ಸಿಎಂ ಬದಲಿಸಿದ್ರೆ ಉತ್ತರ ಕರ್ನಾಟಕ ನಾಯಕನಿಗೆ ನೀಡಲಿ: ಜಯಮೃತ್ಯುಂಜಯ ಸ್ವಾಮೀಜಿ

Jul 22, 2021, 4:02 PM IST

ಬೆಂಗಳೂರು(ಜು.22): ಯಡಿಯೂರಪ್ಪ ವಿಚಾರದಲ್ಲಿ ನಮ್ಮದು ತಟಸ್ಥ ನಿಲುವು, ನಾನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬಳಿ ಹೋಗೋದಿಲ್ಲ ಅಂತ ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಒಂದು ವೇಳೆ ಸಿಎಂ ಬದಲಿಸಿದ್ರೆ ಉತ್ತರ ಕರ್ನಾಟಕದ ನಾಯಕನಿಗೆ ಮುಖ್ಯಮಂತ್ರಿ ಸ್ಥಾನ ನೀಡಿ ಅಂತ ಆಗ್ರಹಿಸಿದ್ದಾರೆ. ಕಳಂಕ ರಹಿತ, ಸಮರ್ಥ, ವೀರಶೈವ ಲಿಂಗಾಯತನಿಗೆ ಸಿಎಂ ಸ್ಥಾನ ನೀಡಲಿ. ಆದರೆ, ನಾನು ಯಾವ ನಾಯಕನ ಹೆಸರೂ ಉಲ್ಲೇಖಿಸಲ್ಲ ಅಂತ ಶ್ರೀಗಳು ಹೇಳಿದ್ದಾರೆ. 

ಸಿಎಂ ರಾಜೀನಾಮೆ?: ಹೈಕಮಾಂಡ್‌ ಆದೇಶಕ್ಕೆ ಬದ್ಧರಾಗಿರಬೇಕು ಎಂದ ಸೋಮಶೇಖರ್‌ ರೆಡ್ಡಿ