ಮೀಸಲಾತಿ ಮಧ್ಯೆ ಒಳಮೀಸಲಾತಿ ಧ್ವನಿ ಎತ್ತಿದ ಬಿಜೆಪಿ ಶಾಸಕ

Feb 23, 2021, 8:09 PM IST

ಚಿಕ್ಕಮಗಳೂರು, (ಫೆ.23): ರಾಜ್ಯದಲ್ಲಿ ವಿವಿಧ ಸಮುದಾಯಗಳು ಮೀಸಲಾತಿಗಾಗಿ ಬೀದಿಗಳಿದು ಹೋರಾಟ ಮಾಡುತ್ತಿವೆ. ಇದರಿಂದ ಬಿಎಸ್‌ವೈ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ.

ಮೀಸಲಾತಿ ಹೋರಾಟಕ್ಕೆ ಮತ್ತೊಂದು ವೇದಿಕೆ ಸಿದ್ಧ: ಡಿಸಿಎಂ ಮನೆಯಲ್ಲೇ ಆಯ್ತು ರೂಪುರೇಷೆ..! 

ಅದರಲ್ಲೂ ಪಂಚಮಸಾಲಿ ಸ್ವಾಮೀಜಿಗಳು ಸರ್ಕಾರಕ್ಕೆ ಡೆಡ್‌ಲೈನ್ ಕೊಟ್ಟಿದ್ದು, ಯಡಿಯೂರಪ್ಪಗೆ ದಿಕ್ಕುತೋಚದಂತಾಗಿದೆ. ಇದರ ಮಧ್ಯೆ ಮೀಸಲಾತಿ ಜಗಳಕ್ಕೆ ಒಳಮೀಸಲಾತಿಯೊಂದೇ ಪರಿಹಾರ ಎಂದು ಬಿಜೆಪಿ ಶಾಸಕರೊಬ್ಬರು ಧ್ವನಿ ಎತ್ತಿದ್ದಾರೆ.