‘ಈ ಬಾರಿ ಮೋದಿ ನೋಡಿ ಓಟು, ಮುಂದಿನ ಬಾರಿ ಬಾಯಿಗೆ ಬೂಟು’

Jul 4, 2019, 1:49 PM IST

ಕಲಬುರಗಿ (ಜು.04) : ಮೋದಿ ಒಬ್ಬರು ಇಲ್ಲದೇ ಹೋಗಿದ್ದರೆ ಕರ್ನಾಟಕದ ಬಹುತೇಕ ಸಂಸದರ ಸ್ಥಿತಿ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಎಚ್ ಮುನಿಯಪ್ಪನವರಿಗಿಂತಲೂ ಭಿನ್ನವಾಗಿರುತ್ತಿರಲಿಲ್ಲ ಎಂದು ಕೆಲದಿನಗಳ ಹಿಂದೆ ನಮೋ ಬ್ರಿಗೇಡ್ ಮುಖಂಡ ಚಕ್ರವರ್ತಿ ಸೂಲಿಬೆಲೆ ಹೇಳಿದ್ದರು. ಈಗ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೂಡಾ ಅದೇ ಧಾಟಿಯಲ್ಲಿ ಬಿಜೆಪಿ ಸಂಸದರನ್ನು ಎಚ್ಚರಿಸಿದ್ದಾರೆ. 

ಕಲಬುರಗಿಯ ಅಫ್ಜಲ್‌ಪುರದಲ್ಲಿ ಆಯೋಜಿಸಲಾಗಿದ್ದ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದ ಮುತಾಲಿಕ್, ಈ ಬಾರಿ ಮೋದಿ ಮುಖ, ಗಂಡಸ್ತನನೋಡಿ ವೋಟ್ ಮಾಡಿದ್ದೇವೆ, ಸರಿಯಾಗಿ ಕೆಲಸ ಮಾಡಿ, ಇಲ್ಲದಿದ್ದರೆ ಬಾಯಿಗೆ ಬೂಟು ಹಾಕ್ತೀವಿ, ಎಂದು ಎಚ್ಚರಿಸಿದರು.