ಬಳ್ಳಾರಿಯಲ್ಲಿ ಪುನೀತ್ ರಾಜ್ ಕುಮಾರ್ ಪುತ್ಥಳಿ ಅನಾವರಣ: ಭಾವುಕರಾದ ಅಶ್ವಿನಿ

Jan 22, 2023, 10:57 AM IST

ಬಳ್ಳಾರಿ: ಬಳ್ಳಾರಿಯ ನಲ್ಲಚರಾವು ಪ್ರದೇಶದಲ್ಲಿ ಅಪ್ಪು ಪ್ರತಿಮೆ ಅನಾವರಣ ಮಾಡಲಾಗಿದೆ. ಅಪ್ಪು ಪುತ್ಥಳಿ ಕಂಡು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಭಾವುಕರಾಗಿದ್ದಾರೆ. ಬೆಂಗಳೂರು ಮೂಲದ ಅಭಿಮಾನಿ ಅರ್ಜುನ್‌ರಿಂದ ಪ್ರತಿಮೆ ತಯಾರಿ ಮಾಡಲಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕಬ್ಬಿಣ ಹಾಗೂ ಫೈಬರ್‌ ಮಿಶ್ರಣದಲ್ಲಿ ಪುತ್ಥಳಿ ನಿರ್ಮಾಣವಾಗಿದೆ. ಇನ್ನು  ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್ ಕುಮಾರ್, ಸಚಿವ ಶ್ರೀರಾಮಲು ಶಾಸಕ ಸೋಮಶೇಖರ್ ರೆಡ್ಡಿ ಭಾಗಿಯಾಗಿದ್ದರು. ಅಪ್ಪು ಪತ್ನಿ ಅಶ್ವಿನಿ ಪುತ್ಥಳಿ ಅನಾವರಣ ಮಾಡಿದರು.