ಕಲಬುರ್ಗಿ: BIG 3 ವರದಿ ಬಳಿಕ ಡೇಂಜರಸ್ ವಾಟರ್ ಟ್ಯಾಂಕ್‌ನಲ್ಲಿ ನೀರು ಸಂಗ್ರಹ ಸ್ಥಗಿತ

Feb 15, 2021, 4:12 PM IST

ಬೆಂಗಳೂರು (ಫೆ. 15): ಕಲಬುರ್ಗಿಯ ಅಶೋಕ ನಗರದಲ್ಲಿ ವಾಟರ್ ಟ್ಯಾಂಕ್ ಶಿಥಿಲಾವಸ್ಥಿಯಲ್ಲಿದ್ದು, ಅಪಾಯವನ್ನು ಕೈ ಬೀಸಿ ಕರೆಯುತ್ತಿತ್ತು. ಈ ಬಗ್ಗೆ ಬಿಗ್ 3 ವರದಿ ಪ್ರಸಾರದ ಬಳಿಕ ಸ್ಥಳಕ್ಕೆ ಇಂಜಿನೀಯರ್ ನರಸಿಂಹ ರೆಡ್ಡಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ನಾಳೆಯಿಂದ ಟ್ಯಾಂಕ್‌ನಲ್ಲಿ ನೀರು ಸಂಗ್ರಹವನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದಾರೆ. ಟ್ಯಾಂಕ್ ಸುತ್ತ ಜನ ಸಂಚರಿಸದಂತೆ ತಂತಿ ಬೇಲಿ ಹಾಕುವ ವ್ಯವಸ್ಥೆ ಮಾಡಿದ್ದಾರೆ.  ಜನರಿಗೆ ಬೈಪಾಸ್ ಮೂಲಕ ನೀರು ಸರಬರಾಜಿಗೆ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. 

ಬೀಳುವ ಸ್ಥಿತಿಯಲ್ಲಿದೆ ವಾಟರ್ ಟ್ಯಾಂಕ್, ಸಂಬಂಧಪಟ್ಟವರು, ಜನಪ್ರತಿನಿಧಿಗಳು ಮಾತ್ರ ಡೋಂಟ್ ಕೇರ್