ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಹೋದ ಕೊರೊನಾ ವಾರಿಯರ್ಸ್‌ ಮೇಲೆ ಕಲ್ಲು ತೂರಾಟ

Jun 15, 2020, 5:22 PM IST

ಬೆಂಗಳೂರು (ಜೂ. 15): ಜನರನ್ನು ರಕ್ಷಿಸುವ ವಾರಿಯರ್ಸ್‌ಗೆ ರಕ್ಷಣೆ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಕಲಬುರ್ಗಿಯಲ್ಲಿ ಕೊರೊನಾ ವಾರಿಯರ್ಸ್‌ ಮೇಲೆ ಹಲ್ಲೆ ನಡೆದಿದೆ. ಇಲ್ಲಿನ ಕಮಲಾಪುರ ತಾಲೂಕಿನ ಮರಮಂಚಿ ತಾಂಡಾದ ಜನ ಆಶಾ ಕಾರ್ಯಕರ್ತೆಯರು, ವೈದ್ಯರ ಮೇಲೆಹಲ್ಲೆ ನಡೆಸಿದ್ದಾರೆ. 

ಹೆಚ್ಚಿದ ಕೊರೋನಾರ್ಭಟ: ಬೆದರಿದ ಬೆಂಗಳೂರು..!

ಮರಮಂಚಿ ಗ್ರಾಮದಲ್ಲಿ 15 ಮಂದಿಗೆ ಕೊರೊನಾ ಪಾಸಿಟೀವ್ ಬಂದಿದೆ. ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಅಧಿಕಾರಿಗಳು ಬಂದಿದ್ದರು. ಅವರ ಮೇಲೆ ತಾಂಡಾದ ಜನ ಕಲ್ಲು ತೂರಾಟ ನಡೆಸಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!