Puneeth Rajkumar:'ಪರಮಾತ್ಮ'ನ ಆರಾಧನೆಯಲ್ಲಿ ಕರುನಾಡು: 'ಅಪ್ಪು' ನೆನಪಿನಲ್ಲಿ ಅನ್ನಸಂತರ್ಪಣೆ

Oct 29, 2022, 12:34 PM IST

ಇಂದು ಪುನೀತ್ ನಮ್ಮನ್ನು ಅಗಲಿ ಒಂದು ವರ್ಷ ಕಳೆದಿದೆ. ಇಡೀ ಕರ್ನಾಟಕವೇ ಅಪ್ಪು ಆರಾಧನೆಯಲ್ಲಿದೆ. ಅವರ ಸಮಾಧಿ ಬಳಿ ಫ್ಯಾನ್ಸ್‌ ಕಣ್ಣೀರಧಾರೆ ಹರಿಸುತ್ತಿದ್ದು, ಜೈಕಾರ ಹಾಕುತ್ತಿದ್ದಾರೆ. ಅಪ್ಪು ನೆನಪಿನಲ್ಲಿ ಅನ್ನಸಂತರ್ಪಣೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ 2 ಲಕ್ಷ ಜನರು  ಸೇರುವ ಸಾಧ್ಯತೆಯಿದ್ದು, ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಟೊಮೆಟೋ ಬಾತ್‌, ಕೇಸರಿ ಬಾತ್‌ ಮಾಡಲಾಗಿದ್ದು, ಬೆಳಗ್ಗೆ 9 ಗಂಟೆಯಿಂದ ರಾತ್ರಿ 6 ಗಂಟೆಯವರೆಗೆ ಅನ್ನಸಂತರ್ಪಣೆ ನಡೆಯಲಿದೆ.

Alia Bhatt ರಿವೀಲ್ ಆಯ್ತು ಆಲಿಯಾ ಡೆಲಿವರಿ ಡೇಟ್‌; ಈ ದಿನಾಂಕವೇ ಯಾಕೆ?