ಮಾಜಿ ಸಿಎಂಗಳು, ಮಂತ್ರಿಗಳ ಮಕ್ಕಳಿಗಷ್ಟೇ ಆಧಿಕಾರವಾ..? ಪಕ್ಷದ ವಿರುದ್ಧ ಸಿಡಿದೆದ್ದ ಬೇಳೂರು ಗೋಪಾಲ ಕೃಷ್ಣ

Oct 31, 2023, 12:21 PM IST

ಬಹುಮತದ ಸರ್ಕಾರಕ್ಕೆ ಜಿಲ್ಲೆ ಜಿಲ್ಲೆಯಲ್ಲೂ ಆತಂಕದ ಬಾಂಬ್ ಶುರುವಾಗಿದೆ. ಶಿವಮೊಗ್ಗ ಕಾಂಗ್ರೆಸ್‌ನಲ್ಲೂ ಅಸಮಾಧಾನ ಬಹಿರಂಗ ಸ್ಫೋಟವಾಗಿದೆ. ಸಚಿವ ಮಧು ಬಂಗಾರಪ್ಪ ವಿರುದ್ಧ ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣ ಸಿಡಿದೆದ್ದಿದ್ದಾರೆ. ಮಾಜಿ ಮುಖ್ಯಮಂತ್ರಿಗಳು, ಮಂತ್ರಿಗಳ ಮಕ್ಕಳಿಗಷ್ಟೇ ಆಧಿಕಾರವಾ..? ಪ್ರತಿಯೊಬ್ಬ ಸಚಿವರಿಗೂ 20 ತಿಂಗಳ ಅಧಿಕಾರ ಫಿಕ್ಸ್ ಮಾಡಿ. ಮಂತ್ರಿಗಿರಿ ಕೊಡಿ ಇಲ್ಲವೇ ಲೋಕಸಭೆಗೆ ನನಗೆ ಟಿಕೆಟ್ ಕೊಡಿ ಎಂದು ಶಾಸಕ ಬೇಳೂರು ಗೋಪಾಲ ಕೃಷ್ಣ ಒತ್ತಾಯಿಸಿದ್ದಾರೆ. ಮಾಜಿ ಸಿಎಂಗಳ ಮಕ್ಕಳ ವಿರುದ್ಧ ಸಿಡಿದೆದ್ದ ಬೇಳೂರು ಗೋಪಾಲ ಕೃಷ್ಣ. ಗೀತಾ ಶಿವರಾಜ್ ಕುಮಾರ್‌ಗೆ ಲೋಕಸಭೆ ಟಿಕೆಟ್ ಬಗ್ಗೆಯೂ ಅಪಸ್ವರ ಉಂಟಾಗಿದೆ. ಈ ಮೂಲಕ ಸಿದ್ದು ಸರ್ಕಾರದಲ್ಲಿ ಶಾಸಕರು VS ಸಚಿವರ ಸಂಘರ್ಷ ಮುಗಿದಂತೆ ಕಾಣುತ್ತಿಲ್ಲ. 

ಇದನ್ನೂ ವೀಕ್ಷಿಸಿ:  ಬೇಸಿಗೆ ಆರಂಭಕ್ಕೂ ಮುನ್ನ ಬೆಂಗಳೂರಲ್ಲಿ ನೀರಿಗೆ ಹಾಹಾಕಾರ: ಗ್ಯಾರಂಟಿ ಯೋಜನೆ ಬೇಡ ನೀರು ಕೊಡಿ ಎಂದ ಶಾಸಕ