇತೃತ್ವದಲ್ಲಿ ಸಭೆ ನಡೆಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಕೊರೋನಾ ಸಂಕಷ್ಟದ ಸಮಯದಲ್ಲಿ ಬಿಜೆಪಿ ಕೆಲ ನಾಯಕರ ಭಿನ್ನಮತ ಯಾವ ಹಂತಕ್ಕೆ ತಲುಪಬಹುದು ಎನ್ನುವ ಅಂದಾಜು ಸದ್ಯಕ್ಕಂತು ತಿಳಿಯುತ್ತಿಲ್ಲ.

'ಮೋದಿಜಿ ಬರೀ ವ್ಯಕ್ತಿಯಲ್ಲ; ದೊಡ್ಡ ಶಕ್ತಿ; ಅಭಿವೃದ್ಧಿಗೆ ಹೊಸ ಭಾಷ್ಯ ಬರೆದ ಹರಿಕಾರ'

ಈ ಕಾರಣದಿಂದಾಗಿ ಬಿ.ಎಸ್. ಯಡಿಯೂರಪ್ಪ ಯಾವ ತೀರ್ಮಾನ ತೆಗೆದುಕೊಳ್ಳಬಹುದು? ಬಿಎಸ್‌ವೈ ಮುಂದಿರುವ ದಾರಿಗಳೇನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್‌ ಇಲ್ಲಿದೆ ನೋಡಿ.