ಬಾಗಲಕೋಟೆ: ರನ್ನ ಸಕ್ಕರೆ ಕಾರ್ಖಾನೆಯ ಗೋಲ್‌ಮಾಲ್‌ ಬಟಾಬಯಲು..!

Sep 2, 2021, 3:18 PM IST

ಬಾಗಲಕೋಟೆ(ಸೆ.02): ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ರೈತರ ಹೆಸರಿನಲ್ಲಿ ಕೋಟ್ಯಂತರ ರೂ. ಅವ್ಯವಹಾರವಾಗಿದೆ ಅಂತ ಆರೋಪಿಸಲಾಗಿದೆ. ಹೌದು, ಜಿಲ್ಲೆಯ ರನ್ನ ಸಕ್ಕರೆ ಕಾರ್ಖಾನೆಯಲ್ಲಿ ರೈತರ ಹೆಸರಲ್ಲಿ 12 ಕೋಟಿ ರೂ. ಸಾಲ ದುರ್ಬಳಕೆಯಾಗಿದೆ. ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ ವಿರುದ್ಧ ಅವ್ಯವಹಾರದ ಆರೋಪ ಕೇಳಿ ಬಂದಿದೆ. ರಾಮಣ್ಣ ತಳೇವಾಡ ಸಚಿವ ಗೋವಿಂದ ಕಾರಜೋಳ ಅವರ ಆಪ್ತನಾಗಿದ್ದಾರೆ ಎಂದು ತಿಳಿದು ಬಂದಿದೆ. ಗೋಡೌನ್‌ ನಿರ್ಮಿಸುವುದಾಗಿ ಹೇಳಿ 12 ಕೋಟಿ ರೂ. ಸಾಲ ಮಾಡಿದ್ದಾರೆ ಅಂತ ಆರೋಪಿಸಲಾಗಿದೆ. 

ನೋ ವ್ಯಾಕ್ಸಿನ್, ನೋ ರೇಷನ್; ರೇಷನ್ ಅಂಗಡಿ ಮಾಲಿಕರ ಯಡವಟ್ಟಿಗೆ ಜನ ಕಂಗಾಲು.!