ಕೋವಿಡ್ ಮೃತರ ಅಂತ್ಯಸಂಸ್ಕಾರ ನೆರವೇರಿಸುವ ದೇವನಹಳ್ಳಿ ವಾರಿಯರ್ಸ್

Jun 4, 2021, 7:24 PM IST

ದೇವನಹಳ್ಳಿ (ಜೂ.  04)   ಕೊರೋನಾ ವೇಳೆ ದೇವನಹಳ್ಳಿ ವಾರಿಯರ್ಸ್ ತಂಡ ಮಾನವೀಯ ಕೆಲಸ ಮಾಡಿಕೊಂಡು ಬಂದಿದೆ. ಕೋವಿಡ್ ನಿಂದ ಮೃತಪಟ್ಟ ಶವಗಳ ಅಂತ್ಯಕ್ರಿಯೆಯನ್ನು ಗೌರವಪೂರ್ಣವಾಗಿ ನಡೆಸುತ್ತಿದೆ.

ಅಂತ್ಯಸಂಸ್ಕಾರ ನಡೆದ ಹದಿನೆಂಟು ದಿನದ ಬಳಿಕ ಅಜ್ಜಿ ಪತ್ತೆ

ಆಸ್ಪತ್ರೆಗೆ ಅಂಬ್ಯುಲನ್ಸ್ ವ್ಯವಸ್ಥೆ ಮಾಡುತ್ತಿದೆ. ಬಡವರಿಗೆ, ಭಿಕ್ಷುಕರಿಗೆ ಅನ್ನದಾಸೋಹ. ಸಹ ನಡೆಸಿಕೊಂಡು ಬಂದಿದೆ. ದೇವನಹಳ್ಳಿ ಎಸಿಪಿ‌ ಶ್ರೀನಿವಾಸ್, ಎಸ್ ಐ ನಾಗರಾಜ್ ನೇತೃತ್ವದಲ್ಲಿ ದೇವನಹಳ್ಳಿ ವಾರಿಯರ್ಸ್ ತಂಡ  ಕೋವಿಡ್ ಆಸ್ಪತ್ರೆಗಳ ಬಳಿ ಸ್ವಚ್ಛತಾ ಕಾರ್ಯವನ್ನು ನೆರವೇರಿಸಿದೆ. ಈ ತಂಡದ  ಕೆಲಸಕ್ಕೊಂದು ಅಭಿನಂದನೆ ಹೇಳೋಣ.