ಲಾಕ್‌ಡೌನ್‌: ಮಂಡ್ಯದಲ್ಲಿ ಅಧಿಕಾರಿಗಳಿಂದಲೇ ಕರ್ಫ್ಯೂ ಉಲ್ಲಂಘಣೆ

May 24, 2020, 11:52 AM IST

ಮಂಡ್ಯ(ಮೇ.24): ಅಧಿಕಾರಿಗಳೇ ಕರ್ಫ್ಯೂ ಉಲ್ಲಂಘಣೆ ಮಾಡಿರುವ ಘಟನೆ ನಗರದಲ್ಲಿ ಇಂದು(ಭಾನುವಾರ) ನಡೆದಿದೆ. ಬಿಹಾರ ಮೂಲದ ಕಾರ್ಮಿಕರನ್ನ ರೈಲಿನ ಮೂಲಕ ಬೆಂಗಳೂರಿಗೆ ಕಳುಹಿಸುತ್ತಿರುವ ಮೂಲಕ ಸರ್ಕಾರದ ಆದೇಶಗಳನ್ನ ಉಲ್ಲಂಘಣೆ ಮಾಡಿದ್ದಾರೆ. ಸುಮಾರು 50 ಕ್ಕೂ ಹೆಚ್ಚು ಕಾರ್ಮಿಕರನ್ನ ಖುದ್ದು ಜಿಲ್ಲಾಡಳಿತವೇ ಬೆಂಗಳೂರಿಗೆ ಕಳುಹಿಸುತ್ತಿದೆ.

ಚಿಕ್ಕಮಗಳೂರಿನಲ್ಲಿ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ!

ಈ ಸಂಬಂಧ ಕಾರ್ಮಿಕರನ್ನ ಬಸ್‌ ನಿಲ್ದಾಣದ ಆವರಣಲ್ಲಿ ಕೂಡಿಸಲಾಗಿದೆ. ಎಲ್ಲ ಕಾರ್ಮಿಕರಿಗೆ ನಗರದ ಪಶ್ಚಿಮ ಠಾಣೆ ಪೊಲೀಸರಿಂದ ಮಾರ್ಗಸೂಚಿಗಳನ್ನ ತಿಳಿಸಲಾಗಿದೆ.