ರೈತರ ಟ್ರ್ಯಾಕ್ಟರ್ ರ್ಯಾಲಿ ಬಗ್ಗೆ ಸಿಎಂ ಅಚ್ಚರಿ ಹೇಳಿಕೆ!

Jan 24, 2021, 1:02 PM IST

ಬೆಂಗಳೂರು (ಜ. 24): ಜ. 26 ರಂದು ನಡೆಸಬೇಕೆಂದುಕೊಂಡಿರುವ ರೈತರ ಪ್ರತಿಭಟನೆಗೆ ನನ್ನ ಅಭ್ಯಂತರ ಇಲ್ಲ. ಶಾಂತಿಯುತವಾಗಿ ಹೋರಾಟ ಮಾಡಿ. ಅಪಾರ್ಥ ಮಾಡಿಕೊಂಡು ಹೋರಾಟ ಮಾಡುವ ಅಗತ್ಯವಿಲ್ಲ.  ಬಿಜೆಪಿ ಸರ್ಕಾರ ಯಾವಾಗಲೂ ರೈತರ ಪರ ಇದೆ. ಮುಂದೆಯೂ ಇರಲಿದೆ' ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ಇನ್ನು ಪ್ರತಿಭಟನೆಗೆ ಅನುಮತಿ ಕೊಡಬೇಕೋ, ಬೇಡವೋ ಎಂದು ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ನಗರ ಆಯುಕ್ತರಾದ ಕಮಲ್ ಪಂತ್ ಹೇಳಿದ್ದಾರೆ. 

ಜ. 26 ರಂದು ರೈತ ಪ್ರತಿಭಟನೆಗೆ ಅನುಮತಿ ಸಿಗುತ್ತಾ? ಆಯುಕ್ತರ ಪ್ರತಿಕ್ರಿಯೆ ಇದು!