ಎಚ್‌ಡಿಕೆಯನ್ನು ಸಾಕಿದ್ದೇ ನಾನು ಎಂದ ಜಮೀರ್, ಆನೆ ನಡೆಯುವಾಗ ನಾಯಿ ಬೊಗಳುತ್ತೆ ಎಂದ ಎಚ್‌ಡಿಕೆ!

Oct 25, 2021, 3:15 PM IST

ಬೆಂಗಳೂರು (ಅ. 25): ಉಪಚುನಾವಣಾ (ByElection) ಅಖಾಡದಲ್ಲಿ ವಾಕ್ಸಮರ ಜೋರಾಗಿದೆ.  ಜೆಡಿಎಸ್‌ನಲ್ಲಿದ್ದಾಗ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರನ್ನು ಸಾಕಿದ್ದೇ ನಾನು. ಅವರಿಗಾಗಿ ನಾನು ಡ್ರೈವರ್‌ ಆಗಿದ್ದೆ. ಆದರೂ ಬ್ರದರ್‌ ಬ್ರದರ್‌ ಎನ್ನುತ್ತಲೇ ಕತ್ತು ಕೊಯ್ದರು ಎಂದು ಚಾಮರಾಜಪೇಟೆ ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ (Zameer Ahmad) ಖಾನ್‌ ಟೀಕಾ ಪ್ರಹಾರ ನಡೆಸಿದ್ದಾರೆ. ಅಲ್ಲದೆ ಜೆಡಿಎಸ್‌ನದು ಸೂಟ್‌ಕೇಸ್‌ ರಾಜಕಾರಣ. ಸಿಂದಗಿಯಲ್ಲಿ ಸೂಟ್‌ಕೇಸ್‌ ಪಡೆದುಕೊಂಡು ಮುಸ್ಲಿಂ ಅಭ್ಯರ್ಥಿ ನಿಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

'ಬೊಗಳುವ ನಾಯಿಗಳೆಲ್ಲಾ ಉತ್ತರ ನೀಡಲಿಕ್ಕೆ ಆಗುತ್ತಾ'

'ಆನೆ ನಡೆಯುವಾಗ ನಾಯಿ ಬೊಗಳಿದರೆ ಅದು ತಲೆ ಕೆಡಿಸಿಕೊಳ್ಳುತ್ತದೆಯೇ? ಹಾಗೆಯೇ ನಾನು ಪ್ರತಿಕ್ರಿಯಿಸುವುದೂ ಇಲ್ಲ, ತಲೆ ಕೆಡಿಸಿಕೊಳ್ಳುವುದೂ ಇಲ್ಲ ಎಂದು ಜಮೀರ್‌ ಅಹಮದ್‌ ಖಾನ್‌ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ನಾನು ಎಷ್ಟುಕಷ್ಟಪಟ್ಟು ಹಣ ಸಂಪಾದಿಸಿದ್ದೇನೆ ಎಂಬುದು ನಾನು ನಂಬಿದ ದೇವಿ ಚಾಮುಂಡೇಶ್ವರಿಗೆ ಗೊತ್ತು. ಅವರು ನಂಬಿರುವ ಅಲ್ಲಾನಿಗೂ ಗೊತ್ತು ಎಂದು ಹೇಳಿದ್ದಾರೆ.