Asianet Suvarna News Asianet Suvarna News

ಸಿಎಂ ರಾಜೀನಾಮೆ?: ಹೈಕಮಾಂಡ್‌ ಆದೇಶಕ್ಕೆ ಬದ್ಧರಾಗಿರಬೇಕು ಎಂದ ಸೋಮಶೇಖರ್‌ ರೆಡ್ಡಿ

* ಹೈಕಮಾಂಡ್‌ ತೀರ್ಮಾನಕ್ಕೆ ನಾವು ಬದ್ಧ
* ಶ್ರೀರಾಮುಲು- ಹೈಕಮಾಂಡ್‌ ಭೇಟಿ
* ರಾಜೀನಾಮೆ ಹೈಕಮಾಂಡ್‌- ಸಿಎಂಗೆ ಬಿಟ್ಟ ವಿಚಾರ
 

ಬೆಂಗಳೂರು(ಜು.22): ರಾಜೀನಾಮೆ ವಿಚಾರ ಹೈಕಮಾಂಡ್‌ ಹಾಗೂ ಮುಖ್ಯಮಂತ್ರಿಗೆ ಬಿಟ್ಟ ವಿಚಾರವಾಗಿದೆ. ಅವರಿಬ್ಬರ ಮಧ್ಯೆ ಏನಾಗುತ್ತೆ ಅಂತ ನಾವು ಶಾಸಕರ ಏನು ಹೇಳೋಕೆ ಆಗೋದಿಲ್ಲ ಅಂತ ಬಳ್ಳಾರಿ ಗ್ರಾಮೀಣ ಬಿಜೆಪಿ ಸೋಮಶೇಖರ್‌ ರೆಡ್ಡಿ ತಿಳಿಸಿದ್ದಾರೆ. ಹೈಕಮಾಂಡ್‌ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಅದಕ್ಕೆ ನಾವು ಬದ್ಧರಾಗಿರಬೇಕು ಹಾಗೂ ಶ್ರೀರಾಮುಲು ಅವರು ಹೈಕಮಾಂಡ್‌ ಜೊತೆ ಮಾತನಾಡಿದ್ದೂ ಕೂಡ ಗುಪ್ತವಾಗಿದೆ. ನಮಗೂ ಏನೂ ಅಂತ ಗೊತ್ತಾಗಿಲ್ಲ ಅಂತ ಹೇಳಿದ್ದಾರೆ. 

ರಾಜೀನಾಮೆಗೆ ಸಿದ್ಧರಾದ್ರಾ ಯಡಿಯೂರಪ್ಪ?: ಸಚಿವ ಈಶ್ವರಪ್ಪ ಪ್ರತಿಕ್ರಿಯೆ