ಕೊಪ್ಪಳ: ಸಚಿವ ಪ್ರಭು ಚೌವ್ಹಾಣ್‌ಗೆ ಕಪ್ಪು ಪಟ್ಟಿ ಪ್ರದರ್ಶನ

Sep 2, 2021, 12:43 PM IST

ಕೊಪ್ಪಳ(ಸೆ.02): ಸಚಿವ ಪ್ರಭು ಚೌವ್ಹಾಣ್‌ ಅವರಿಗೆ ಕಪ್ಪುಪಟ್ಟಿ ಪ್ರದರ್ಶಿಸಿದ ಘಟನೆ ನಗರದ ಜಿಲ್ಲಾ ಆಡಳಿತ ಭವನದ ಎದುರು ನಡೆದಿದೆ. ಸದಾಶಿವ ಆಯೋಗದ ವರದಿಯನ್ನ ಒಪ್ಪಲ್ಲ ಅಂತ ಸಚಿವ ಪ್ರಭು ಚೌವ್ಹಾಣ್‌ ಹೇಳಿದ್ದರು. ಹೀಗಾಗಿ ಸಚಿವರಿಗೆ ಮುತ್ತಿಗೆ ಹಾಕಲು ದಲಿತ ಸಂಘಟನೆಗಳು ಯತ್ನಿಸಿದ್ದಾರೆ. ಸಂಘಟನೆಯ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ವಶಕ್ಕೆ ಪಡೆದಿದ್ದಾರೆ. ಪೊಲೀಸ್‌ ಭದ್ರತೆಯಲ್ಲೇ ಡಿಸಿ ಕಚೇರಿಗೆ ಸಚಿವ ಪ್ರಭು ಚೌವ್ಹಾಣ್‌ ಬಂದಿದ್ದಾರೆ. 

ಸುಲಭ್ ಶೌಚಾಲಯಗಳಲ್ಲಿ ಅಡುಗೆ ಮನೆ; ಹೈಕೋರ್ಟ್ ತೀವ್ರ ಕಳವಳ