Watch Video: ಆಕಾಂಕ್ಷಿಗಳಲ್ಲಿರೋದು ಆಕ್ರೋಶವೋ..? ಅಸಮಾಧಾನವೋ..? ಅತೃಪ್ತರಿಂದ ಎದುರಾಗೋದು ಬಂಡಾಯವೋ..? ದಂಗೆಯೋ..?

Mar 22, 2024, 5:15 PM IST

ರಾಜ್ಯದಲ್ಲಿ ಲೋಕಸಭಾ ಸಮರದ ತೀವ್ರತೆ ಹೆಚ್ಚಾಗ್ತಾ ಇದೆ. ಮುಂದೆ ನಡೆಯೋ ಆ ರಣಕಣದಲ್ಲಿ ಯಾರು ಗೆಲ್ತಾರೆ ಅನ್ನೋ ಕುತೂಹಲಕ್ಕಿಂತ, ಈ ಸಲ ಯಾರಿಗೆ ಟಿಕೆಟ್(Ticket) ಸಿಗಲಿದೆ ಅನ್ನೋ ಕೌತುಕವೇ ದೊಡ್ಡದಾಗಿ ಕಾಣ್ತಾ ಇದೆ. ಅದರ ಮಧ್ಯೆ ನಡೀತಿರೋ ಘಟನೆಗಳು ರಾಜ್ಯದ ಮತದಾರನ ಗಮನ ಸೆಳೀತಿವೆ. ವೀಣಾ ಕಾಶಪ್ಪನವರ್(Veena Kashappanavar) ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಪತ್ನಿ.. ಬಾಗಲಕೋಟೆ(Bagalkot) ಕ್ಷೇತ್ರದ ಕಾಂಗ್ರೆಸ್‌(Congress) ಟಿಕೆಟ್‌ ಆಕಾಂಕ್ಷಿಯಾಗಿದ್ರು. ಅಷ್ಟೇ ಅಲ್ಲ, ಕಳೆದು ಕೆಲವು ವರ್ಷದಿಂದ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಆದ್ರೆ ಹೈಕಮಾಂಡ್ ನಾಯಕರ ಮುಂದೆ ಟಿಕೆಟ್‌ ವಿಚಾರವಾಗಿ ಭೇಟಿಯಾದಾಗ ಶಾಂಕಿಗ್‌ ವಿಚಾರ ಕಾದಿತ್ತು. ಬಾಗಲಕೋಟೆಯಲ್ಲಿ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತಾ ಶಿವಾನಂದ ಪಾಟೀಲ್ ಅವರಿಗೆ ಕಾಂಗ್ರೆಸ್ ಟಿಕೆಟ್ ಫಿಕ್ಸ್ ಆಗಿದೆ ಅನ್ನೋ ಮಾತು ಸದ್ದು ಮಾಡ್ತು. ಯಾವಾಗ ಈ ಸಂಗತಿ ಗೊತ್ತಾಯ್ತೋ, ತಮಗೆ ಟಿಕೆಟ್‌ ಕೈ ತಪ್ಪಿದೆ ಅನ್ನೋದು ಕನ್ಫರ್ಮ್ ಆಗ್ತಿದ್ದ ಹಾಗೆ, ವೀಣಾ ಕಾಶಪ್ಪನವರ್  ಕಣ್ಣೀರಧಾರೆ ಸುರಿಸಿದ್ರು.

ಇದನ್ನೂ ವೀಕ್ಷಿಸಿ:  ಹುಡುಗಿ ನೋಡು ಬಾ ಎಂದು ಕರೆಸಿ ಮುಗಿಸಿಬಿಟ್ಟರು..! ತಂಗಿಯನ್ನ ಲವ್ ಮಾಡಿದಕ್ಕೇ ಕೊಂದುಬಿಟ್ಟರಾ..?