ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಂಭ್ರಮದ ಸಿದ್ಧತೆ: ಸಿಂಗಾರಗೊಂಡಿದೆ ಉಡುಪಿ

Aug 29, 2021, 5:32 PM IST

ಉಡುಪಿ(ಆ.29):  ಕೋವಿಡ್ ನಡುವೆ ಕೃಷ್ಣಜನ್ಮಾಷ್ಟಮಿ ನಡೆಯಲಿದ್ದು ಕೋವಿಡ್ ಸಂಕಟದ ನಡುವೆ ಕೃಷ್ಣಜನ್ಮಾಷ್ಟಮಿ ಹಬ್ಬ ಈ ಬಾರಿಯೂ ಸರಳವಾಗಿ ನಡೆಸಲು ಸಿದ್ಧತೆ ಮಾಡಲಾಗಿದೆ. ಸಂಪ್ರದಾಯಕ್ಕೆ ಚ್ಯುತಿ ಇಲ್ಲ, ಅಬ್ಬರಕ್ಕೆ ಅವಕಾಶವಿಲ್ಲದಂತಿದೆ ನಡೆಯಲಿದೆ ಹಬ್ಬ ಆಚರಣೆ.

ಕೊರೋನಾ ನಡುವೆ ಸಿಗುತ್ತಾ ಗಣೇಶೋತ್ಸವಕ್ಕೆ ಅನುಮತಿ

ಕೃಷ್ಣ ದರ್ಶನ ಕೈಗೊಳ್ಳಲು ಭಕ್ತರಿಗೆ ಮುಕ್ತ ಅವಕಾಶ ಇರಲಿದ್ದು ಶ್ರೀ ಕೃಷ್ಣಲೀಲೋತ್ಸವದಲ್ಲಿ ಭಾಗವಹಿಸಲು ಕಡಿವಾಣ ಹಾಕಲಾಗಿದೆ.  ಕೋವಿಡ್ ಸಂಕಟಗಳ ನಡುವೆ ಕೃಷ್ಣಜನ್ಮಾಷ್ಟಮಿ ಬಂದಿದೆ. ಕೃಷ್ಣನೂರು ಉಡುಪಿಯಲ್ಲಿ ಹೇಗಪ್ಪಾ ಹಬ್ಬ ಆಚರಿಸೋದು ಅನ್ನೋ ಉಭಯ ಸಂಕಟ ಎದುರಾಗಿದೆ. ಸಂಪ್ರದಾಯಗಳಿಗೆ ಚ್ಯುತಿ ಬಾರದಂತೆ, ಅಬ್ಬರದ ಆಚರಣೆಗೆ ಅವಕಾಶವಿಲ್ಲದಂತೆ ಹಬ್ಬ ಆಚರಿಸಲು ಕೃಷ್ಣಮಠ ಸಿದ್ದತೆ ಮಾಡಿಕೊಂಡಿದೆ. ಹಾಗಾದರೆ ಕೃಷ್ಣ ಭಕ್ತರು ಅಷ್ಟಮಿಯ ದಿನ ಉಡುಪಿಗೆ ಬರಬೇಕಾ? ಬೇಡ್ವಾ?