ಯುವ ದಸರಾದಲ್ಲಿ ಸಿಂಧು ಮಾತಿನ ಮೋಡಿ; ಕನ್ನಡದಲ್ಲಿ ಬ್ಯಾಡ್ಮಿಂಟನ್ ತಾರೆ ಏನಂದ್ರು ನೋಡಿ

Oct 1, 2019, 8:56 PM IST

ಮೈಸೂರು (ಅ.01): ಮೈಸೂರಿನಲ್ಲಿ ಯುವ ದಸರಾ ಇಂದಿನಿಂದ ಆರಂಭವಾಗಿದ್ದು, ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಮೈಸೂರು ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಇತರರು ಭಾಗವಹಿಸಿದರು. 

ಇದೆಲ್ಲದರ ನಡುವೆ ಮೂರನೇ ದಿನದ ಯುವ ದಸರಾಗೆ ಮಳೆ ಕೊಂಚ ಅಡ್ಡಿಯಾಯಿತು. ಆದ್ರೂ ಮಳೆಯಲ್ಲೆ ನಿಂತು ಪ್ರೇಕ್ಷಕರು ಕಾರ್ಯಕ್ರಮವನ್ನು ವೀಕ್ಷಿಸಿದ್ರು. ಒಟ್ಟಾರೆ ಮೂರನೇ ದಿನದ ಮೈಸೂರು ದಸರಾ ಯಾವುದೇ ಅಡೆತಡೆ ಇಲ್ಲದೆ ಸುಸೂತ್ರವಾಗಿ ನಡೆದಿದೆ.

ಈ ಸಂದರ್ಭದಲ್ಲಿ ಕನ್ನಡದಲ್ಲಿ ಮಾತನ್ನು ಆರಂಭಿಸಿದ ಸಿಂಧು , ಮೈಸೂರು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬನ್ನಿ ಅವರು ಏನಂದ್ರು ನೋಡೋಣ...