Asianet Suvarna News Asianet Suvarna News

ಮಾಜಿ ಕಾರ್ಪೋರೇಟರ್ ರೇಖಾ ಹತ್ಯೆ ಕೇಸ್: ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಅಸಲಿ ಕಾರಣ

ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆಯಲ್ಲಿ ಇನ್ನಷ್ಟು ಮಾಹಿತಿ ಹೊರ ಬಂದಿದೆ. ಕದಿರೇಶ್ ಹತ್ಯೆ ಬಳಿಕ, ಕದಿರೇಶ್ ಸಹೋದರರು ಹಾಗೂ ಅಕ್ಕ ತಂಗಿಯರ ನಡುವೆ ಸಂಬಂಧ ಹಳಸಿತ್ತು. 

ಬೆಂಗಳೂರು (ಜೂ. 17): ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆಯಲ್ಲಿ ಇನ್ನಷ್ಟು ಮಾಹಿತಿ ಹೊರ ಬಂದಿದೆ. ಕದಿರೇಶ್ ಹತ್ಯೆ ಬಳಿಕ, ಕದಿರೇಶ್ ಸಹೋದರರು ಹಾಗೂ ಅಕ್ಕ ತಂಗಿಯರ ನಡುವೆ ಸಂಬಂಧ ಹಳಸಿತ್ತು. ಕೌಟುಂಬಿಕ ಕಲಹಗಳು, ಸ್ಥಳೀಯ ರಾಜಕೀಯ, ಹಣಕಾಸು ವಿಚಾರವಾಗಿ ಮನಸ್ತಾಪ ಉಂಟಾಗಿತ್ತು. ಜೊತೆಗೆ ಮಗ ರಾಹುಲ್‌ನನ್ನು ರಾಜಕೀಯವಾಗಿ ಬೆಳೆಸಲು ಮುಂದಾಗಿದ್ದರು. ಹೀಗಾಗಿ ಮಾಲಾ ಕುಟುಂಬವನ್ನು ದೂರವಿಟ್ಟಿದ್ದರು. ಇದೆಲ್ಲವೂ ರೇಖಾ ವಿರುದ್ಧ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.