ಉಕ್ಕಿ ಹರಿದ ಲಕ್ಷ್ಮಣ ತೀರ್ಥ ನದಿ: ಶುಂಠಿ, ಮೆಕ್ಕೆಜೋಳ ಹಾನಿ

Aug 7, 2020, 2:11 PM IST

ಕೊಡಗು (ಆ. 07): ಕಾವೇರಿ ಕೊಳ್ಳದಲ್ಲಿ ಮಳೆ ಅರ್ಭಟ ಹೆಚ್ಚಾಗಿದೆ. ಹೊಲ ಗದ್ದೆಗಳಿಗೆ ನೀರು ನುಗ್ಗಿ ಅವಾಂತರವಾಗಿದೆ. ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿದಿದ್ದು ಅಲ್ಪ ಸ್ವಲ್ಪ ಬೆಳೆಯೂ ನಾಶವಾಗಿದೆ. ಇದೇ ಮಳೆಯಲ್ಲಿ ನೀರಿಗಿಳಿದು ಜನ ಶುಂಠಿ ಕಟಾವು ಮಾಡುತ್ತಿದ್ದಾರೆ. ಇನ್ನೊಂದು ಕಡೆ ಕೊಪ್ಪರಿಗೆಯಲ್ಲಿ ಮುಸುಕಿನ ಜೋಳವನ್ನು ಸಂಗ್ರಹಿಸುತ್ತಿದ್ದಾರೆ. ಬೆಳೆದ ಬೆಳೆ ಕಣ್ಣಾರೆ ಕೊಚ್ಚಿ ಹೋಗುವುದನ್ನು ನೋಡಿದಾಗ ರೈತರಿಗೆ ಸಂಕಟವಾಗುವುದು ಸಹಜ ಬಿಡಿ. 

ಕೊಡಗಲ್ಲಿ ಬ್ರಹ್ಮಗಿರಿ ಬೆಟ್ಟ ಸೇರಿ 20 ಕಡೆ ಭೂ ಕುಸಿತ