ಗುರುರಾಯರ ಉತ್ತರಾಧಿ ಮಠ ಮುಳುಗಡೆ; ಜಾನುವಾರುಗಳ ರಕ್ಷಣೆಗೆ ಹರಸಾಹಸ

Oct 15, 2020, 11:29 AM IST

ಬೆಂಗಳೂರು (ಅ. 15): ಕಲ್ಬುರ್ಗಿ ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರೆದಿದೆ. ಇನ್ನೂ 2 ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮಳಖೇಡದ ಗುರುರಾಯರ ಉತ್ತರಾಧಿ ಮಠ ಭಾಗಶಃ ಮುಳುಗಡೆಯಾಗಿದೆ. ಮಳೆಯಿಂದ ಜಾನುವಾರುಗಳನ್ನು ರಕ್ಷಿಸಲು ಮಠದ ಮಹಡಿ ಮೇಲೆ ಆಶ್ರಯ ನೀಡಲಾಗಿದೆ. ಕಾಗಿಣಾ ನದಿ ತೀರದಲ್ಲಿ ನೀರು ತುಂಬಿ ಹರಿಯುತ್ತಿದೆ. ಇನ್ನೂ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 

ನಿಲ್ಲದ ಮಳೆ ಆರ್ಭಟ, ಕುಸಿಯುತ್ತಿವೆ ಮನೆಗಳು, ಕೊಚ್ಚಿ ಹೋದ ರಸ್ತೆಗಳು, ನಿಂತಲ್ಲೇ ಕುಸಿಯುತ್ತಿದೆ ಭೂಮಿ