ಮನೆಗೆ ಬೆಂಕಿ ಹಾಕಿದ ಸಂಪತ್‌ ರಾಜುಗೆ ಶಿಕ್ಷೆಯಾಗಲೇಬೇಕು : ಅಖಂಡ ಆಗ್ರಹ

Nov 11, 2020, 5:05 PM IST

ಬೆಂಗಳೂರು (ನ. 11): ಸ್ವಪಕ್ಷೀಯರ ವಿರುದ್ಧವೇ ಅಖಂಡ ಶ್ರೀನಿವಾಸ ಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

'ಮನೆಗೆ ಬೆಂಕಿ ಹಾಕಿ 3 ತಿಂಗಳಾದರೂ ಅಪರಾಧಿಗಳು ಓಡಾಡಿಕೊಂಡಿದ್ದಾರೆ. ಸಿಎಂ ಹಾಗೂ ಗೃಹ ಸಚಿವರನ್ನು ಮನವಿ ಮಾಡ್ತೀನಿ. ಸಂಪತ್‌ ರಾಜ್‌ಗೆ ಶಿಕ್ಷೆ ಆಗಬೇಕು.  ನನಗೆ ನ್ಯಾಯ ಕೊಡಿಸಿ' ಎಂದು ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ. 

ಸಿದ್ದರಾಮಯ್ಯ ಭರ್ಜರಿ ಪ್ಲಾನ್: ಬೈ ಎಲೆಕ್ಷನ್‌ನಲ್ಲಿ' ಜಾಣರಾಮಯ್ಯ' ಆದ್ರು..!

'ಡಿಕೆಶಿ ನನ್ನ ಪರ ನಿಲ್ಲಬೇಕಾಗಿತ್ತು. ಆದರೆ ಯಾಕೆ ಅವರ ಪರ ನಿಂತಿದ್ದಾರೋ ಗೊತ್ತಿಲ್ಲ. ನಮ್ಮ ಪಕ್ಷದ ಅಧ್ಯಕ್ಷರು, ಸಿಎಂ, ಎಲ್ಲ ಮುಖಂಡರಲ್ಲಿ ಮನವಿ ಮಾಡ್ತೀನಿ. ನೀವೆಲ್ಲಾ ನನ್ನ ಪರವಾಗಿ ನಿಲ್ಲಬೇಕಾಗಿದೆ.  ಸಂಪತ್ ರಾಜ್ ಅಪರಾಧಿ ಎಂದು ನಾನು ಹೇಳಬಲ್ಲೆ' ಎಂದಿದ್ದಾರೆ.