ಪುತ್ತೂರಿನಲ್ಲಿ ಕೇಸರಿಪಡೆಗೆ ಪುತ್ತಿಲ ಟೆನ್ಷನ್: ಜಿಲ್ಲೆಗೆ ವ್ಯಾಪಿಸಿದ ಬಿಜೆಪಿ Vs ಹಿಂದುತ್ವ ಫೈಟ್

May 17, 2023, 9:42 AM IST

ಮಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು ಆಗಿದೆ. ಆದ್ರೆ ಪಕ್ಷಕ್ಕೆ ಅರುಣ್‌ ಪುತ್ತಿಲ ಟೆನ್ಷನ್‌ ಮಾತ್ರ ಕಡಿಮೆಯಾಗಿಲ್ಲ. ಪುತ್ತೂರಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅರುಣ್‌ ಪುತ್ತಿಲ ಕಣಕ್ಕಿಳಿದ್ದಿದ್ದರು. ಇದೀಗ ಪುತ್ತೂರಿನಲ್ಲಿ ಹಿಂದುತ್ವVs ಬಿಜೆಪಿ ಫೈಟ್‌ ಜೋರಾಗಿದೆ. ಸದ್ಯ ದಕ್ಷಿಣ ಕನ್ನಡದಲ್ಲಿ ಪುತ್ತಿಲ ಫಾರ್‌ ತುಳುನಾಡು ಎಂಬ ಕ್ಯಾಂಪೇನ್‌ ಆರಂಭವಾಗಿದೆ. ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ಪುತ್ತಿಲಗೆ ಟಿಕೆಟ್‌ ನೀಡುವಂತೆ ಒತ್ತಾಯ ಮಾಡಲಾಗುತ್ತಿದೆ. ನಳಿನ್‌ ಕುಮಾರ್‌ ಕಟೀಲ್‌ಗೆ ಟಿಕೆಟ್‌ ನೀಡದಂತೆ ಆಗ್ರಹಿಸಲಾಗುತ್ತಿದೆ.

ಇದನ್ನೂ ವೀಕ್ಷಿಸಿ: ಗೆಲುವಿನ ಬೆನ್ನಲ್ಲೇ ಕಾಂಗ್ರೆಸ್ ಯು ಟರ್ನ್, ಉಚಿತ ಗ್ಯಾರೆಂಟಿಗೆ ಕಂಡೀಷನ್ ಅಪ್ಲೈ!