Republic Day 2022: ಶಕ್ತಿಧಾಮದ ಮಕ್ಕಳೊಂದಿಗೆ ಗಣರಾಜ್ಯೋತ್ಸವ ಆಚರಿಸಿದ ಶಿವಣ್ಣ

Jan 26, 2022, 1:55 PM IST

ಮೈಸೂರು(ಜ.26): ಶಕ್ತಿಧಾಮ ಮಕ್ಕಳೊಂದಿಗೆ ಡಾ. ಶಿವರಾಜ್ ಕುಮಾರ್(Shivarajkumar) ಮತ್ತು ಪತ್ನಿ ಗೀತಾ ಗಣರಾಜ್ಯೋತ್ಸವ ಆಚರಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ನಡೆಸುತ್ತಿದ್ದ ಶಕ್ತಿಧಾಮದ ಹೊಣೆಯನ್ನು ಇದೀಗ ಶಿವಣ್ಣ ಹೊತ್ತಿದ್ದಾರೆ. ಗಣ ರಾಜ್ಯೋತ್ಸವ ಆಚರಿಸಿದ ಬಳಿಕ ಮಕ್ಕಳ ಜೊತೆ ಬಸ್‌ನಲ್ಲಿಯೇ ಶಕ್ತಿಧಾಮ ಸುತ್ತಿದ ಶಿವಣ್ಣ ಮಕ್ಕಳನ್ನ ಕೂರಿಸಿಕೊಂಡು ಸ್ವತಃ ತಾವೇ ಬಸ್ ಚಲಾಯಿಸಿದ್ದಾರೆ. ಮಕ್ಕಳು ಇದನ್ನು ಸಂಭ್ರಮಿಸಿದ್ದಾರೆ.

ಶಕ್ತಿಧಾಮದ ಬಗ್ಗೆ ಕುಟುಂಬದ ನಿರ್ಧಾರವಿದು!

ಶಿವಣ್ಣ ಮಕ್ಕಳೊಂದಿಗೆ ಖುಷಿ ಖುಷಿಯಾಗಿ ಡ್ರೈವ್ ಮಾಡುತ್ತಿರುವ ವಿಡಿಯೋ ಮುದ್ದಾಗಿ ಸುಂದರವಾಗಿ ಮೂಡಿಬಂದಿದೆ. ಪುಟ್ಟ ಮಕ್ಕಳು ಶಿವಣ್ಣ ಚಾಲಕನಾದ ಬಸ್‌ನಲ್ಲಿ ಪ್ರಯಾಣಿಸಿ ಸಂಭ್ರಮಿಸಿದ್ದಾರೆ. ಬಡ ಹೆಣ್ಣುಮಕ್ಕಳಿಗಾಗಿ ಸ್ಯಾಂಡಲ್‌ವುಡ್ ಪವರ್‌ಸ್ಟಾರ್ ಪುನೀತ್ ರಾಜ್‌ ಕುಮಾರ್ ಅವರು ಆರಂಭಿಸಿದ ಶಕ್ತಿಧಾಮ ಮೈಸೂರಿನಲ್ಲಿದ್ದು ಅಲ್ಲಿ ಬಡ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.