ಯಾರೇ ಟಾರ್ಗೇಟ್ ಮಾಡಿದ್ರೂ ನಾನು ಹೆದರಲ್ಲ, ಎಚ್‌ಡಿಕೆಗೆ ಸಿದ್ದು ಗುದ್ದು

Mar 12, 2022, 4:31 PM IST

ಕಲಬುರಗಿ, (ಮಾ.12): ಈಗಲ್ಟನ್‌ ರೆಸಾರ್ಟ್‌ಗೆ(Eagleton Resort) ದಂಡ ವಿಧಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ನಡುವೆ ತೀವ್ರ ವಾಗ್ಯುದ್ಧ ನಡೆದಿದೆ.

ಇನ್ನು ಇದೇ ವಿಚಾರವಾಗಿ ಸಿದ್ದರಾಮಯ್ಯ ಇಂದು(ಶನಿವಾರ) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಯಾರೇ ಟಾರ್ಗೇಟ್ ಮಾಡಿದ್ರೂ ನಾನು ಹೆದರಲ್ಲ. ಕುಮಾರಸ್ವಾಮಿ ಅಲ್ಲ, ಯಾರೂ ಬಂದರೂ ಅಷ್ಟೇ ಎಂದಿದ್ದಾರೆ. 

Eagleton Resort ಬಗ್ಗೆ ಸಿದ್ದು-ಎಚ್‌ಡಿಕೆ ವಾಗ್ಯುದ್ಧ

ಈಗಲ್‌ಟನ್ ರೆಸಾರ್ಟ್‌ಗೆ ದಂಡ ಹಾಕಿದ್ದಕ್ಕೆ ಕುಮಾರಸ್ವಾಮಿಗೆ ಕೋಪ ಬಂದಿದೆ. ನನ್ನ ಕಂಡ್ರೆ ಅವರಿಗೆ ಭಯ, ಹೀಗಾಗಿ ಈ ರೀತಿ ಮಾತನಾಡುತ್ತಿದ್ದಾರೆ  ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ಟರು.