ರೇಖಾ ನನ್ನ ಮಗಳಿದ್ದಂತೆ, ನಾನ್ಯಾಕೆ ಕೊಲೆ ಮಾಡಿಸಲಿ; ಪೊಲೀಸರ ಮುಂದೆ ಮಾಲಾ ಹೈಡ್ರಾಮಾ

Jun 27, 2021, 5:58 PM IST

ಬೆಂಗಳೂರು (ಜೂ. 27): ಮಾಜಿ ಕಾರ್ಪೋರೇಟರ್ , ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ರೇಖಾ ಕೊಲೆಗೆ ನಾದಿನಿ ಮಾಲಾ ಹಾಗೂ ಮಗ ಅರುಣ್ ಸುಪಾರಿ ನೀಡಿರುವುದು ಬಹಿರಂಗವಾಗಿದೆ. ರೇಖಾ ಕಥೆ ಮುಗಿಸಲು 4 ತಿಂಗಳ ಹಿಂದೆ ಸ್ಕೆಚ್ ಹಾಕಿದ್ದರಂತೆ. ಇದಕ್ಕಾಗಿ ಮಾಲಾ ಪೀಟರ್ ಜೊತೆ ಸೇರಿ ಪ್ರೀ ಪ್ಲಾನ್ ನಡೆಸಿದ್ದಳಂತೆ. ಇಂದು ಪೊಲೀಸ್ ವಿಚಾರಣೆ ನಡೆಯುತ್ತಿದ್ದು, 'ರೇಖಾ ನನ್ನ ಮಗಳಿದ್ದಂತೆ. ನಾನ್ಯಾಕೆ ಆಕೆಯನ್ನು ಕೊಲೆ ಮಾಡಿಸಲಿ' ಎಂದು ಪೊಲೀಸರ ಮುಂದೆ ರೇಖಾ ಹೇಳಿದ್ಧಾಳೆ. 

ಮಾಜಿ ಕಾರ್ಪೋರೇಟರ್ ರೇಖಾ ಹತ್ಯೆ ಕೇಸ್: ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಅಸಲಿ ಕಾರಣ