ಒಕ್ಕಲಿಗರ ಒಡ್ಡೋಲಗದಲ್ಲಿ ಶುರುವಾಗಿದೆ ರಾಜಕೀಯ ಚದುರಂಗದಾಟ..!

May 9, 2024, 12:32 PM IST

ಬೆಂಗಳೂರು(ಮೇ.09):  ಮಗನ ಎಡವಟ್ಟಿಗೆ ಅಪ್ಪನಿಗೆ ಜೈಲು ಶಿಕ್ಷೆಯಾಗಿದೆ. ಮಗನನ್ನು ಬಚಾವ್ ಮಾಡಲು ಹೋಗಿ ಎಚ್.ಡಿ ರೇವಣ್ಣ ಜೈಲು ಸೇರಿದ್ದಾರೆ. ಪ್ರಜ್ವಲ್ ಪೆನ್'ಡ್ರೈವ್ ಪುರಾಣದಲ್ಲಿ ಎದ್ದು ನಿಂತ ಒಕ್ಕಲಿಗ ದಂಗಲ್..! ಒಕ್ಕಲಿಗರ ಒಡ್ಡೋಲಗದಲ್ಲಿ ಶುರುವಾಗಿದೆ ರಾಜಕೀಯದಾಟ..! ಡಿಕೆ ಶಿವಕುಮಾರ್ ವಿರುದ್ಧ ರೊಚ್ಚಿಗೆದ್ದ ದಳಪತಿಗಳ ಕಿಚ್ಚಿನ ಕಾಳಗ..! ಬಂಡೆ ವಿರುದ್ಧ ಮತ್ತೆ ಕೆರಳಿ ಕೆಂಡವಾದ ಕುಮಾರಸ್ವಾಮಿ..! ಡಿಕೆ ಬೆನ್ನಿಗೆ ನಿಂತ ಕೈ ಸರ್ಕಾರದ ಒಕ್ಕಲಿಗ ಮಂತ್ರಿಗಳು..! ಇವ್ನೇನು ಲಾಯರಾ, ಜಡ್ಜಾ ಅಂತ ದಳಪತಿಗೆ ಡಿಚ್ಚಿ ಕೊಟ್ಟದ್ದೇಕೆ ಡಿಕೆ ಸಾಹೇಬ..? ಎಷ್ಟೇ ಜನ ಬಂದರೂ ಏಕಾಂಗಿಯಾಗಿ ಎದುರಿಸ್ತೇನೆ ಅಂತ ಅಬ್ಬರಿಸಿದ್ದೇಕೆ ದಳಪತಿ ಎಚ್ಡಿಕೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಪೆನ್'ಡ್ರೈವ್ ಕುರುಕ್ಷೇತ್ರ.

ಕುಮಾರಸ್ವಾಮಿ ಬ್ಲಾಕ್'ಮೇಲರ್, ಕಿಂಗ್ ಆಫ್ ಬ್ಲಾಕ್'ಮೇಲ್ ಅಂತ ದಳಪತಿಗೆ ಡಿಚ್ಚಿ ಕೊಟ್ಟಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್. ಇತ್ತ ಡಿಕೆಶಿ ವಿರುದ್ಧ ದಳಪತಿಗಳು ಬೀದಿ ಕಾಳಗಕ್ಕೆ ಇಳಿದಿದ್ದಾರೆ.  ಪ್ರಜ್ವಲ್ ಪೆನ್'ಡ್ರೈವ್ ಪ್ರಕರಣ ಯಾವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗೂ ಕಮ್ಮಿಯಿಲ್ಲ. ದಿನಕ್ಕೊಂದು ಟ್ವಿಸ್ಟ್, ಕ್ಷಣಕ್ಕೊಂದು ತಿರುವು. ಮೊದ್ಲು ವೀಡಿಯೊ ಬಾಂಬ್ ಸ್ಫೋಟ, ನಂತ್ರ ವೀಡಿಯೊ ವೈರಲ್ ಮಾಡಿದವರು ಯಾರು ಅನ್ನೋ ಹುಡುಕಾಟ.. ಇದ್ರ ಮಧ್ಯೆ ರಾಜಕೀಯದಾಟ. ರಾಜಕೀಯ ಕೆಸರೆರಚಾಟದ ಮಧ್ಯೆ ಒಕ್ಕಲಿಗ ಕೋಟೆಯಲ್ಲಿ ದಳಪತಿಗಳ ಭಾರೀ ಪ್ರತಿಭಟನೆ, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ಕಿಚ್ಚು. ಅಷ್ಟಕ್ಕೂ ಒಕ್ಕಲಿಗ ಕಾರಿಡಾರ್'ನಲ್ಲೇ ದಳಪತಿಗಳು ರೊಚ್ಚಿಗೆದ್ದದ್ದು ಯಾಕೆ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

News Hour: ಕೇಸ್‌ ಮಾಡಿದ ಪುತ್ರ ಜರ್ಮನಿಗೆ, ಕಿಡ್ನಾಪ್‌ ಮಾಡಿದ ಅಪ್ಪ ಜೈಲಿಗೆ!

ಇದು ಪೆನ್'ಡ್ರೈವ್ ಕುರುಕ್ಷೇತ್ರ.. ಇಲ್ಲಿ ಒಬ್ಬರದ್ದು ಅಟ್ಯಾಕ್, ಇನ್ನೊಬ್ಬರದ್ದು ಅಟ್ಯಾಕ್'ಗೆ ಕೌಂಟರ್. ಸಂಸದ ಪ್ರಜ್ವಲ್ ರೇವಣ್ಣನ ಪೆನ್'ಡ್ರೈವ್ ಪ್ರಕರಣದ ರೂವಾರಿ, ಸೂತ್ರಧಾರ ಕಾಂಗ್ರೆಸ್ ಸರ್ಕಾರ ಅನ್ನೋದು ಜೆಡಿಎಸ್ ಆರೋಪ. ಇಡೀ ಪ್ರಕರಣದ ಹಿಂದಿರೋ ವ್ಯಕ್ತಿ ಡಿಸಿಎಂ ಡಿಕೆ ಶಿವಕುಮಾರ್ ಅಂತ ದಳಪತಿಗಳು ಆರೋಪಿಸ್ತಾ ಇದ್ದಾರೆ. ಇದೇ ವಿಚಾರ . ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಮಧ್ಯೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ.